ಸಂತೋಷ್ ಅಪ್ಪಾಜಿ ಅಕ್ಕಿಆಲೂರು ವಿದ್ಯೆ, ವಿವಾಹ, ಸಂತಾನ, ವಾಹನ, ಆಸ್ತಿ ಹಾಗೂ ರಾಜಯೋಗಗಳನ್ನು ಕರುಣಿಸುವ ಯೋಗಕಾರಕ ದೇವನಾಗಿ ಇಲ್ಲಿನ ಕುಮಾರ ನಗರದ ಸಂಕಷ್ಟಹರ ವರಸಿದ್ಧಿ ವಿನಾಯಕ ಭಕ್ತ ಸಮೂಹದಿಂದ ಪೂಜೆಗೊಳಪಡುತ್ತಿದ್ದಾನೆ.
ಇಲ್ಲಿನ ವಿನಾಯಕ ದೇವಸ್ಥಾನ ಇಲ್ಲದಿರುವುದನ್ನು ಮನಗಂಡು ಭಕ್ತ ಸಮೂಹ ಕಳೆದ ಒಂದೂವರೆ ದಶಕದ ಹಿಂದೆ ಇಲ್ಲಿನ ಕುಮಾರ ನಗರದಲ್ಲಿ ಸುಂದರ ದೇವಸ್ಥಾನ ನಿರ್ಮಿಸಿದೆ. ನಾಡಿನ ಹಲವು ಮಠಾಧೀಶರ ಸಾನ್ನಿಧ್ಯದಲ್ಲಿ ವಿನಾಯಕ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ನೆರವೇರಿದೆ. ಅಂದಿನಿಂದ ಇಂದಿನವರೆಗೂ ದೇವಸ್ಥಾನದಲ್ಲಿ ನಿತ್ಯವೂ ಹಲವು ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆ ಮತ್ತು ಭಕ್ತಿಯಿಂದ ನಡೆಯುತ್ತಿವೆ.
ಏನಾದರೂ ಶುಭ ಕಾರ್ಯಗಳಿಗೆ ತೆರಳಬೇಕಾದರೆ ಈ ವಿನಾಯಕನ ದರ್ಶನ ಪಡೆದು ಮುಂದಡಿ ಇಟ್ಟರೆ ಶುಭ ಫಲಗಳು ಸಿದ್ಧಿಸುತ್ತವೆ ಎನ್ನುವುದು ಭಕ್ತರ ನಂಬಿಕೆ. ವ್ಯಾಪಾರ-ವಹಿವಾಟು ಆರಂಭ, ನೂತನ ಗೃಹ ನಿರ್ಮಾಣ, ಮದುವೆ ಹೀಗೆ ಯಾವುದಾದರೂ ಶುಭ ಕಾರ್ಯಗಳ ಆರಂಭದ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆ-ಪುನಸ್ಕಾರ ಸಲ್ಲಿಸಿ, ಆ ಬಳಿಕವೇ ಕಾರ್ಯಗಳಿಗೆ ಚಾಲನೆ ನೀಡುವ ಸಂಪ್ರದಾಯವನ್ನು ಅನೇಕ ಕುಟುಂಬಗಳು ಪಾಲಿಸುತ್ತಾ ಬಂದಿವೆ. ಜತೆಗೆ ಶುಭ ಸಿದ್ಧಿಗಳನ್ನೂ ಪಡೆದಿವೆ.
ವಿದ್ಯಾ ಗಣಪತಿ: ವರಸಿದ್ಧಿಯ ಜತೆಗೆ ವಿದ್ಯಾ ಗಣಪತಿಯಾಗಿಯೂ ಭಕ್ತ ಸಮೂಹದಿಂದ ವಿನಾಯಕ ಆರಾದನೆಗೊಳಗಾಗಿದ್ದಾನೆ. ಹಲವರು ಈ ದೇವಸ್ಥಾನದಿಂದಲೇ ತಮ್ಮ ಮಕ್ಕಳ ಅಕ್ಷ ರಾಭ್ಯಾಸ ಆರಂಭಿಸುವ ಪರಿಪಾಠ ರೂಢಿಸಿಕೊಂಡಿದ್ದಾರೆ. ಶಾಲೆ-ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಪ್ರತಿನಿತ್ಯವೂ ದೇವಸ್ಥಾನಕ್ಕೆ ಆಗಮಿಸಿ ವಿನಾಯಕನ ದರ್ಶನ ಪಡೆದುಕೊಂಡು ಹೋಗುವುದನ್ನು ಇಲ್ಲಿ ಕಾಣಬಹುದಾಗಿದೆ. ಶುಭ ಕಾರ್ಯಗಳ ಮೆರವಣಿಗೆ ಈ ದೇವಸ್ಥಾನದಿಂದಲೇ ಆರಂಭಗೊಂಡರೆ ಒಳಿತಾಗಲಿದೆ ಎನ್ನುವ ಭಾವನೆ ಭಕ್ತ ಸಮೂಹದಲ್ಲಿ ಬೇರೂರಿದೆ.
ಅಲಂಕಾರ ಪ್ರಿಯ: ಇಲ್ಲಿನ ವಿನಾಯಕ ಅಲಂಕಾರ ಪ್ರಿಯ ಎನ್ನುವುದು ವಿಶೇಷ. ಪ್ರತಿದಿನವೂ ಕೂಡ ಇಲ್ಲಿ ವಿನಾಯಕ ಮೂರ್ತಿಯನ್ನು ಅಂದವಾಗಿ ಅಲಂಕರಿಸಲಾಗುತ್ತದೆ. ಅದನ್ನು ಕಣ್ತುಂಬಿಕೊಳ್ಳುವುದೆ ಸೊಬಗು. ಕ್ಷ ಣಹೊತ್ತು ನಿಂತು ವಿನಾಯಕನ ದರ್ಶನ ಪಡೆದರೆ ಮನಸ್ಸೆನೋ ಆನಂದ ಭಾವದಲ್ಲಿ ತೇಲಾಡುತ್ತದೆ. ಬಗೆ ಬಗೆಯ ಹೂವು, ಹಣ್ಣು, ತರಕಾರಿ, ಭಸ್ಮ, ದ್ರಾಕ್ಷಿ-ಗೋಡಂಬಿ, ಶ್ರೀಗಂಧ, ಅರಿಷಿಣ-ಕುಂಕುಮ ಹೀಗೆ ಇನ್ನಿತರದ ವಸ್ತುಗಳಿಂದ ವಿನಾಯಕನನ್ನು ಸಂದರ್ಭಗಳಿಗೆ ಅನುಸಾರವಾಗಿ ಬಹಳ ಸುಂದರವಾಗಿ ಅಲಂಕಾರ ಮಾಡುವುದು ಈ ದೇವಸ್ಥಾನದ ಇನ್ನೊಂದು ವೈಶಿಷ್ಟ್ಯತೆ.
ನಿತ್ಯವೂ ಇಲ್ಲಿ ವಿಧವಿಧದ ಪೂಜಾ ಕೈಂಕರ್ಯಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ರುದ್ರಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ ನೆರವೇರಿಸಲಾಗುತ್ತದೆ. ಅಂಗಾರಕ ಸಂಕಷ್ಟಿಯ ಸಂದರ್ಭದಲ್ಲಿ ವಿದ್ಯಾ ಗಣಪತಿ ಹೋಮ, ನವಗ್ರಹ ಶಾಂತಿ, ಸಹಸ್ರ ಮೋದಕ ಹೋಮ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಪ್ರತಿ ವರ್ಷಕ್ಕೊಮ್ಮೆ ಸುಖ-ಶಾಂತಿ ಬಯಸಿ ಲೋಕಕಲ್ಯಾಣಾರ್ಥವಾಗಿ 2 ದಿನಗಳ ಧಾರ್ಮಿಕ ಕಾರ್ಯಕ್ರಮಗಳೂ ಜರುಗುತ್ತವೆ. ದೇವಸ್ಥಾನದ ಆವರಣದಲ್ಲಿ ನವಗ್ರಹ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಚೌಡಮ್ಮ ತಾಯಿಯ ಸಣ್ಣ ದೇವಸ್ಥಾನವೂ ಇಲ್ಲಿದೆ.
ಇಲ್ಲಿನ ವಿನಾಯಕ ದೇವಸ್ಥಾನ ಇಲ್ಲದಿರುವುದನ್ನು ಮನಗಂಡು ಭಕ್ತ ಸಮೂಹ ಕಳೆದ ಒಂದೂವರೆ ದಶಕದ ಹಿಂದೆ ಇಲ್ಲಿನ ಕುಮಾರ ನಗರದಲ್ಲಿ ಸುಂದರ ದೇವಸ್ಥಾನ ನಿರ್ಮಿಸಿದೆ. ನಾಡಿನ ಹಲವು ಮಠಾಧೀಶರ ಸಾನ್ನಿಧ್ಯದಲ್ಲಿ ವಿನಾಯಕ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ನೆರವೇರಿದೆ. ಅಂದಿನಿಂದ ಇಂದಿನವರೆಗೂ ದೇವಸ್ಥಾನದಲ್ಲಿ ನಿತ್ಯವೂ ಹಲವು ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆ ಮತ್ತು ಭಕ್ತಿಯಿಂದ ನಡೆಯುತ್ತಿವೆ.
ಏನಾದರೂ ಶುಭ ಕಾರ್ಯಗಳಿಗೆ ತೆರಳಬೇಕಾದರೆ ಈ ವಿನಾಯಕನ ದರ್ಶನ ಪಡೆದು ಮುಂದಡಿ ಇಟ್ಟರೆ ಶುಭ ಫಲಗಳು ಸಿದ್ಧಿಸುತ್ತವೆ ಎನ್ನುವುದು ಭಕ್ತರ ನಂಬಿಕೆ. ವ್ಯಾಪಾರ-ವಹಿವಾಟು ಆರಂಭ, ನೂತನ ಗೃಹ ನಿರ್ಮಾಣ, ಮದುವೆ ಹೀಗೆ ಯಾವುದಾದರೂ ಶುಭ ಕಾರ್ಯಗಳ ಆರಂಭದ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆ-ಪುನಸ್ಕಾರ ಸಲ್ಲಿಸಿ, ಆ ಬಳಿಕವೇ ಕಾರ್ಯಗಳಿಗೆ ಚಾಲನೆ ನೀಡುವ ಸಂಪ್ರದಾಯವನ್ನು ಅನೇಕ ಕುಟುಂಬಗಳು ಪಾಲಿಸುತ್ತಾ ಬಂದಿವೆ. ಜತೆಗೆ ಶುಭ ಸಿದ್ಧಿಗಳನ್ನೂ ಪಡೆದಿವೆ.
ವಿದ್ಯಾ ಗಣಪತಿ: ವರಸಿದ್ಧಿಯ ಜತೆಗೆ ವಿದ್ಯಾ ಗಣಪತಿಯಾಗಿಯೂ ಭಕ್ತ ಸಮೂಹದಿಂದ ವಿನಾಯಕ ಆರಾದನೆಗೊಳಗಾಗಿದ್ದಾನೆ. ಹಲವರು ಈ ದೇವಸ್ಥಾನದಿಂದಲೇ ತಮ್ಮ ಮಕ್ಕಳ ಅಕ್ಷ ರಾಭ್ಯಾಸ ಆರಂಭಿಸುವ ಪರಿಪಾಠ ರೂಢಿಸಿಕೊಂಡಿದ್ದಾರೆ. ಶಾಲೆ-ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಪ್ರತಿನಿತ್ಯವೂ ದೇವಸ್ಥಾನಕ್ಕೆ ಆಗಮಿಸಿ ವಿನಾಯಕನ ದರ್ಶನ ಪಡೆದುಕೊಂಡು ಹೋಗುವುದನ್ನು ಇಲ್ಲಿ ಕಾಣಬಹುದಾಗಿದೆ. ಶುಭ ಕಾರ್ಯಗಳ ಮೆರವಣಿಗೆ ಈ ದೇವಸ್ಥಾನದಿಂದಲೇ ಆರಂಭಗೊಂಡರೆ ಒಳಿತಾಗಲಿದೆ ಎನ್ನುವ ಭಾವನೆ ಭಕ್ತ ಸಮೂಹದಲ್ಲಿ ಬೇರೂರಿದೆ.
ಅಲಂಕಾರ ಪ್ರಿಯ: ಇಲ್ಲಿನ ವಿನಾಯಕ ಅಲಂಕಾರ ಪ್ರಿಯ ಎನ್ನುವುದು ವಿಶೇಷ. ಪ್ರತಿದಿನವೂ ಕೂಡ ಇಲ್ಲಿ ವಿನಾಯಕ ಮೂರ್ತಿಯನ್ನು ಅಂದವಾಗಿ ಅಲಂಕರಿಸಲಾಗುತ್ತದೆ. ಅದನ್ನು ಕಣ್ತುಂಬಿಕೊಳ್ಳುವುದೆ ಸೊಬಗು. ಕ್ಷ ಣಹೊತ್ತು ನಿಂತು ವಿನಾಯಕನ ದರ್ಶನ ಪಡೆದರೆ ಮನಸ್ಸೆನೋ ಆನಂದ ಭಾವದಲ್ಲಿ ತೇಲಾಡುತ್ತದೆ. ಬಗೆ ಬಗೆಯ ಹೂವು, ಹಣ್ಣು, ತರಕಾರಿ, ಭಸ್ಮ, ದ್ರಾಕ್ಷಿ-ಗೋಡಂಬಿ, ಶ್ರೀಗಂಧ, ಅರಿಷಿಣ-ಕುಂಕುಮ ಹೀಗೆ ಇನ್ನಿತರದ ವಸ್ತುಗಳಿಂದ ವಿನಾಯಕನನ್ನು ಸಂದರ್ಭಗಳಿಗೆ ಅನುಸಾರವಾಗಿ ಬಹಳ ಸುಂದರವಾಗಿ ಅಲಂಕಾರ ಮಾಡುವುದು ಈ ದೇವಸ್ಥಾನದ ಇನ್ನೊಂದು ವೈಶಿಷ್ಟ್ಯತೆ.
ನಿತ್ಯವೂ ಇಲ್ಲಿ ವಿಧವಿಧದ ಪೂಜಾ ಕೈಂಕರ್ಯಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ರುದ್ರಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ ನೆರವೇರಿಸಲಾಗುತ್ತದೆ. ಅಂಗಾರಕ ಸಂಕಷ್ಟಿಯ ಸಂದರ್ಭದಲ್ಲಿ ವಿದ್ಯಾ ಗಣಪತಿ ಹೋಮ, ನವಗ್ರಹ ಶಾಂತಿ, ಸಹಸ್ರ ಮೋದಕ ಹೋಮ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಪ್ರತಿ ವರ್ಷಕ್ಕೊಮ್ಮೆ ಸುಖ-ಶಾಂತಿ ಬಯಸಿ ಲೋಕಕಲ್ಯಾಣಾರ್ಥವಾಗಿ 2 ದಿನಗಳ ಧಾರ್ಮಿಕ ಕಾರ್ಯಕ್ರಮಗಳೂ ಜರುಗುತ್ತವೆ. ದೇವಸ್ಥಾನದ ಆವರಣದಲ್ಲಿ ನವಗ್ರಹ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಚೌಡಮ್ಮ ತಾಯಿಯ ಸಣ್ಣ ದೇವಸ್ಥಾನವೂ ಇಲ್ಲಿದೆ.