ಆ್ಯಪ್ನಗರ

ಗೋವಿನಜೋಳಕ್ಕೆ ಹುಳು ಕಾಟ, ರೈತರಿಗೆ ಸಂಕಟ

ಕರಿಯಪ್ಪ ಎಚ್‌. ಚೌಡಕ್ಕನವರ ರಟ್ಟೀಹಳ್ಳಿ: ರಟ್ಟೀಹಳ್ಳಿ ತಾಲೂಕಿನಲ್ಲಿ ಪ್ರಸಕ್ತ ವರ್ಷ ಮಳೆ ಬಹಳಷ್ಟು ವಿಳಂಬವಾಗಿ ಮಳೆ ಬಂದಿದ್ದರಿಂದ ರೈತರು ತಡವಾಗಿ ಬಿತ್ತನೆ ಮಾಡಿದ್ದಾರೆ. ಅದರಲ್ಲೂ ಹೆಚ್ಚಿನ ಪ್ರಮಾಣದ ರೈತರು ಗೋವಿನಜೋಳವನ್ನೇ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಬಳಿಕ ಆಗಾಗ ಬೆಳೆಗೆ ಅವಶ್ಯ ಇರುವಷ್ಟು ಮಳೆ ಆಗುತ್ತಿರುವುದರಿಂದ ಬೆಳೆಗಳು ಉತ್ತಮವಾಗಿ ಇವೆ.

Vijaya Karnataka 4 Aug 2019, 5:00 am
ಕರಿಯಪ್ಪ ಎಚ್‌. ಚೌಡಕ್ಕನವರ ರಟ್ಟೀಹಳ್ಳಿ: ರಟ್ಟೀಹಳ್ಳಿ ತಾಲೂಕಿನಲ್ಲಿ ಪ್ರಸಕ್ತ ವರ್ಷ ಮಳೆ ಬಹಳಷ್ಟು ವಿಳಂಬವಾಗಿ ಮಳೆ ಬಂದಿದ್ದರಿಂದ ರೈತರು ತಡವಾಗಿ ಬಿತ್ತನೆ ಮಾಡಿದ್ದಾರೆ. ಅದರಲ್ಲೂ ಹೆಚ್ಚಿನ ಪ್ರಮಾಣದ ರೈತರು ಗೋವಿನಜೋಳವನ್ನೇ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಬಳಿಕ ಆಗಾಗ ಬೆಳೆಗೆ ಅವಶ್ಯ ಇರುವಷ್ಟು ಮಳೆ ಆಗುತ್ತಿರುವುದರಿಂದ ಬೆಳೆಗಳು ಉತ್ತಮವಾಗಿ ಇವೆ.
Vijaya Karnataka Web HVR-3 RATTIHALLI  3


ಮಳೆ ಚನ್ನಾಗಿ ಬಂದರೆ ಈ ವರ್ಷವಾದರೂ ಉತ್ತಮ ಬೆಳೆ ಕೈಗೆ ಸಿಗಬಹುದೆಂಬ ಆಶಾಭಾವ ರೈತರಲ್ಲಿದೆ. ಆದರೆ ಗೋವಿನಜೋಳ ಬೆಳೆಗಳಿಗೆ ಹುಳುಗಳ ಕಾಟ ಶುರುವಾಗಿದ್ದರಿಂದ ರೈತರಿಗೆ ಸಂಕಟ ಎದುರಾಗಿದೆ.

ಮೊದಲೇ 5-6 ವರ್ಷಗಳಿಂದ ಸರಿಯಾದ ಮಳೆ ಇಲ್ಲದೇ ಬೆಳೆ ಕೈಗೆ ಸಿಗದೇ ತೊಂದರೆ ಅನುಭವಿಸಿದ ರೈತರು ಈ ವರ್ಷವಾದರೂ ಉತ್ತಮ ಬೆಳೆ ಬಂದು ರೈತರ ಬದುಕು ಹಸನಾಗುತ್ತದೆ ಎಂದು ತಿಳಿದಿದ್ದರು. ಈಗ ಬೆಳೆಗಳನ್ನು ಹುಳು ತಿನ್ನುತ್ತಿರುವುದರಿಂದ ಮುಂದೆ ಬೆಳೆ ಹೇಗೆ ಬೆಳೆಯುತ್ತದೆಯೋ ಏನೋ ಎಂಬ ಚಿಂತೆ ರೈತರಲ್ಲಿ ಕಾಡುವುದಕ್ಕೆ ಪ್ರಾರಂಭಿಸಿದೆ.

ರೈತರು ಸಾಲ ಮಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿ ಮಳೆ ಬರುವ ನಿರೀಕ್ಷೆ ಇಟ್ಟುಕೊಂಡು ಭೂತಾಯಿ ನಂಬಿ ಭೂತಾಯಿ ಒಡಲಿಗೆ ಬೀಜವನ್ನು ಬಿತ್ತಿದ್ದಾರೆ. ಸದ್ಯ ಮಳೆದೇವ ಕಣ್ಣು ತೆರೆದಿದ್ದಾನೆ. ಭೂತಾಯಿ ಒಡಲಲ್ಲಿ ಬೆಳೆಗಳು ಹುಲುಸಾಗಿ ಬೆಳೆಯುತ್ತಿದ್ದರೂ ಕೀಟ ಬಾಧೆಯಿಂದ ಕುಂಠಿತವಾಗುತ್ತಿವೆ.

ಬೆಳೆ ಉಳಿಸಿಕೊಳ್ಳಲು ಹರಸಾಹಸ: ಈ ವರ್ಷ ಉತ್ತಮ ಬೆಳೆ ಬಂದರೆ ಸಾಲ ತೀರಿಸಬಹುದು ಎಂದುಕೊಂಡ ರೈತರಿಗೆ ಈಗ ಗೋವಿನಜೋಳ ಬೆಳೆ ಉಳಿಸಿಕೊಳ್ಳುವುದಕ್ಕೆ ಹರಸಾಹಸ ಮಾಡಬೇಕಾಗಿದೆ. ತಾಲೂಕಿನ ಹಲವು ಕಡೆಗಳಲ್ಲಿ ರೈತರು ಹುಳುಗಳನ್ನು ಹತೋಟಿಗೆ ತರುವುದಕ್ಕೆ ಔಷಧಿ ಸಿಂಪರಣೆ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ