ಅಪರಾಧಗಳಲ್ಲಿ ಯುವಕರು ಭಾಗಿ: ಕಳವಳ
ಬ್ಯಾಡಗಿ : ಹೆಚ್ಚುತ್ತಿರುವ ಅಪರಾಧ ಸಂಖ್ಯೆಗಳಲ್ಲಿ ಬಹುಪಾಲು ಯುವಕರೇ ಪ್ರಮುಖ ಪಾತ್ರ ವಹಿಸುತ್ತಿರುವುದು ದುರಂತದ ಸಂಗತಿ. ದೇಶದ ಅಭಿವೃದ್ಧಿಗೆ ಸಹಕಾರಿಯಾಬೇಕಿದ್ದ ಯುವ ಶಕ್ತಿ ಅಪರಾಧ ಜಗತ್ತಿನ ಭಾಗವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಪಿಎಸ್ಐ ಮಹಾಂತೇಶ ಎಂ.ಎಂ. ಖೇದ ವ್ಯಕ್ತಪಡಿಸಿದರು.
Vijaya Karnataka 13 Dec 2018, 5:00 am
ಬ್ಯಾಡಗಿ : ಹೆಚ್ಚುತ್ತಿರುವ ಅಪರಾಧ ಸಂಖ್ಯೆಗಳಲ್ಲಿ ಬಹುಪಾಲು ಯುವಕರೇ ಪ್ರಮುಖ ಪಾತ್ರ ವಹಿಸುತ್ತಿರುವುದು ದುರಂತದ ಸಂಗತಿ. ದೇಶದ ಅಭಿವೃದ್ಧಿಗೆ ಸಹಕಾರಿಯಾಬೇಕಿದ್ದ ಯುವ ಶಕ್ತಿ ಅಪರಾಧ ಜಗತ್ತಿನ ಭಾಗವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಪಿಎಸ್ಐ ಮಹಾಂತೇಶ ಎಂ.ಎಂ. ಖೇದ ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲಾ ಮತ್ತು ಬ್ಯಾಡಗಿ ಪೊಲೀಸ್ ಇಲಾಖೆ ಸಹಯೋಗದಲ್ಲಿ ಪಟ್ಟಣದ ಎಸ್ಎಸ್ಪಿಎನ್ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಅಪರಾಧ ಸಂಖ್ಯೆಗಳಿಗೆ ಕಡಿವಾಣ ಹಾಕುವಲ್ಲಿ ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ ಕಾನೂನಿನ ಅರಿವಿಲ್ಲದೇ ಯುವ ಜನಾಂಗ ಅಪರಾಧ ಕೃತ್ಯಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದು ಈ ಕುರಿತಂತೆ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.
ರಸ್ತೆ ನಿಯಮಗಳನ್ನು ಪಾಲಿಸಿ: ಇತ್ತೀಚಿನ ದಿನಗಳಲ್ಲಿ ಯುವಕರು ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಾಲನೆ ಮಾಡುತ್ತಿರುವುದು ಹೆಚ್ಚಾಗುತ್ತಿದೆ, ಹೆಲ್ಮೆಟ್ ಕಡ್ಡಾಯ ಮಾಡಿ ಆದೇಶ ಹೋರಡಿಸಿದ್ದರೂ ಕೂಡಾ ಇದಕ್ಕೆ ಕವಿಗೊಡದೆ ವಾಹನ ಚಾಲನೆ ಮಾಡಿ ಅಪಘಾತವಾದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕುಡಿದು ವಾಹನ ಚಾಲನೆ ಮೊಬೈಲ್ನಲ್ಲಿ ಮಾತನಾಡುತ್ತ ವಾಹನ ಚಾಲನೆ ಮಾಡುವುದು ಕೂಡಾ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಸ್ವಯಂ ಜಾಗೃತರಾಗಿ ರಸ್ತೆ ನಿಯಮಗಳನ್ನು ಪಾಲಿಸುವಂತೆ ಕರೆ ನೀಡಿದರು.
ಸಾಮಾಜಿಕ ಜಾಲತಾಣದಿಂದ ದೂರವಿರಿ: ದೇಶದಲ್ಲಿ ಸಂಘರ್ಷ ಹಾಗೂ ಅಪರಾಧ ಪ್ರಕರಣಗಳು ಹೆಚ್ಚಾಗಲು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ವಾಟ್ಸ್ಆಪ್ಗಳು ಕಾರಣವಾಗುತ್ತಿವೆ. ಯಾವುದೇ ಕಾರಣಕ್ಕೂ ವೈಯಕ್ತಿಕ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಬಳಸಬೇಡಿ ಎಂದರಲ್ಲದೇ, ಮುಖ್ಯವಾಗಿ ಮಹಿಳೆಯರು ಅನಾಮಧೇಯ ಕರೆ, ಮಿಸ್ಡ್ ಕಾಲ್, ಮೇಸೆಜ್ಗೆ ಕಿವಿಗೊಡದಿರುವುದು ಕೂಡ ಒಂದು ರೀತಿಯಲ್ಲಿ ನಿಮ್ಮನ್ನು ನೀವು ರಕ್ಷ ಣೆ ಮಾಡಿದಂತಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಎ.ಎಸ್.ಐ.ಗಳಾದ ತಳವಾರ, ಖಾಜಿ, ಬೀರಪ್ಪ ಹೂಲಿಹಳ್ಳಿ, ಎಸ್.ಎಂ.ಅಗಡಿ ಎಚ್.ಎಲ್.ಸುಂಕದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹಾವೇರಿ ಜಿಲ್ಲಾ ಮತ್ತು ಬ್ಯಾಡಗಿ ಪೊಲೀಸ್ ಇಲಾಖೆ ಸಹಯೋಗದಲ್ಲಿ ಪಟ್ಟಣದ ಎಸ್ಎಸ್ಪಿಎನ್ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಅಪರಾಧ ಸಂಖ್ಯೆಗಳಿಗೆ ಕಡಿವಾಣ ಹಾಕುವಲ್ಲಿ ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ ಕಾನೂನಿನ ಅರಿವಿಲ್ಲದೇ ಯುವ ಜನಾಂಗ ಅಪರಾಧ ಕೃತ್ಯಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದು ಈ ಕುರಿತಂತೆ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.
ರಸ್ತೆ ನಿಯಮಗಳನ್ನು ಪಾಲಿಸಿ: ಇತ್ತೀಚಿನ ದಿನಗಳಲ್ಲಿ ಯುವಕರು ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಾಲನೆ ಮಾಡುತ್ತಿರುವುದು ಹೆಚ್ಚಾಗುತ್ತಿದೆ, ಹೆಲ್ಮೆಟ್ ಕಡ್ಡಾಯ ಮಾಡಿ ಆದೇಶ ಹೋರಡಿಸಿದ್ದರೂ ಕೂಡಾ ಇದಕ್ಕೆ ಕವಿಗೊಡದೆ ವಾಹನ ಚಾಲನೆ ಮಾಡಿ ಅಪಘಾತವಾದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕುಡಿದು ವಾಹನ ಚಾಲನೆ ಮೊಬೈಲ್ನಲ್ಲಿ ಮಾತನಾಡುತ್ತ ವಾಹನ ಚಾಲನೆ ಮಾಡುವುದು ಕೂಡಾ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಸ್ವಯಂ ಜಾಗೃತರಾಗಿ ರಸ್ತೆ ನಿಯಮಗಳನ್ನು ಪಾಲಿಸುವಂತೆ ಕರೆ ನೀಡಿದರು.
ಸಾಮಾಜಿಕ ಜಾಲತಾಣದಿಂದ ದೂರವಿರಿ: ದೇಶದಲ್ಲಿ ಸಂಘರ್ಷ ಹಾಗೂ ಅಪರಾಧ ಪ್ರಕರಣಗಳು ಹೆಚ್ಚಾಗಲು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ವಾಟ್ಸ್ಆಪ್ಗಳು ಕಾರಣವಾಗುತ್ತಿವೆ. ಯಾವುದೇ ಕಾರಣಕ್ಕೂ ವೈಯಕ್ತಿಕ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಬಳಸಬೇಡಿ ಎಂದರಲ್ಲದೇ, ಮುಖ್ಯವಾಗಿ ಮಹಿಳೆಯರು ಅನಾಮಧೇಯ ಕರೆ, ಮಿಸ್ಡ್ ಕಾಲ್, ಮೇಸೆಜ್ಗೆ ಕಿವಿಗೊಡದಿರುವುದು ಕೂಡ ಒಂದು ರೀತಿಯಲ್ಲಿ ನಿಮ್ಮನ್ನು ನೀವು ರಕ್ಷ ಣೆ ಮಾಡಿದಂತಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಎ.ಎಸ್.ಐ.ಗಳಾದ ತಳವಾರ, ಖಾಜಿ, ಬೀರಪ್ಪ ಹೂಲಿಹಳ್ಳಿ, ಎಸ್.ಎಂ.ಅಗಡಿ ಎಚ್.ಎಲ್.ಸುಂಕದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.