ಆ್ಯಪ್ನಗರ

ಕಾಂಗ್ರೆಸ್‌ ಬೆಂಬಲಿಸಲು ವಡ್ಡರ ಮನವಿ

ಶಿಗ್ಗಾವಿ: ದಲಿತ, ಹಿಂದುಳಿದ ವರ್ಗದವರನ್ನು ನಿರ್ಲಕ್ಷ ್ಯ ಮಾಡುತ್ತಿರುವ ಮತ್ತು ಪ್ರಸ್ತುತ ಚುನಾವಣೆಯಲ್ಲಿ ಕುರಬ ಸಮಾಜಕ್ಕೆ ಟಿಕೆಟ್‌ ನೀಡದ ಬಿಜೆಪಿ ಸೋಲಿಸಿ, ಕಾಂಗ್ರೆಸ್‌ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ದಲಿತ ಮುಖಂಡ ಮಹಾದೇವಪ್ಪ ವಡ್ಡರ ಮನವಿ ಮಾಡಿದರು.

Vijaya Karnataka 22 Apr 2019, 5:00 am
ಶಿಗ್ಗಾವಿ: ದಲಿತ, ಹಿಂದುಳಿದ ವರ್ಗದವರನ್ನು ನಿರ್ಲಕ್ಷ ್ಯ ಮಾಡುತ್ತಿರುವ ಮತ್ತು ಪ್ರಸ್ತುತ ಚುನಾವಣೆಯಲ್ಲಿ ಕುರಬ ಸಮಾಜಕ್ಕೆ ಟಿಕೆಟ್‌ ನೀಡದ ಬಿಜೆಪಿ ಸೋಲಿಸಿ, ಕಾಂಗ್ರೆಸ್‌ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ದಲಿತ ಮುಖಂಡ ಮಹಾದೇವಪ್ಪ ವಡ್ಡರ ಮನವಿ ಮಾಡಿದರು.
Vijaya Karnataka Web want appeal to congress
ಕಾಂಗ್ರೆಸ್‌ ಬೆಂಬಲಿಸಲು ವಡ್ಡರ ಮನವಿ


ಭಾನುವಾರ ಪಟ್ಟಣದಲ್ಲಿ ನಡೆದ ಅಹಿಂದ ವರ್ಗದ ಸಮಾನ ಮನಸ್ಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆರ್ಥಿಕ ಮತ್ತು ರಾಜಕೀಯವಾಗಿ ಸದೃಢತೆ ಹೊದಿದ ಸಣ್ಣ, ಪುಟ್ಟ ಸಮಾಜಗಳ ಏಳ್ಗೆಗೆ ಶ್ರಮಿಸುವ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಲಕರ್ಣಿ ಅವರನ್ನು ಬೆಂಬಲಿಸಿ, ನಿರ್ಲಕ್ಷ ್ಯ ಮಾಡಿದ ಮತ್ತು ದೊಡ್ಡ ಜನಸಂಖ್ಯೆ ಹೊಂದಿದ ಕುರುಬ ಸಮಾಜಕ್ಕೆ ಟಿಕೆಟ ನೀಡದಿರುವ ಬಿಜೆಪಿ ಸೋಲಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ವಿವಿಧ ಸಮಾಜಗಳ ಮುಖಂಡರಾದ ನಾಗರಾಜ ಹಾವೇರಿ, ಎನ್‌.ಬಿಕಟಗಿ, ಪುರಸಭೆ ಮಾಜಿ ಅಧ್ಯಕ್ಷ ರಾದ ರಾಮಣ್ಣ ರಾಣೋಜಿ, ಸತೀಶ ಆಲದಕಟ್ಟಿ, ಹನುಮಂತ ಬಂಡಿವಡ್ಡರ, ಎ.ಎ.ಗಂಜೇನವರ, ದಾವಲಸಾಬ ಹುಬ್ಬಳ್ಳಿ, ಪುಟ್ಟಪ್ಪ ಕಟ್ಟಿಮನಿ, ಕಾಳಪ್ಪ ಬಡಿಗೇರ, ಶಿದ್ದಪ್ಪ ಹರಿಜನ, ಕುಬೇರಪ್ಪ ರಾಮನಕೊಪ್ಪ, ಹೊನ್ನಪ್ಪ ಹಾಳಿ, ಖಂಡೆಪ್ಪ ಉದೋಜಿ, ಸುರೇಶ ಸರ್ಜಾಪೂರ, ಪರಶುರಾಮ ಕಾಳೆ, ಅಣ್ಣಪ್ಪ ಲಮಾಣಿ, ವೆಂಕಟಸಿಂಗ್‌ ಮುಳಗುಂದ, ಗಂಗಪ್ಪ ಧಾರವಾಡ, ಮಂಜುನಾಥ ದೊಡ್ಮನಿ, ಅಶೋಕ ದೊಡ್ಮನಿ, ರಾಮಣ್ಣ ಬೆಳವುಂಕಿ, ಮಹಾದೇವಪ್ಪ ಉಂಕಿ, ನಾಗರಾಜ ಈಳಿಗೇರ, ಮಾಲತೇಶ ತಳವಾರ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ