ಕರಿಯಪ್ಪ ಎಚ್ ಚೌಡಕ್ಕನವರ
ರಟ್ಟೀಹಳ್ಳಿ: ಪ್ರಸ್ತುತ ದಿನಮಾನದಲ್ಲಿಸರಕಾರಿ ಶಾಲೆಗಳು ಎಂದರೆ ಮೂಗುಮುರಿಯುವರೆ ಜಾಸ್ತಿ. ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸಬೇಕೆಂದು ಸರಕಾರಿ ಶಾಲೆಗಳಿಗೆ ಹತ್ತು-ಹಲವಾರು ಸೌಲಭ್ಯಗಳನ್ನು ಸರಕಾರ ಒದಗಿಸಿಕೊಡುತ್ತಿದ್ದರೂ ಕೊಠಡಿಗಳ ನಿರ್ಮಾಣಕ್ಕೆ ಸರಕಾರ ಗಮನಹರಿಸಿದಂತೆ ಕಾಣುತ್ತಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ರಟ್ಟೀಹಳ್ಳಿ ತಾಲೂಕಿನಲ್ಲಿಕಂಡು ಬರುವ ಶಿಥಿಲಗೊಂಡ ಶಾಲಾ ಕೊಠಡಿಗಳ ನೋಟ.
ದುರಸ್ತಿ ಕಾಣದ ಶಾಲಾ ಕೊಠಡಿಗಳು: ತಾಲೂಕಿನ ಅನೇಕ ಶಾಲೆಗಳಲ್ಲಿಕಳೆದ 2-3 ವರ್ಷಗಳ ಹಿಂದೆಯೇ ಶಾಲಾ ಕೊಠಡಿಗಳು ದುರಸ್ತಿಗೆ ಬಂದಿವೆ. ಆದರೆ ದುರಸ್ತಿ ಕಂಡಿಲ್ಲ. ಈ ಹಿಂದೆ ಶಿಥಿಲಗೊಂಡ 93 ಕೊಠಡಿಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿಲೋಕೋಪಯೋಗಿ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಶಿಥಿಲಗೊಂಡ ಕೊಠಡಿಗಳನ್ನು ತೆರವುಗೊಳಿಸುವುದಕ್ಕೆ ಹಣವಿಲ್ಲಎಂದು ಶಿಥಿಲಗೊಂಡ ಕೊಠಡಿಗಳನ್ನು ಇಲ್ಲಿಯವರೆಗೂ ತೆರವುಗೊಳಿಸಿಲ್ಲ. ಮಕ್ಕಳಿಗೆ ಅಪಾಯವಾಗುತ್ತದೆ ಎಂದು ಕೆಲವೊಂದು ಗ್ರಾಮದ ಆಯಾ ಶಾಲೆಗಳ ಕೊಠಡಿಗಳನ್ನು (ಸುಮಾರು 15 ಕೊಠಡಿಗಳನ್ನು) ಅಲ್ಲಿನ ಜನರ ಸಹಕಾರದಿಂದ ಶಿಕ್ಷಕರು ತೆರವುಗೊಳಿಸಿದ್ದಾರೆ. ಈಗ ಮಳೆಯಿಂದಾಗ 109 ಶಾಲೆಗಳು ಮತ್ತೊಷ್ಟು ಹಾಳಾಗಿವೆ. ಕೆಲವೊಂದು ಕಡೆಯಲ್ಲಿಇಂದೊ ನಾಳೆನೋ ಬಿಳುವಂತಿವೆ. ತಾಲೂಕು ಶಿಕ್ಷಣ ಇಲಾಖೆಯಿಂದ ದುರಸ್ತಿ ಕೈಗೊಳ್ಳುವಂತೆ ಜಿ.ಪಂ.ಹಾಗೂ ಶಿಕ್ಷಣ ಇಲಾಖೆಗೆ ಬೇಡಿಕೆ ಇಡಲಾಗಿದೆ. ಸದ್ಯ ತಾಲೂಕಿನಲ್ಲಿ43 ಕೊಠಡಿಗಳು ತುರ್ತಾಗಿ ಬೇಕಾಗಿದೆ. ತುರ್ತಾಗಿ ಯಾವ ಶಾಲೆಗೆ ಕೊಠಡಿಗಳ ಅವಶ್ಯಕತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಮಾಹಿತಿ ಕೂಡ ಕಳಿಸಿಕೊಡಲಾಗಿದೆ. ಹೊಸ ಕೊಠಡಿಗೆ ಮತ್ತು ದುರಸ್ತಿಗೆ ಈ ವರ್ಷವಾದರೂ ಅನುದಾನ ಬರುತ್ತದೆ ಎಂಬ ನಿರೀಕ್ಷೆಯಲ್ಲಿಇಲ್ಲಿನ ಅಧಿಕಾರಿಗಳು ಇದ್ದಾರೆ.
ಕೂಡಲೇ ಸರಕಾರ ಇತ್ತಕಡೆ ಗಮನಹರಿಸಬೇಕಾಗಿದೆ. ಕಳೆದ ವರ್ಷ ಜಿಪಂ ಹಾಗೂ ತಾಪಂ ಅನುದಾನದಲ್ಲಿಕೆಲವೊಂದು ಶಾಲೆಗಳನ್ನು ಸಣ್ಣಪುಟ್ಟ ದುರಸ್ತಿ ಕಾರ್ಯವನ್ನು ಮಾಡಲಾಗಿದೆ. ಆದರೆ ಹೊಸ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ಸಿಗುತ್ತಿಲ್ಲ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಅನೇಕ ಶಾಲೆಯ ಗೋಡೆಗಳು ಬಿದ್ದಿವೆ. ಕೆಲವೊಂದು ಶಾಲೆಯ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದಾಗಿ ಮಕ್ಕಳು ಕುಳಿತುಕೊಳ್ಳಲು ಭಯಪಡುವಂತಾಗಿದೆ. ಕೆಲ ಶಾಲೆಗಳಲ್ಲಿಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಕೊಠಡಿಗಳ ಸಂಖ್ಯೆ ಕಡಿಮೆ ಇದೆ. ಮಕ್ಕಳಿಗೆ ಏನಾದರೂ ತೊಂದರೆ ಆದಿತು ಎಂದು ಶಿಥಿಲ ಕೊಠಡಿಯಲ್ಲಿಮಕ್ಕಳನ್ನು ಕುಳಿಸುತ್ತಿಲ್ಲ. ಇಷ್ಟೆಲ್ಲಾಸಮಸ್ಯೆಯನ್ನು ಸರಕಾರಿ ಶಾಲೆಗಳು ಎದುರಿಸುತ್ತಿದ್ದರೂ ಸರಕಾರ ಮಾತ್ರ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಇದರಿಂದ ಶಾಲಾ ಮಕ್ಕಳು ಮತ್ತು ಶಿಕ್ಷಕರು ತೊಂದರೆ ಅನುಭವಿಸುವಂತಾಗಿದೆ. ಮುಂದಿನ ದಿನದಲ್ಲಾದರೂ ಸರಕಾರ ಸರಕಾರಿ ಶಾಲೆಗಳ ಕಡೆಗೆ ಹೆಚ್ಚಿನ ಗಮನಹರಿಸಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗುತ್ತದೆಯೋ ಇಲ್ಲವೋ ಕಾದು ನೋಡಬೇಕು.
ಕೋಟ್.1-
ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕಿಗೆ ಸಂಬಂದಪಟ್ಟಂತೆ ಒಟ್ಟು 109 ಕೊಠಡಿಗಳು ಹಾಳಾಗಿದ್ದು ದುರಸ್ತಿಯಾಗಬೇಕಾಗಿದೆ. ತಾಲೂಕಿನಲ್ಲಿಕೊಠಡಿಗಳ ಅವಶ್ಯಕತೆ ಇದೆ. ಈಗಾಗಲೇ ಶಿಥಿಲಗೊಂಡ ಕೊಠಡಿಗಳ ಮಾಹಿತಿಯನ್ನು ಕಳಿಸಿಕೊಡಲಾಗಿದೆ.
-ಜಗದೀಶ ಬಳಿಗಾರ, ಕ್ಷೇತ್ರ ಸಮನ್ವಯ ಅಧಿಕಾರಿ ಹಿರೇಕೆರೂರು-ರಟ್ಟೀಹಳ್ಳಿ.
ಕೋಟ್-2-
ಹೊಸ ಕೊಠಡಿಗಳ ನಿರ್ಮಾಣಕ್ಕೆ ಇನ್ನೂ ಅನುದಾನ ಬಂದಿಲ್ಲ. ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯಲ್ಲಿಸಾಕಷ್ಟು ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಸದ್ಯ ಕೊಠಡಿಗಳ ದುರಸ್ತಿಗೆ ಹಣ ಬಿಡುಗಡೆಯಾಗಿದೆ ಎಂದು ತಿಳಿದು ಬಂದಿದ್ದು, ಶಾಲಾ ಕೊಠಡಿಗಳು ದುರಸ್ತಿಯಾಗುತ್ತವೆ.
-ಎಸ್.ಕೆ.ಕರಿಯಣ್ಣನವರ ಜಿ.ಪಂ.ಅಧ್ಯಕ್ಷರು ಹಾವೇರಿ.
ಕೋಟ್-3-
ತಾಲೂಕಿನಲ್ಲಿಹಲವು ಶಾಲೆಗಳು ಕೊಠಡಿಗಳ ಸಮಸ್ಯೆ ಎದುರಿಸುತ್ತಿವೆ. ಸರಕಾರಿ ಶಾಲೆಗಳ ಬಗ್ಗೆ ಕಾಳಜಿವಹಿಸಿ ಹೊಸ ಕೊಠಡಿಗಳನ್ನು ನಿರ್ಮಿಸುವುದಕ್ಕೆ ಸರಕಾರ ಮುಂದಾಗಬೇಕು. ಅಲ್ಲದೇ ಅನೇಕ ಶಾಲೆಗಳಲ್ಲಿಶೌಚಾಲಯದ ಸಮಸ್ಯೆ ಇದೆ. ಹೊಸ ಶೌಚಾಲಯಗಳನ್ನು ನಿರ್ಮಿಸುವುದಕ್ಕೆ ಗಮನಹರಿಸಬೇಕು.
-ಬಸನಗೌಡ ಗಂಗಪ್ಪನವರ, ಪ್ರೌಢ ಶಾಲಾ ಎಸ್ಡಿಎಂಸಿ ಮಾಜಿ ಉಪಾಧ್ಯಕ್ಷರು, ರೈತ ಮುಖಂಡರು ಯಡಗೋಡ.
ಫೋಟೋ ಶೀರ್ಷಿಕೆ:ನ.2.ರಟ್ಟೀಹಳ್ಳಿ.6- ಶಿಥಿಲಗೊಂಡು ನಿರುಪಯುಕ್ತವಾಗಿರುವ ರಟ್ಟೀಹಳ್ಳಿ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಕೊಠಡಿಯ ನೋಟ.
ನ.2.ರಟ್ಟೀಹಳ್ಳಿ.6.ಎ- ತಾಲೂಕಿನ ಹಳ್ಳೂರು, ಕುಡುಪಲಿ, ಅಣಜಿ, ರಟ್ಟೀಹಳ್ಳಿ ಗ್ರಾಮದ ಸರಕಾರಿ ಶಾಲೆಗಳ ಆವರಣದಲ್ಲಿವರ್ಷದ ಹಿಂದೆ ಶಿಥಿಲಗೊಂಡ ಕೊಠಡಿ ತೆರವುಗೊಳಿಸಿದ್ದು ಇಲ್ಲಿಯವರೆಗಾದರೂ ಹೊಸ ಕೊಠಡಿ ನಿರ್ಮಾಣವಾಗಿಲ್ಲ.
ನ.2.ರಟ್ಟೀಹಳ್ಳಿ.6.ಬಿ- ಶಿಥಿಲಗೊಂಡ ಕೊಠಡಿಗಳ ನೋಟ.
ರಟ್ಟೀಹಳ್ಳಿ: ಪ್ರಸ್ತುತ ದಿನಮಾನದಲ್ಲಿಸರಕಾರಿ ಶಾಲೆಗಳು ಎಂದರೆ ಮೂಗುಮುರಿಯುವರೆ ಜಾಸ್ತಿ. ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸಬೇಕೆಂದು ಸರಕಾರಿ ಶಾಲೆಗಳಿಗೆ ಹತ್ತು-ಹಲವಾರು ಸೌಲಭ್ಯಗಳನ್ನು ಸರಕಾರ ಒದಗಿಸಿಕೊಡುತ್ತಿದ್ದರೂ ಕೊಠಡಿಗಳ ನಿರ್ಮಾಣಕ್ಕೆ ಸರಕಾರ ಗಮನಹರಿಸಿದಂತೆ ಕಾಣುತ್ತಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ರಟ್ಟೀಹಳ್ಳಿ ತಾಲೂಕಿನಲ್ಲಿಕಂಡು ಬರುವ ಶಿಥಿಲಗೊಂಡ ಶಾಲಾ ಕೊಠಡಿಗಳ ನೋಟ.
ದುರಸ್ತಿ ಕಾಣದ ಶಾಲಾ ಕೊಠಡಿಗಳು: ತಾಲೂಕಿನ ಅನೇಕ ಶಾಲೆಗಳಲ್ಲಿಕಳೆದ 2-3 ವರ್ಷಗಳ ಹಿಂದೆಯೇ ಶಾಲಾ ಕೊಠಡಿಗಳು ದುರಸ್ತಿಗೆ ಬಂದಿವೆ. ಆದರೆ ದುರಸ್ತಿ ಕಂಡಿಲ್ಲ. ಈ ಹಿಂದೆ ಶಿಥಿಲಗೊಂಡ 93 ಕೊಠಡಿಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿಲೋಕೋಪಯೋಗಿ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಶಿಥಿಲಗೊಂಡ ಕೊಠಡಿಗಳನ್ನು ತೆರವುಗೊಳಿಸುವುದಕ್ಕೆ ಹಣವಿಲ್ಲಎಂದು ಶಿಥಿಲಗೊಂಡ ಕೊಠಡಿಗಳನ್ನು ಇಲ್ಲಿಯವರೆಗೂ ತೆರವುಗೊಳಿಸಿಲ್ಲ. ಮಕ್ಕಳಿಗೆ ಅಪಾಯವಾಗುತ್ತದೆ ಎಂದು ಕೆಲವೊಂದು ಗ್ರಾಮದ ಆಯಾ ಶಾಲೆಗಳ ಕೊಠಡಿಗಳನ್ನು (ಸುಮಾರು 15 ಕೊಠಡಿಗಳನ್ನು) ಅಲ್ಲಿನ ಜನರ ಸಹಕಾರದಿಂದ ಶಿಕ್ಷಕರು ತೆರವುಗೊಳಿಸಿದ್ದಾರೆ. ಈಗ ಮಳೆಯಿಂದಾಗ 109 ಶಾಲೆಗಳು ಮತ್ತೊಷ್ಟು ಹಾಳಾಗಿವೆ. ಕೆಲವೊಂದು ಕಡೆಯಲ್ಲಿಇಂದೊ ನಾಳೆನೋ ಬಿಳುವಂತಿವೆ. ತಾಲೂಕು ಶಿಕ್ಷಣ ಇಲಾಖೆಯಿಂದ ದುರಸ್ತಿ ಕೈಗೊಳ್ಳುವಂತೆ ಜಿ.ಪಂ.ಹಾಗೂ ಶಿಕ್ಷಣ ಇಲಾಖೆಗೆ ಬೇಡಿಕೆ ಇಡಲಾಗಿದೆ. ಸದ್ಯ ತಾಲೂಕಿನಲ್ಲಿ43 ಕೊಠಡಿಗಳು ತುರ್ತಾಗಿ ಬೇಕಾಗಿದೆ. ತುರ್ತಾಗಿ ಯಾವ ಶಾಲೆಗೆ ಕೊಠಡಿಗಳ ಅವಶ್ಯಕತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಮಾಹಿತಿ ಕೂಡ ಕಳಿಸಿಕೊಡಲಾಗಿದೆ. ಹೊಸ ಕೊಠಡಿಗೆ ಮತ್ತು ದುರಸ್ತಿಗೆ ಈ ವರ್ಷವಾದರೂ ಅನುದಾನ ಬರುತ್ತದೆ ಎಂಬ ನಿರೀಕ್ಷೆಯಲ್ಲಿಇಲ್ಲಿನ ಅಧಿಕಾರಿಗಳು ಇದ್ದಾರೆ.
ಕೂಡಲೇ ಸರಕಾರ ಇತ್ತಕಡೆ ಗಮನಹರಿಸಬೇಕಾಗಿದೆ. ಕಳೆದ ವರ್ಷ ಜಿಪಂ ಹಾಗೂ ತಾಪಂ ಅನುದಾನದಲ್ಲಿಕೆಲವೊಂದು ಶಾಲೆಗಳನ್ನು ಸಣ್ಣಪುಟ್ಟ ದುರಸ್ತಿ ಕಾರ್ಯವನ್ನು ಮಾಡಲಾಗಿದೆ. ಆದರೆ ಹೊಸ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ಸಿಗುತ್ತಿಲ್ಲ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಅನೇಕ ಶಾಲೆಯ ಗೋಡೆಗಳು ಬಿದ್ದಿವೆ. ಕೆಲವೊಂದು ಶಾಲೆಯ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದಾಗಿ ಮಕ್ಕಳು ಕುಳಿತುಕೊಳ್ಳಲು ಭಯಪಡುವಂತಾಗಿದೆ. ಕೆಲ ಶಾಲೆಗಳಲ್ಲಿಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಕೊಠಡಿಗಳ ಸಂಖ್ಯೆ ಕಡಿಮೆ ಇದೆ. ಮಕ್ಕಳಿಗೆ ಏನಾದರೂ ತೊಂದರೆ ಆದಿತು ಎಂದು ಶಿಥಿಲ ಕೊಠಡಿಯಲ್ಲಿಮಕ್ಕಳನ್ನು ಕುಳಿಸುತ್ತಿಲ್ಲ. ಇಷ್ಟೆಲ್ಲಾಸಮಸ್ಯೆಯನ್ನು ಸರಕಾರಿ ಶಾಲೆಗಳು ಎದುರಿಸುತ್ತಿದ್ದರೂ ಸರಕಾರ ಮಾತ್ರ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಇದರಿಂದ ಶಾಲಾ ಮಕ್ಕಳು ಮತ್ತು ಶಿಕ್ಷಕರು ತೊಂದರೆ ಅನುಭವಿಸುವಂತಾಗಿದೆ. ಮುಂದಿನ ದಿನದಲ್ಲಾದರೂ ಸರಕಾರ ಸರಕಾರಿ ಶಾಲೆಗಳ ಕಡೆಗೆ ಹೆಚ್ಚಿನ ಗಮನಹರಿಸಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗುತ್ತದೆಯೋ ಇಲ್ಲವೋ ಕಾದು ನೋಡಬೇಕು.
ಕೋಟ್.1-
ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕಿಗೆ ಸಂಬಂದಪಟ್ಟಂತೆ ಒಟ್ಟು 109 ಕೊಠಡಿಗಳು ಹಾಳಾಗಿದ್ದು ದುರಸ್ತಿಯಾಗಬೇಕಾಗಿದೆ. ತಾಲೂಕಿನಲ್ಲಿಕೊಠಡಿಗಳ ಅವಶ್ಯಕತೆ ಇದೆ. ಈಗಾಗಲೇ ಶಿಥಿಲಗೊಂಡ ಕೊಠಡಿಗಳ ಮಾಹಿತಿಯನ್ನು ಕಳಿಸಿಕೊಡಲಾಗಿದೆ.
-ಜಗದೀಶ ಬಳಿಗಾರ, ಕ್ಷೇತ್ರ ಸಮನ್ವಯ ಅಧಿಕಾರಿ ಹಿರೇಕೆರೂರು-ರಟ್ಟೀಹಳ್ಳಿ.
ಕೋಟ್-2-
ಹೊಸ ಕೊಠಡಿಗಳ ನಿರ್ಮಾಣಕ್ಕೆ ಇನ್ನೂ ಅನುದಾನ ಬಂದಿಲ್ಲ. ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯಲ್ಲಿಸಾಕಷ್ಟು ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಸದ್ಯ ಕೊಠಡಿಗಳ ದುರಸ್ತಿಗೆ ಹಣ ಬಿಡುಗಡೆಯಾಗಿದೆ ಎಂದು ತಿಳಿದು ಬಂದಿದ್ದು, ಶಾಲಾ ಕೊಠಡಿಗಳು ದುರಸ್ತಿಯಾಗುತ್ತವೆ.
-ಎಸ್.ಕೆ.ಕರಿಯಣ್ಣನವರ ಜಿ.ಪಂ.ಅಧ್ಯಕ್ಷರು ಹಾವೇರಿ.
ಕೋಟ್-3-
ತಾಲೂಕಿನಲ್ಲಿಹಲವು ಶಾಲೆಗಳು ಕೊಠಡಿಗಳ ಸಮಸ್ಯೆ ಎದುರಿಸುತ್ತಿವೆ. ಸರಕಾರಿ ಶಾಲೆಗಳ ಬಗ್ಗೆ ಕಾಳಜಿವಹಿಸಿ ಹೊಸ ಕೊಠಡಿಗಳನ್ನು ನಿರ್ಮಿಸುವುದಕ್ಕೆ ಸರಕಾರ ಮುಂದಾಗಬೇಕು. ಅಲ್ಲದೇ ಅನೇಕ ಶಾಲೆಗಳಲ್ಲಿಶೌಚಾಲಯದ ಸಮಸ್ಯೆ ಇದೆ. ಹೊಸ ಶೌಚಾಲಯಗಳನ್ನು ನಿರ್ಮಿಸುವುದಕ್ಕೆ ಗಮನಹರಿಸಬೇಕು.
-ಬಸನಗೌಡ ಗಂಗಪ್ಪನವರ, ಪ್ರೌಢ ಶಾಲಾ ಎಸ್ಡಿಎಂಸಿ ಮಾಜಿ ಉಪಾಧ್ಯಕ್ಷರು, ರೈತ ಮುಖಂಡರು ಯಡಗೋಡ.
ಫೋಟೋ ಶೀರ್ಷಿಕೆ:ನ.2.ರಟ್ಟೀಹಳ್ಳಿ.6- ಶಿಥಿಲಗೊಂಡು ನಿರುಪಯುಕ್ತವಾಗಿರುವ ರಟ್ಟೀಹಳ್ಳಿ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಕೊಠಡಿಯ ನೋಟ.
ನ.2.ರಟ್ಟೀಹಳ್ಳಿ.6.ಎ- ತಾಲೂಕಿನ ಹಳ್ಳೂರು, ಕುಡುಪಲಿ, ಅಣಜಿ, ರಟ್ಟೀಹಳ್ಳಿ ಗ್ರಾಮದ ಸರಕಾರಿ ಶಾಲೆಗಳ ಆವರಣದಲ್ಲಿವರ್ಷದ ಹಿಂದೆ ಶಿಥಿಲಗೊಂಡ ಕೊಠಡಿ ತೆರವುಗೊಳಿಸಿದ್ದು ಇಲ್ಲಿಯವರೆಗಾದರೂ ಹೊಸ ಕೊಠಡಿ ನಿರ್ಮಾಣವಾಗಿಲ್ಲ.
ನ.2.ರಟ್ಟೀಹಳ್ಳಿ.6.ಬಿ- ಶಿಥಿಲಗೊಂಡ ಕೊಠಡಿಗಳ ನೋಟ.