ಆ್ಯಪ್ನಗರ

ವರದಾ ನದಿಯಿಂದ 17 ಕೆರೆಗಳಿಗೆ ನೀರು

ಹಾನಗಲ್ಲ: ತಾಲೂಕಿನಲ್ಲಿ ಹರಿದಿರುವ ವರದಾ, ಧರ್ಮಾ ನದಿ ನೀರು ಬಳಸಿ ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು, ಕೇಂದ್ರ ಸರಕಾರದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.

Vijaya Karnataka 5 Aug 2019, 5:00 am
ಹಾನಗಲ್ಲ: ತಾಲೂಕಿನಲ್ಲಿ ಹರಿದಿರುವ ವರದಾ, ಧರ್ಮಾ ನದಿ ನೀರು ಬಳಸಿ ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು, ಕೇಂದ್ರ ಸರಕಾರದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.
Vijaya Karnataka Web HVR-04HGL1


ತಾಲೂಕಿನ ಬ್ಯಾಗವಾದಿ ಗ್ರಾಮ ಹತ್ತಿರ ವರದಾ ನದಿಯಿಂದ ನೀರೆತ್ತುವ ಬಸಾಪೂರ ಏತ ನೀರಾವರಿ ಯೋಜನೆಯ 2 ನೇ ಹಂತದ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ನೀರಾವರಿ ನಿಗಮದಿಂದ 30 ಕೋಟಿ ರೂ. ವೆಚ್ಚದಲ್ಲಿ ಬಸಾಪೂರ 2 ನೇ ಹಂತದ ಏತ ನೀರಾವರಿ ಯೋಜನೆಯ ಕಾಮಗಾರಿ ಶೇ. 80 ರಷ್ಟು ಪೂರ್ಣಗೊಂಡಿದ್ದು, ಸದ್ಯ ವರದಾ ನದಿಯ ನೀರು ಈ ಭಾಗದ ಸೋಮಸಾಗರ ಗ್ರಾಮ ವ್ಯಾಪ್ತಿಯ 6 ಕೆರೆಗಳು ಮತ್ತು ಗುಡ್ಡದ ಮುಳಥಳ್ಳಿ ಗ್ರಾಮದ 5 ಕೆರೆಗಳನ್ನು ತುಂಬಿಸಲು ಚಾಲನೆ ನೀಡಲಾಗಿದೆ ಎಂದರು.

ನೀರಾವರಿ ನಿಗಮದ ಎಇಇ ಸುರೇಶ ಮಾತನಾಡಿ, ಕೃಷ್ಣ ಕೊಳ್ಳದ ನೀರು ಹಂಚಿಕೆ ಪ್ರಕಾರ ವರದಾ ನದಿ ನೀರು ಸುತ್ತಲಿನ ಕೆರೆ-ಕಟ್ಟೆಗಳಿಗೆ ಹರಿಸುವ ಯೋಜನೆ ಯಶಸ್ವಿಯಾಗಿದೆ. ಬಸಾಪೂರ 2 ನೇ ಹಂತದ ಏತ ನೀರಾವರಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಕ್ಕೆ ಬಂದ ಬಳಿಕ 11 ಗ್ರಾಮಗಳ 17 ಕೆರೆ ತುಂಬಸಲು ಮತ್ತು 2740 ಎಕರೆ ಕೃಷಿ ಭೂಮಿ ನೀರಾವರಿಗೆ ಒಳಪಡುತ್ತದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಸ್‌.ಅಕ್ಕಿವಳ್ಳಿ, ಮುಖಂಡರಾದ ಶಿವಲಿಂಗಪ್ಪ ತಲ್ಲೂರ, ಸಿದ್ಧಲಿಂಗಪ್ಪ ಶಂಕ್ರಿಕೊಪ್ಪ, ನೀರಾವರಿ ನಿಗಮದ ಎಂಜನಿಯರ್‌ ಮಧುಕುಮಾರ, ಕಿರಣ ನಾಯ್ಕ, ದೇವರಾಜ ಇದ್ದರು.

ತಾಲೂಕಿನ ಹೆಗ್ಗಳಿಕೆ :
ಬಸಾಪೂರ ಮೊದಲ ಹಂತದ ಏತ ನೀರಾವರಿ ಯೋಜನೆ 10 ವರ್ಷಗಳ ಹಿಂದೆ ಅನುಷ್ಠಾನಕ್ಕೆ ಬಂದಿದ್ದು, ಇದು ತಾಲೂಕಿನ ಪ್ರಥಮ ಏತ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆ ಪಡೆದಿದೆ. ತಾಲೂಕಿನ ತಾವರೆಗೊಪ್ಪ, ವಾಸನ, ಬಸಾಪೂರ, ಕಲಕೇರಿ, ಬ್ಯಾಗವಾದಿ, ಹೇರೂರ ಗ್ರಾಮಗಳ 11 ಕೆರೆಗಳಿಗೆ ವರದಾ ನದಿ ನೀರು ತುಂಬಿಸುವ ಬಸಾಪೂರ ಏತ ನೀರಾವರಿ ಯೋಜನೆ ಯಶ ಕಂಡ ಬೆನ್ನಲ್ಲೆ 2 ನೇ ಹಂತದ ಯೋಜನೆ ಆರಂಭ ಪಡೆದಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಯೋಜನೆ ಮಂದಗತಿಯಲ್ಲಿ ಸಾಗಿತ್ತು.

ಎಲ್ಲ ಅಡೆತಡೆಗಳನ್ನು ನಿವಾರಿಸಿ 2 ನೇ ಹಂತದ ಯೋಜನೆ ಸದ್ಯ ಶೇ. 80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ನೀರಾವರಿ ನಿಗಮದ ಎಂಜನಿಯರ್‌ ಸುರೇಶ ಹೇಳಿದ್ದಾರೆ.

ರೂ. 30 ಕೋಟಿಯ ಈ ಯೋಜನೆಯಿಂದ ಹಾನಗಲ್ಲ ತಾಲೂಕಿನ ಸೋಮಸಾಗರ, ಬ್ಯಾಗವಾದಿ, ಉಪ್ಪಣಶಿ, ಹಿರೇಬಾಸೂರ, ಡೊಮ್ಮನಾಳ, ಗುಡ್ಡದ ಮುಳಥಳ್ಳಿ, ಮುಳಥಳ್ಳಿ ಗ್ರಾಮಗಳ ಕೃಷಿ ಭೂಮಿ ನೀರಾವರಿಗೆ ಒಳಪಡಲಿದೆ. ಅಂತರ್ಜಲಮಟ್ಟ ಹೆಚ್ಚಳಕ್ಕೆ ಕಾರಣವಾಗಲಿದೆ. ಹಾವೇರಿ ತಾಲೂಕಿನ ತಿಮ್ಮಾಪೂರ, ಕಬ್ಬೂರ, ನಾಜೀಕಲ್ಮಾಪೂರ, ದಿಡಗೂರ ಗ್ರಾಮಗಳ ಕೆರೆಗಳನ್ನು ತುಂಬಿಸುವ ಯೋಜನೆ ಹೊಂದಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ