ಆ್ಯಪ್ನಗರ

ಕಾಕೋಳದಲ್ಲಿ ಜಲ ಶಕ್ತಿ ಅಭಿಯಾನ

ಕಾಕೋಳ : ರಾಣೆಬೆನ್ನೂರ ತಾಲೂಕಿನ ಕಾಕೋಳ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಮಳೆಗಾಲದಲ್ಲಿ ಹರಿದು ಹೋಗುವ ನೀರು ಸಂಗ್ರಹಿಸಲು ಜಲ ಶಕ್ತಿ ಅಭಿಯಾನ ಮಾಡಲಾಯಿತು.

Vijaya Karnataka 17 Jul 2019, 5:00 am
ಕಾಕೋಳ : ರಾಣೆಬೆನ್ನೂರ ತಾಲೂಕಿನ ಕಾಕೋಳ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಮಳೆಗಾಲದಲ್ಲಿ ಹರಿದು ಹೋಗುವ ನೀರು ಸಂಗ್ರಹಿಸಲು ಜಲ ಶಕ್ತಿ ಅಭಿಯಾನ ಮಾಡಲಾಯಿತು.
Vijaya Karnataka Web water power campaign in kakola
ಕಾಕೋಳದಲ್ಲಿ ಜಲ ಶಕ್ತಿ ಅಭಿಯಾನ


ರಾಜುಗೌಡ ಪಾಟೀಲ ಮಾತನಾಡಿ, ನೀರು ಮನುಷ್ಯರಿಗೆ ಎಷ್ಟು ಅವಶ್ಯಕತೆ ಹಾಗೂ ಅದರ ಉಪಯೋಗ ಏನು ಎಂದು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮ ಸರಕಾರ ಕೈಗೊಂಡಿದೆ. ನೀರಿನಿಂದಲೇ ನಮ್ಮ ದೈನಂದಿನ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಹಾಗಾಗಿ ಅನವಶ್ಯಕವಾಗಿ ನೀರು ಬಳಕೆ ಮಾಡದೆ ಬಳಕೆಗೆ ಬೇಕಿರುವಷ್ಟು ಬಳಸಬೇಕು. ಇಂದು ಅರಣ್ಯ ಅತೀ ಹೆಚ್ಚು ನಾಶವಾಗಿರುವ ಕಾರಣ ಸಾವಿರ ಅಡಿಯಷ್ಟು ಆಳವಾಗಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗಲಾರದಂತಹ ದುಸ್ಥಿತಿ ಬಂದಿದೆ. ಅಂತರ್ಜಲ ಆಳವಾಗಿ ಹೋಗಲು ಕಾರಣವೆಂದರೆ ಕಾಡು ನಾಶ, ಮಣ್ಣಿನ ಸವಕಳಿ, ಅತೀಯಾಗಿ ಕೊಳವೆ ಬಾವಿಗಳನ್ನು ಕೊರೆಸುವುದು, ಮಳೆಗಾಲದ ನೀರು ಇಂಗಿಸಲು ಆಗದೇ ಇರುವುದರಿಂದ ಇಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.

ಮಾಲತೇಶ ಶಿಡಗನಾಳ ಮಾತನಾಡಿ, ಮಕ್ಕಳು ಮುಂದೆ ದೇಶಕ್ಕೆ ಯುವ ಶಕ್ತಿಯಾಗಿ ಬಾಳಬೇಕಾಗಿದೆ, ನೀವು ಹಣಕ್ಕಾಗಿ ಹೋರಾಟ ಮಾಡದೇ ನೀರಿಗಾಗಿ ಹೋರಾಟ ಮಾಡಿ ಅದರ ಜಾಗೃತಿಯನ್ನು ಮನೆ ಮನೆಗೆ ತಲುಪುವಂತೆ ಮಾಡಬೇಕಾಗಿದೆ. ನೀರು ನಲ್ಲಿಯಲ್ಲಿ ಹರಿಯುತ್ತಿದ್ದರೆ ನೀವು ಪೋಲಾಗುವುದನ್ನು ತಡೆಯಲು ಪ್ರಯತ್ನಿಸಿ ಇಲ್ಲವೇ ಶಾಲೆ ಶಿಕ್ಷ ಕರಿಗೆ ತಿಳಿಸಿದರೆ ಅವರು ಗ್ರಾಪಂಗೆ ತಿಳಿಸುವುದರಿಂದ ಎಲ್ಲರೂ ಸೇರಿ ನೀರು ಪೋಲಾಗದಂತೆ ನೋಡಿಕೊಳ್ಳಬಹುದು ಎಂದರು.

ಪಿಡಿಒ ವೀರಣ್ಣ ಜಾಲವಾಡಿ ಮಾತನಾಡಿ, ನೀರು ಅನವಶ್ಯಕವಾಗಿ ಪೋಲಾಗುತ್ತಿದ್ದರೆ ಗ್ರಾಪಂ ಸಿಬ್ಬಂದಿಗೆ ತಿಳಿಸಿ, ಮುಂದಿನ ಭವಿಷ್ಯಕ್ಕೆ ನೀರಿನ ಬವಣೆ ಬರಲಾರದಂತೆ ಮಳೆಗಾಲದ ನೀರನ್ನು ಶೇಖರಣೆಯ ಜತೆಗೆ ಮನೆಗೊಂದು ಮರ ಪ್ರತಿಯೊಬ್ಬರು ಬೆಳೆಸಬೇಕು, ಅದು ನೀರು ಹೆಚ್ಚೂ ಹರಿದು ಹೋಗದಂತೆ ತಡೆದು ಬೇರಿನ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿ ಮಾಡುತ್ತದೆ ಎಂದರು. ಸರಕಾರಿ ಶಾಲೆಯ ಮುಖ್ಯ ಶಿಕ್ಷ ಕ ಪ್ರಕಾಶ ಹೊಸಳ್ಳಿ, ಬಸವರಾಜ ಹವಳೆಪ್ಪನವರ, ಸದಸ್ಯ ಷಣ್ಮುಖಪ್ಪ, ಮಹದೇವಪ್ಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ