ಆ್ಯಪ್ನಗರ

ಮಹಿಳೆಯರಿಗೆ ಮತದಾನ ಜಾಗೃತಿ

ರಟ್ಟೀಹಳ್ಳಿ: ಮತದಾನದ ಹಕ್ಕು ಹೊಂದಿದ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು ಎಂದು ಕಡೂರು ಗ್ರಾ.ಪಂ. ಪಿಡಿಒ ನಾಗರತ್ನಾ ಮುದ್ದಪ್ಪಳವರ ಹೇಳಿದರು.

Vijaya Karnataka 22 Mar 2019, 5:00 am
ರಟ್ಟೀಹಳ್ಳಿ: ಮತದಾನದ ಹಕ್ಕು ಹೊಂದಿದ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು ಎಂದು ಕಡೂರು ಗ್ರಾ.ಪಂ. ಪಿಡಿಒ ನಾಗರತ್ನಾ ಮುದ್ದಪ್ಪಳವರ ಹೇಳಿದರು.
Vijaya Karnataka Web HVR-21 RATTIHALLI  1


ತಾಲೂಕಿನ ಕಡೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಜರುಗಿದ ತಾಯಿಂದರ ದಿನ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಾಯಂದರು ಮತದಾನ ದಿನ ಏನೇ ಕೆಲಸವಿದ್ದರೂ ಬಿಡುವು ಮಾಡಿಕೊಂಡು ತಪ್ಪದೇ ಮತದಾನ ಮಾಡಬೇಕು. ಜತೆಗೆ ನಿಮ್ಮ ಸುತ್ತಮುತ್ತಲಿನ ಜನರಿಗೂ ತಪ್ಪದೇ ಮತದಾನ ಮಾಡುವಂತೆ ತಿಳಿಸಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಪಿಡಿಒ ಮತದಾನದ ಪ್ರತಿಜ್ಞಾವಿಧಿ ಭೋದಿಸಿದರು. ಅಂಗನವಾಡಿ ಮೇಲ್ವಿಚಾರಕಿ ದ್ರಾಕ್ಷಾಯಿಣಿ ಕೆ.ಎನ್‌., ಗ್ರಾ.ಪಂ.ಕಾರ್ಯದರ್ಶಿ ಎಸ್‌.ಕೆ.ಚಿಕ್ಕಣ್ಣನವರ, ಎನ್‌.ಎಚ್‌.ಸುಣಗಾರ, ರಾಜು ನದಾಪ, ಸುಶೀಲಾ ಮೂಲಿಮನಿ, ಕೆ.ಎಚ್‌.ಕಮತಳ್ಳಿ. ಅಂಗನವಾಡಿ ಕಾರ‍್ಯಕರ್ತೆ ಶಾರದಾ ಎಂ.ಎನ್‌., ರತ್ನಾ ಶಿರಗಂಬಿ, ಸವಿತಾ ಶೇತಸನದಿ, ವನಿತಾ ಗಂಟೆಪ್ಪಗೌಡ್ರ, ಎನ್‌.ಎಸ್‌.ರಾಧಾ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ