ಆ್ಯಪ್ನಗರ

ನೀರು ಶುದ್ಧೀಕರಣ ಘಟಕ ದುರಸ್ಥಿಗೆ ಆಗ್ರಹ

ಬ್ಯಾಡಗಿ : ಕುಡಿಯುವ ನೀರು ಶುದ್ಧೀಕರಣ ಘಟಕ ದುರಸ್ಥಿಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಕದರಮಂಡಲಗಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಾರಾರ‍ಯಲಯದ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

Vijaya Karnataka 31 May 2020, 5:00 am
ಬ್ಯಾಡಗಿ : ಕುಡಿಯುವ ನೀರು ಶುದ್ಧೀಕರಣ ಘಟಕ ದುರಸ್ಥಿಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಕದರಮಂಡಲಗಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಾರಾರ‍ಯಲಯದ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
Vijaya Karnataka Web water purification plant demands repair
ನೀರು ಶುದ್ಧೀಕರಣ ಘಟಕ ದುರಸ್ಥಿಗೆ ಆಗ್ರಹ


ರೈತ ಸಂಘದ ಮುಖಂಡ ಶಶಿಧರಸ್ವಾಮಿ ಛತ್ರದಮಠ ಮಾತನಾಡಿ, ಕಳೆದ 15 ದಿನದಿಂದ ಗ್ರಾಮದಲ್ಲಿಶುದ್ಧಿಕರಣ ಮಾಡುವ ಯಂತ್ರ ಕೆಟ್ಟಿದೆ, ಆದರೆ ಈವರೆಗೂ ದುರಸ್ಥಿ ಕಾರ‍್ಯಕ್ಕೆ ಸ್ಥಳೀಯ ಗ್ರಾಪಂ ಅಥವಾ ಜಿಪಂ ಎಂಜಿನಿಯರಿಂಗ್‌ (ನೀರು ಪೂರೈಕೆ) ವಿಭಾಗ ಕೈಗೊಂಡಿಲ್ಲ, ಇದರಿಂದ ಗ್ರಾಮಸ್ಥ ರಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಕೃಷಿ ಪ್ರಧಾನವಾದ ಸದರಿ ಗ್ರಾಮದಲ್ಲಿಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಇಡೀ ದಿವಸ ಕೃಷಿಭೂಮಿ ಹಸನುಗೊಳಿಸುವುದು ಬಿತ್ತನೆ ಮಾಡುವುದು ಇನ್ನಿತರ ಕಾರ‍್ಯಗಳಿಗೆ ತೆರಳಬೇಕಾಗಿದೆ. ಆದರೆ. ಶುದ್ಧ ಕುಡಿಯುವ ನೀರಿಗಾಗಿ ಬೇರೆ ಬೇರೆ ಗ್ರಾಮಗಳಿಗೆ ತೆರಳಬೇಕಾಗಿದ್ದು ಕೃಷಿ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಅನಿವಾರ‍್ಯತೆಯಲ್ಲಿನಾವಿದ್ದೇವೆ ಎಂದರು.

ಇಲ್ಲಿಯವರೆಗೂ ಶುದ್ಧಗೊಳಿಸಿದ ನೀರು ಕುಡಿದಿರುವ ನಮಗೆ ಬೇರೆ ನೀರು ಕುಡಿದಲ್ಲಿಅನಾರೋಗ್ಯದ ಭಯವಿದೆ, ಬೇಸಿಗೆ ವೇಳೆ ನೀರಿನ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ಸರಕಾರ ಕೊರೊನಾ ದಂತಹ ಭೀಕರತೆಯ ನಡುವೆಯೂ ಕುಡಿಯುವ ನೀರಿಗಾಗಿ ಅನುದಾನ ಮೀಸಲಿಟ್ಟಿದೆ. ಅದಾಗ್ಯೂ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಗ್ರಾಮದ ಜನತೆ ಶುದ್ಧ ನೀರಿನಿಂದ ವಂಚಿತರಾಗುವಂತಾಗಿದೆ ಎಂದು ಆರೋಪಿಸಿದರು.

ಇನ್ನೆರೆಡು ದಿನಗಳಲ್ಲಿದುರಸ್ಥಿ: ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ, ಪಿಡಿಓ ಶಾರದಾ ಸೋಮವಾರದೊಳಗಾಗಿ ದುರಸ್ಥಿ ಮಾಡಿಸುವುದಾಗಿ ಭರವಸೆ ನಿಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ರಮೇಶ ನಾಯ್ಕರ, ಮಾಲತೇಶ ಕಮ್ಮಾರ, ವಿಶ್ವನಾಥ ಹಿರೇಮಠ, ನಾಗರಾಜ ಟೈಲರ್‌, ಶಿವರಾಜ ಉಜನಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ