ಆ್ಯಪ್ನಗರ

ಮತ್ತೆ ಕಲ್ಯಾಣ ಸಾಮರಸ್ಯ ನಡಿಗೆ

ಹಾವೇರಿ: ಸಹಮತ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಮತ್ತೆ ಕಲ್ಯಾಣ ಅಭಿಯಾನದ ಭಾಗವಾಗಿ ಭಾನುವಾರ 'ಬನ್ನಿ ಜೊತೆಗೂಡೋಣ ಜೊತೆ ಸಾಗೋಣ ಮತ್ತೆ ಕಲ್ಯಾಣದತ್ತ' ಘೋಷಣೆ ವಾಕ್ಯದೊಂದಿಗೆ ಸಾಮರಸ್ಯ ನಡಿಗೆ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು.

Vijaya Karnataka 26 Aug 2019, 5:00 am
ಹಾವೇರಿ: ಸಹಮತ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಮತ್ತೆ ಕಲ್ಯಾಣ ಅಭಿಯಾನದ ಭಾಗವಾಗಿ ಭಾನುವಾರ 'ಬನ್ನಿ ಜೊತೆಗೂಡೋಣ ಜೊತೆ ಸಾಗೋಣ ಮತ್ತೆ ಕಲ್ಯಾಣದತ್ತ' ಘೋಷಣೆ ವಾಕ್ಯದೊಂದಿಗೆ ಸಾಮರಸ್ಯ ನಡಿಗೆ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು.
Vijaya Karnataka Web HVR-25 HAVERI 4--


ನಗರದ ವೀರಭ್ರದೇಶ್ವರ ದೇವಸ್ಥಾನದಲ್ಲಿ ಸಾಣೇಹಳ್ಳಿ ಜಗದ್ಗುರು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಮರಸ್ಯ ನಡಿಗೆಗೆ ಚಾಲನೆ ನೀಡಿದರು.

ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ನಡಿಗೆ ಮಹಾತ್ಮ ಗಾಂಧಿ ವೃತ್ತ, ಎಂ.ಜಿ. ರಸ್ತೆ, ದ್ಯಾಮವ್ವ ಪಾದಗಟ್ಟಿ ಮಾರ್ಗವಾಗಿ ಗಣೇಶ ದೇವಸ್ಥಾನ ರಸ್ತೆಯ ಮೂಲಕ ಹುಕ್ಕೇರಿಮಠದ ಶಿವಬಸವ ಕಲ್ಯಾಣ ಮಂಟಪಕ್ಕೆ ಬಂದು ತಲುಪಿತು.

ಸಾಮರಸ್ಯ ನಡಿಗೆಯಲ್ಲಿ ನಂದಿಕೋಲು, ಮಹಿಳೆಯರ ಡೊಳ್ಳು , ಜಾಂಜ್‌ ಮೇಳ, ಸಮ್ಮಾಳ ಸೇರಿದಂತೆ ಅನೇಕ ವಿಚಾರವಾದಿಗಳು, ಸಾಹಿತಿಗಳು, ಚಿಂತಕರು ಸೇರಿದಂತೆ ಎಲ್ಲಾ ಜಾತಿ ಧರ್ಮಗಳ ಜನರೊಂದಿಗೆ ಅದ್ಧೂರಿಯಾಗಿ ಜರುಗಿತು.

ನಡಿಗೆ ಉದ್ದಕ್ಕೂ ಮತ್ತೆ ಕಲ್ಯಾಣ, ಬಸವಾದಿ ಶರಣರ ಪರ ಘೋಷಣೆಗಳನ್ನು ಕೂಗಿದರು. ಮತ್ತೆ ಕಲ್ಯಾಣ ಎಂಬ ಅಕ್ಷರದ ಟೋಪಿ, ಬಸವಣ್ಣನವರ ಭಾವಚಿತ್ರವುಳ್ಳ ಬಾವುಟ, ಮತ್ತೆ ಕಲ್ಯಾಣದ ಬಾವುಟಗಳು ನಡಿಗೆಯ ಉದ್ದಕ್ಕೂ ಗಮನ ಸೆಳೆದವು.

ಈ ಸಂದರ್ಭದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಅಗಡಿಯ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಕಾರ್ಯಕ್ರಮದಲ್ಲಿ ಸಹಮತ ವೇದಿಕೆಯ ಜಿಲ್ಲಾ ಸಮಿತಿಯ ಸಂಚಾಲಕ ಪರಮೇಶ್ವರಪ್ಪ ಮೇಗಳಮನಿ, ಜಿ.ಪಂ.ಸದಸ್ಯ ಕೆ.ಆರ್‌. ಬಸೇಗೆಣ್ಣಿ, ಎಂ.ಎಸ್‌. ಕೋರಿಶೆಟ್ಟರ್‌, ಪ್ರಭು ಹಿಟ್ನಳ್ಳಿ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ