ಆ್ಯಪ್ನಗರ

ಸಂವಿಧಾನದ ಆಶಯ ಈಡೇರಿಸಲು ಪಣ ತೊಡಿ

ಬ್ಯಾಡಗಿ : ಯಾವುದೇ ಜಾತಿ ಸಮುದಾಯಗಳಿಗೆ ಧಕ್ಕೆಯಾಗದಂತೆ ವಿಶ್ವದ ಎರಡನೇ ಅತಿದೊಡ್ಡ ಸಂವಿಧಾನವನ್ನು ರಚಿಸಿ ಭಾರತ ಯಶಸ್ವಿಯಾಗಿದೆ, ಸರ್ಕಾರದ ಕಾನೂನುಗಳನ್ನು ಗೌರವಿಸುವ ಮೂಲಕ ಸಂವಿಧಾನದ ಎಲ್ಲ ಆಶಯಗಳನ್ನು ಈಡೇರಿಸಲು ಪಣ ತೊಡುವಂತೆ ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಇಬ್ರಾಹಿಂ ಮುಜಾವರ ಕರೆ ನೀಡಿದರು.

Vijaya Karnataka 29 Nov 2018, 5:00 am
ಬ್ಯಾಡಗಿ : ಯಾವುದೇ ಜಾತಿ ಸಮುದಾಯಗಳಿಗೆ ಧಕ್ಕೆಯಾಗದಂತೆ ವಿಶ್ವದ ಎರಡನೇ ಅತಿದೊಡ್ಡ ಸಂವಿಧಾನವನ್ನು ರಚಿಸಿ ಭಾರತ ಯಶಸ್ವಿಯಾಗಿದೆ, ಸರ್ಕಾರದ ಕಾನೂನುಗಳನ್ನು ಗೌರವಿಸುವ ಮೂಲಕ ಸಂವಿಧಾನದ ಎಲ್ಲ ಆಶಯಗಳನ್ನು ಈಡೇರಿಸಲು ಪಣ ತೊಡುವಂತೆ ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಇಬ್ರಾಹಿಂ ಮುಜಾವರ ಕರೆ ನೀಡಿದರು.
Vijaya Karnataka Web wear to fulfill the wishes of the constitution
ಸಂವಿಧಾನದ ಆಶಯ ಈಡೇರಿಸಲು ಪಣ ತೊಡಿ


ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಾನೂನು ಅರಿವು ನೆರವು ಕಾರ‍್ಯಕ್ರಮದಂಗವಾಗಿ ಆಯೋಜಿಸಿದ್ದ ಸಂವಿಧಾನದ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರಜೆಗಳನ್ನು ಸಂವಿಧಾನದಡಿ ಒಂದುಗೂಡಿಸಲಾಗಿದ್ದು ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿಯಪಡಿಸಲಾಗಿದೆ ಎಂದರು.

ಸಾರ್ವಜನಿಕರ ತಮ್ಮ ಬದುಕನ್ನು ಹಸನಗೊಳಿಸಲು ಸಂವಿಧಾನದಡಿ ನೂರಾರು ಕಾರ‍್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ, ಅದರಡಿ ಬರುವ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಿದ್ದಂತೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವ ಕೆಲವರಿಂದ ತಪ್ಪುಗಳಾಗುತ್ತಿದ್ದು ಯಾವುದೇ ಕಾರಣಕ್ಕೂ ಸಾರ್ವಜನಿಕರು ಅಂತಹ ಕೆಲಸಗಳಲ್ಲಿ ತೊಡಗದಂತೆ ಮನವಿ ಮಾಡಿದರು.

ಇದಕ್ಕೂ ಮುನ್ನ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಹಿರಿಯ ನ್ಯಾಯವಾದಿಗಳಾದ ಎಂ.ಎಫ್‌.ಮುಳಗುಂದ, ನ್ಯಾಯವಾದಿ ಸಂಘದ ಅಧ್ಯಕ್ಷ ಜಿ.ಎಸ್‌.ತಟ್ಟಿ, ಕಾರ‍್ಯದರ್ಶಿ ಎಚ್‌.ಎಸ್‌.ಜಾಧವ, ಬಿ.ಎಸ್‌.ಬನ್ನಿಹಟ್ಟಿ, ಎಸ್‌.ಎನ್‌.ಬಾರ್ಕಿ, ಭಾರತಿ ಕುಲಕರ್ಣಿ ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ