ಆ್ಯಪ್ನಗರ

ಹಾವೇರಿ: ಎತ್ತು ಮೈ ತೊಳೆಯುತ್ತಿದ್ದ ಇಬ್ಬರು ಯುವಕರು ನದಿಯಲ್ಲಿ ಕೊಚ್ಚಿ ಹೋದರು

ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡರು. ಮಧ್ಯಾಹ್ನದ ಹೊತ್ತಿಗೆ ನೀರಿನಲ್ಲಿ ಕೊಚ್ಚಿಹೋಗಿದ್ದ ಎತ್ತುಗಳ ಶವ ಪತ್ತೆಯಾಗಿವೆ. ಯುವಕರ ಶವಕ್ಕಾಗಿ ಪತ್ತೆ ಕಾರ್ಯ ಮುಂದುವರಿದಿದೆ. ಗ್ರಾಮದ ಜನರು ನದಿ ದಂಡೆಯಲ್ಲಿ ಜಮಾಯಿಸಿ ದುರಂತ ನೆನೆದು ಮರುಗಿದರು.

Vijaya Karnataka Web 21 Sep 2020, 11:20 pm
ರಾಣೇಬೆನ್ನೂರ: ಎತ್ತುಗಳ ಮೈ ತೊಳೆಯಲು ತೆರಳಿದ್ದ ಇಬ್ಬರು ಯುವಕರು ಎತ್ತುಗಳ ಸಮೇತ ತುಂಗಭದ್ರಾ ನದಿಯಲ್ಲಿ ಕೊಚ್ಚಿಹೋದ ಘಟನೆ ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿ ಸಂಭವಿಸಿದೆ.

ತಾಲೂಕಿನ ಅರೇಮಲ್ಲಾಪುರ ಗ್ರಾಮದ ಬೆಟ್ಟಪ್ಪ ಮೋನಪ್ಪ ಮಿಳ್ಳಿ(25), ಜಗದೀಶ ವೆಂಕಪ್ಪ ಐರಣಿ (22) ಎಂಬವರೇ ನದಿಪಾಲಾದ ದುರ್ದೈವಿ ಯುವಕರು. ಸೋಮವಾರ ಇವರಿಬ್ಬರೂ ಎತ್ತು, ಚಕ್ಕಡಿ ಸಮೇತ ನದಿಗೆ ತೆರಳಿದಾಗ ಏಕಾಏಕಿ ನೀರಿನ ಹರಿವು ಹೆಚ್ಚಾಗಿ ದುರ್ಘಟನೆ ಸಂಭವಿಸಿದೆ.

ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡರು. ಮಧ್ಯಾಹ್ನದ ಹೊತ್ತಿಗೆ ನೀರಿನಲ್ಲಿ ಕೊಚ್ಚಿಹೋಗಿದ್ದ ಎತ್ತುಗಳ ಶವ ಪತ್ತೆಯಾಗಿವೆ. ಯುವಕರ ಶವಕ್ಕಾಗಿ ಪತ್ತೆ ಕಾರ್ಯ ಮುಂದುವರಿದಿದೆ. ಗ್ರಾಮದ ಜನರು ನದಿ ದಂಡೆಯಲ್ಲಿ ಜಮಾಯಿಸಿ ದುರಂತ ನೆನೆದು ಮಮ್ಮಲ ಮರುಗಿದರು. ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ