ರಟ್ಟೀಹಳ್ಳಿ : ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸರಕಾರ ಲಕ್ಷಾಂತರ ಹಣ ವ್ಯಯಿಸಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿದೆ. ಆದರೆ, ಇಲ್ಲಿಯವರೆಗೂ ಒಂದೇ ಒಂದು ಹನಿ ನೀರನ್ನು ಟ್ಯಾಂಕ್ಗಳು ಕಂಡಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ತಾಲೂಕಿನ ತಿಮ್ಮಲಾಪುರ ಗ್ರಾಮದಲ್ಲಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್.
ಗ್ರಾಮದಲ್ಲಿ 10 ವರ್ಷದ ಹಿಂದೆ ಜಲ ನಿರ್ಮಲ ಯೋಜನೆಯ ಬೈರನಪಾದ ಬಹು ಗ್ರಾಮ ನದಿ ನೀರು ಸರಬರಾಜು ಯೋಜನೆಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ನಿರ್ಮಿಸಿದ ದಿನದಿಂದ ಇಲ್ಲಿಯವರೆಗಾದರೂ ಒಂದೇ ಒಂದು ಹನಿ ನೀರು ಕಂಡಿಲ್ಲ. ಲಕ್ಷಾಂತರ ಹಣ ವ್ಯಯಿಸಿ ನಿರ್ಮಿಸಿದ ಟ್ಯಾಂಕ್ಗಳು ಇಂದು ನಿರುಪಯುಕ್ತವಾಗಿ ವ್ಯರ್ಥವಾಗಿ ನಿಂತಿವೆ.
ಇಷ್ಟಾದರೂ ಇದರ ಬಗ್ಗೆ ಸಂಬಂಧಪಟ್ಟವರು ಕಾಳಜಿವಹಿಸಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಟ್ಯಾಂಕ್ಗೆ ನೀರು ಏರುತ್ತಿಲ್ಲ. ಹಾಗಾಗಿ ನೇರವಾಗಿ ಗ್ರಾಮಕ್ಕೆ ನೀರು ಪೂರೈಸುತ್ತಿದ್ದೆವೆ ಎನ್ನುತ್ತಿದ್ದಾರೆ. ಟ್ಯಾಂಕ್ಗೆ ನೀರು ಏರದಿದ್ದರೆ ಟ್ಯಾಂಕ್ ಏಕೆ ನಿರ್ಮಿಸಬೇಕಾಗಿತ್ತು ಎಂಬುವುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ನೀರಿನ ಸಮಸ್ಯೆ:
ನೇಶ್ವಿ ಗ್ರಾ.ಪಂ.ವ್ಯಾಪ್ತಿಗೆ ಸೇರಿರುವ ತಿಮ್ಮಲಾಪುರ ಗ್ರಾಮದಲ್ಲಿ 80 ಮನೆಗಳು ಇದ್ದು, 5-6 ನೂರು ಜನಸಂಖ್ಯೆ ಇದೆ. ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಗ್ರಾ.ಪಂ.ಗಳ ಬೋರವೆಲ್ಗಳಲ್ಲಿ ನೀರು ಕಡಿಮೆಯಾಗಿದ್ದರಿಂದ ಗ್ರಾಮದಲ್ಲಿ ಖಾಸಗಿ ಬೋರವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ.
ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ನೀರು ಪೂರೈಸಲಾಗುತ್ತಿದ್ದು ಸಮರ್ಪಕವಾಗಿ ನೀರು ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ತಿಮ್ಮಲಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಇಲ್ಲಿನ ಜನರು ಶುದ್ಧ ನೀರು ತರುವುದಕ್ಕಾಗಿ ನೇಶ್ವಿ, ಮಕರಿ, ರಟ್ಟೀಹಳ್ಳಿಗೆ ಹೋಗುತ್ತಿದ್ದಾರೆ.
ಗ್ರಾಮದಲ್ಲಿ 10 ವರ್ಷದ ಹಿಂದೆ ಜಲ ನಿರ್ಮಲ ಯೋಜನೆಯ ಬೈರನಪಾದ ಬಹು ಗ್ರಾಮ ನದಿ ನೀರು ಸರಬರಾಜು ಯೋಜನೆಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ನಿರ್ಮಿಸಿದ ದಿನದಿಂದ ಇಲ್ಲಿಯವರೆಗಾದರೂ ಒಂದೇ ಒಂದು ಹನಿ ನೀರು ಕಂಡಿಲ್ಲ. ಲಕ್ಷಾಂತರ ಹಣ ವ್ಯಯಿಸಿ ನಿರ್ಮಿಸಿದ ಟ್ಯಾಂಕ್ಗಳು ಇಂದು ನಿರುಪಯುಕ್ತವಾಗಿ ವ್ಯರ್ಥವಾಗಿ ನಿಂತಿವೆ.
ಇಷ್ಟಾದರೂ ಇದರ ಬಗ್ಗೆ ಸಂಬಂಧಪಟ್ಟವರು ಕಾಳಜಿವಹಿಸಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಟ್ಯಾಂಕ್ಗೆ ನೀರು ಏರುತ್ತಿಲ್ಲ. ಹಾಗಾಗಿ ನೇರವಾಗಿ ಗ್ರಾಮಕ್ಕೆ ನೀರು ಪೂರೈಸುತ್ತಿದ್ದೆವೆ ಎನ್ನುತ್ತಿದ್ದಾರೆ. ಟ್ಯಾಂಕ್ಗೆ ನೀರು ಏರದಿದ್ದರೆ ಟ್ಯಾಂಕ್ ಏಕೆ ನಿರ್ಮಿಸಬೇಕಾಗಿತ್ತು ಎಂಬುವುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ನೀರಿನ ಸಮಸ್ಯೆ:
ನೇಶ್ವಿ ಗ್ರಾ.ಪಂ.ವ್ಯಾಪ್ತಿಗೆ ಸೇರಿರುವ ತಿಮ್ಮಲಾಪುರ ಗ್ರಾಮದಲ್ಲಿ 80 ಮನೆಗಳು ಇದ್ದು, 5-6 ನೂರು ಜನಸಂಖ್ಯೆ ಇದೆ. ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಗ್ರಾ.ಪಂ.ಗಳ ಬೋರವೆಲ್ಗಳಲ್ಲಿ ನೀರು ಕಡಿಮೆಯಾಗಿದ್ದರಿಂದ ಗ್ರಾಮದಲ್ಲಿ ಖಾಸಗಿ ಬೋರವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ.
ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ನೀರು ಪೂರೈಸಲಾಗುತ್ತಿದ್ದು ಸಮರ್ಪಕವಾಗಿ ನೀರು ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ತಿಮ್ಮಲಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಇಲ್ಲಿನ ಜನರು ಶುದ್ಧ ನೀರು ತರುವುದಕ್ಕಾಗಿ ನೇಶ್ವಿ, ಮಕರಿ, ರಟ್ಟೀಹಳ್ಳಿಗೆ ಹೋಗುತ್ತಿದ್ದಾರೆ.