ಆ್ಯಪ್ನಗರ

ಮಕ್ಕಳ ಗ್ರಂಥಾಲಯಕ್ಕೆ ಉದ್ಘಾಟನೆ ಭಾಗ್ಯ ಎಂದು?

ಬಸವರಾಜ ಸರೂರ ರಾಣೇಬೆನ್ನೂರ: ಮಕ್ಕಳ ಜ್ಞಾನವೃದ್ಧಿಗೆ ಅನುಕೂಲವಾಗಲೆಂದು ಇಲ್ಲಿನ ನಗರಸಭೆ ಕಚೇರಿ ಅಣತಿ ದೂರದಲ್ಲಿ ಮಕ್ಕಳ ಗ್ರಂಥಾಲಯವನ್ನು ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣಗೊಂಡು ಗ್ರಂಥಾಲಯ ಇಲಾಖೆಗೆ ಹಸ್ತಾಂತರ ಮಾಡಿ ಸುಮಾರು ಒಂದು ವರ್ಷ ಗತಿಸಿದರೂ ಇಂದಿಗೂ ಅದು ಬಳಕೆಯಾಗಿಲ್ಲ.

Vijaya Karnataka 12 Jul 2019, 5:00 am
ಬಸವರಾಜ ಸರೂರ ರಾಣೇಬೆನ್ನೂರ: ಮಕ್ಕಳ ಜ್ಞಾನವೃದ್ಧಿಗೆ ಅನುಕೂಲವಾಗಲೆಂದು ಇಲ್ಲಿನ ನಗರಸಭೆ ಕಚೇರಿ ಅಣತಿ ದೂರದಲ್ಲಿ ಮಕ್ಕಳ ಗ್ರಂಥಾಲಯವನ್ನು ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣಗೊಂಡು ಗ್ರಂಥಾಲಯ ಇಲಾಖೆಗೆ ಹಸ್ತಾಂತರ ಮಾಡಿ ಸುಮಾರು ಒಂದು ವರ್ಷ ಗತಿಸಿದರೂ ಇಂದಿಗೂ ಅದು ಬಳಕೆಯಾಗಿಲ್ಲ.
Vijaya Karnataka Web HVR-11RNR2


ಮಕ್ಕಳ ಗ್ರಂಥಾಲಯ ಕಟ್ಟಡವನ್ನು 15 ಲಕ್ಷ ರೂ.ಗಳ ವೆಚ್ಚದಲ್ಲಿ ಕರ್ನಾಟಕ ರೂರಲ್‌ ಇನ್‌ಫ್ರಾಸ್ಟ್ರಚ್ಚರ್‌ ಡೆವಲೆಪ್‌ಮೆಂಟ್‌ ಲಿಮಿಟೆಡ್‌ (ಕೆಆರ್‌ಐಡಿಎಲ್‌) ವತಿಯಿಂದ 2017-18ನೇ ಸಾಲಿನಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಗ್ರಂಥಾಲಯ ಇಲಾಖೆಗೂ ಹಸ್ತಾಂತರ ಮಾಡಲಾಗಿದೆ. ಆದರೆ ಕೆಲವೊಂದು ಸಣ್ಣಪುಟ್ಟ ಕಾರಣಗಳಿಂದ ಅದು ಬಳಕೆಗೆ ಲಭ್ಯವಾಗುವುದು ವಿಳಂಬವಾಗಿದೆ.

ಬೀದಿ ಬದಿ ಹೋಟೆಲ್‌ಗಳ ಬಳಕೆ: ಗ್ರಂಥಾಲಯಕ್ಕೆ ಸೇರಿದ ಜಾಗೆಯಲ್ಲಿ ಬೀದಿ ಬದಿ ಹೋಟೆಲ್‌ಗಳು ಉದ್ದಿಮೆ ನಡೆಸುತ್ತಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಇದರ ಬಗ್ಗೆ ಈಗಾಗಲೇ ಇಲಾಖೆ ಅಧಿಕಾರಿಗಳು ನಗರಸಭೆಗೆ ದೂರು ನೀಡಿದರೂ ನಗರಸಭೆ ಅಧಿಕಾರಿಗಳು ಮಾತ್ರ ಅವರನ್ನು ತೆರವುಗೊಳಿಸಲು ಮೀನ ಮೇಷ ಮಾಡುತ್ತಿದ್ದಾರೆ ಎಂಬುದು ಹೆಸರು ಗ್ರಂಥಾಲಯ ಸಿಬ್ಬಂದಿ ಆರೋಪವಾಗಿದೆ. ಗ್ರಂಥಾಲಯದ ಪಕ್ಕದಲ್ಲಿ ಜಾಗೆ ಖಾಲಿಯಿರುವುದರಿಂದ ಇದೀಗ ನಗರಕ್ಕೆ ನಿರಂತರ ನೀರು ಪೂರೈಕೆ ಯೋಜನೆಯ ಭಾರಿ ಗಾತ್ರದ ಪೈಪುಗಳನ್ನು ಅಲ್ಲಿ ಶೇಖರಣೆ ಮಾಡಲಾಗಿದೆ.

ಕಾಂಪೌಂಡ್‌ ಅಗತ್ಯ: ಇದು ಮಕ್ಕಳ ಗ್ರಂಥಾಲಯ ಆಗಿರುವುದರಿಂದ ಇಲ್ಲಿ ಪುಸ್ತಕಗಳ ಜತೆಯಲ್ಲಿ ಆಟಿಕೆ ಸಾಮಗ್ರಿಗಳನ್ನು ಕೂಡ ಅಳವಡಿಸಬೇಕಾಗಿದೆ. ಅದಕ್ಕಾಗಿ ಕಾಂಪೌಂಡ್‌ ನಿರ್ಮಿಸುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಇಲಾಖೆಯ ಹಿರಿಯ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಯೊಂದಿಗೆ ಪತ್ರ ವ್ಯವಹಾರ ಮಾಡಿದ್ದಾರೆ. ಇದಲ್ಲದೆ ಕಾಂಪೌಂಡ್‌ ನಿರ್ಮಾಣಕ್ಕಾಗಿ ಗ್ರಂಥಾಲಯ ಇಲಾಖೆ ವತಿಯಿಂದ ಎರಡು ಲಕ್ಷ ಹಣವನ್ನು ಕೂಡ ಭರಿಸಲಾಗಿದೆ.

ಆದಷ್ಟು ಶೀಘ್ರ ಕಟ್ಟಡವನ್ನು ಉದ್ಘಾಟಿಸಿ ಮಕ್ಕಳ ಬಳಕೆಗೆ ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ