ಆ್ಯಪ್ನಗರ

ಮಹಿಳೆಯರು ತಮ್ಮ ರಕ್ಷಣೆಗೆ ತಾವೇ ಸನ್ನದ್ಧರಾಗಬೇಕು

ಹಂಸಭಾವಿ: ಮಹಿಳೆಯರು ತಮ್ಮ ರಕ್ಷ ಣೆಯನ್ನು ಸ್ವತಃ ತಾವೇ ಮಾಡಿಕೊಳ್ಳಲು ಸನ್ನದ್ದರಾಗಬೇಕು. ಇಂದಿನ ಕಾಲೇಜು ಯುವತಿಯರಿಗೆ ಕರಾಟೆ, ಕುಂಗ್‌ ಫೂ ಅಂತಹ ರಕ್ಷ ಣೆ ಮಾಡಿಕೊಳ್ಳುವ ಶಿಕ್ಷ ಣವನ್ನು ನೀಡುವ ಅವಶ್ಯಕತೆ ಇದೆಯೆಂದು ಹಂಸಭಾವಿ ಪೋಲಿಸ್‌ ಠಾಣೆ ಎ.ಎಸ್‌.ಐ ಎಂ.ಎ. ಅಸಾದಿ ಹೇಳಿದರು

Vijaya Karnataka 4 Aug 2019, 5:00 am
ಹಂಸಭಾವಿ: ಮಹಿಳೆಯರು ತಮ್ಮ ರಕ್ಷ ಣೆಯನ್ನು ಸ್ವತಃ ತಾವೇ ಮಾಡಿಕೊಳ್ಳಲು ಸನ್ನದ್ದರಾಗಬೇಕು. ಇಂದಿನ ಕಾಲೇಜು ಯುವತಿಯರಿಗೆ ಕರಾಟೆ, ಕುಂಗ್‌ ಫೂ ಅಂತಹ ರಕ್ಷ ಣೆ ಮಾಡಿಕೊಳ್ಳುವ ಶಿಕ್ಷ ಣವನ್ನು ನೀಡುವ ಅವಶ್ಯಕತೆ ಇದೆಯೆಂದು ಹಂಸಭಾವಿ ಪೋಲಿಸ್‌ ಠಾಣೆ ಎ.ಎಸ್‌.ಐ ಎಂ.ಎ. ಅಸಾದಿ ಹೇಳಿದರು
Vijaya Karnataka Web women must prepare themselves for their own protection
ಮಹಿಳೆಯರು ತಮ್ಮ ರಕ್ಷಣೆಗೆ ತಾವೇ ಸನ್ನದ್ಧರಾಗಬೇಕು


ಸ್ಥಳೀಯ ಮಹಾಂತಸ್ವಾಮಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ನಿರ್ಭಯ ಮಹಿಳಾ ವಿಶೇಷ ತಂಡ ರಾಣೇಬೆನ್ನೂರು ಇವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು. ನಿರ್ಭಯ ಮಹಿಳಾ ತಂಡದ ಸದಸ್ಯ ಶಾಂತಾ ಮಾತನಾಡಿ, ಮಹಿಳೆಯರು ಇಂದು ಧರಿಸುತ್ತಿರುವ ಉಡುಪುಗಳಿಂದಲೂ ಅಪರಾಧಗಳು ನಡೆಯಲು ಕಾರಣವಾಗುತ್ತಿವೆ. ಹೀಗಾಗಿ ಅವರು ಧರಿಸುವ ಉಡುಪಿನಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಅಲ್ಲದೆ ಒಬ್ಬಂಟಿಯಾಗಿ ತಿರುಗುವಾಗ ಪೇಪರ್‌ಸ್ಪ್ರೇ, ಕಾರದಪುಡಿ ಮುಂತಾದ ವಸ್ತುಗಳನ್ನು ಯಾವಾಗಲೂ ತಮ್ಮ ಬಳಿ ಇಟ್ಟುಕೊಂಡಿರಬೇಕು ಅಲ್ಲದೆ ಸಾಧ್ಯವಾದಷ್ಟು ಮಟ್ಟಿಗೆ ನಿರ್ಜನ ಪ್ರದೇಶಗಳಲ್ಲಿ ಒಬ್ಬಂಟಿಯಾಗಿ ತಿರುಗಾಡಬಾರದು, ಸಂಯಮದ ಗುಣಗಳನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕೆಂದು'' ತಿಳಿಸಿದರು.

ವಿದ್ಯಾರ್ಥಿಗಳು ತಾವುಗಳು ಕಾಲೇಜಿಗೆ ಯಾವ ಉದ್ದೇಶಕ್ಕಾಗಿ ಬರುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು. ಅಲ್ಲದೆ ಕಾಲೇಜಿನಲ್ಲಿ ಮೊಬೈಲ್‌ ಬಳಸಬಾರದು. ವ್ಯಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಿಗೆ ಸಿಲುಕಿ ವಿದ್ಯಾರ್ಥಿಗಳು ಇಂದು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅವುಗಳನ್ನು ಮಿತವಾಗಿ ಅವಶ್ಯಕತೆಗೆ ತಕ್ಕಷ್ಟು ಬಳಸಬೇಕೆಂದು ಪ್ರಾಚಾರ್ಯ ಡಾ.ಎಂ.ಎಂ.ಅಕ್ಕಿ ತಿಳಿಸಿದರು. ನಿರ್ಭಯ ಮಹಿಳಾ ತಂಡದವರು ತಮ್ಮನ್ನು ತಾವು ಹೇಗೆ ರಕ್ಷ ಣೆ ಮಾಡಿಕೊಳ್ಳಬೇಕೆಂಬುದರ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಪ್ರೊ.ಪಿ.ವೆಂಕಟೇಶ, ಪ್ರೊ. ಹುಸೇನ ಕಳಗೊಂಡ, ಹಮ್ಮಿಣಿಣಿ ಬಸಮ್ಮ, ಪಲ್ಲವಿ ಬೋಳಕಟ್ಟಿ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ