ಆ್ಯಪ್ನಗರ

ಜಮೀರ್‌ ಕೀಳು ಅಭಿರುಚಿ ಹೇಳಿಕೆ: ಪೂಂಜಾ ಟೀಕೆ

ರಾಣೇಬೆನ್ನೂರ: ತಲಾಖ್‌ ವಿಷಯದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಪರದಾಟ ನೋಡಲಾರದೆ ಪ್ರಧಾನಿ ಮೋದಿ ತ್ರಿವಳಿ ತಲಾಖ್‌ ರದ್ದುಪಡಿಸಲು ಕಾಯಿದೆ ರೂಪಿಸಿದರು. ಆದರೆ ಇದನ್ನೇ ಬೇರೆ ರೂಪದಲ್ಲಿ ಅಥೈರ್‍ಸಿರುವ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಅವರು ಮೋದಿ ಅವರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ ಪೂಂಜಾ ಹೇಳಿದರು.

Vijaya Karnataka 22 Apr 2019, 5:00 am
ರಾಣೇಬೆನ್ನೂರ: ತಲಾಖ್‌ ವಿಷಯದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಪರದಾಟ ನೋಡಲಾರದೆ ಪ್ರಧಾನಿ ಮೋದಿ ತ್ರಿವಳಿ ತಲಾಖ್‌ ರದ್ದುಪಡಿಸಲು ಕಾಯಿದೆ ರೂಪಿಸಿದರು. ಆದರೆ ಇದನ್ನೇ ಬೇರೆ ರೂಪದಲ್ಲಿ ಅಥೈರ್‍ಸಿರುವ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಅವರು ಮೋದಿ ಅವರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ ಪೂಂಜಾ ಹೇಳಿದರು.
Vijaya Karnataka Web zamirs tasting statement poonja criticized
ಜಮೀರ್‌ ಕೀಳು ಅಭಿರುಚಿ ಹೇಳಿಕೆ: ಪೂಂಜಾ ಟೀಕೆ


ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಾವೇರಿ ಲೋಕಸಭಾ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಪಾದಯಾತ್ರೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿವಳಿ ತಲಾಖೆಗೆ ಸಂಬಂಧಿಸಿ ಜಾರಿಗೆ ತರಲಾದ ಕಾಯಿದೆಯಿಂದಾಗಿ ಮುಸ್ಲಿಮರು ಮೂರ್ನಾಲ್ಕು ಹೆಂಡತಿಯರನ್ನು ಮಾಡಿಕೊಳ್ಳುವುದು ತಪ್ಪಿಸಿದಂತಾಗಿದೆ. ಇದು ಜಮೀರ್‌ ಅಹ್ಮದ್‌ ಅವರಿಗೆ ಬಹಳ ಸಿಟ್ಟು ತರಿಸಿದ್ದು ಮೋದಿಯವರ ಬಗ್ಗೆ ಮಾತನಾಡಲು ಆಗದೇ ಅವರ ಹೆಂಡತಿ ಕುರಿತು ಮಾತನಾಡುವಷ್ಟು ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರು ದೇಶದ ಪ್ರಧಾನಮಂತ್ರಿ ಕುರಿತು ಅವಹೇಳನವಾಗಿ ಮಾತನಾಡಿರುವುದು ಖಂಡನೀಯ. ಅದಕ್ಕಾಗಿ ಅವರು ಕ್ಷ ಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಜಮೀರ್‌ ಅಹ್ಮದ್‌ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಬಳಿಕ ಕೇರಳ ಮಾದರಿಯ ಭಯೋತ್ಪಾದನೆ ಕೃತ್ಯಗಳು ಇಲ್ಲಿಯೂ ನಡೆಯುತ್ತಿರುವುದು ಅಘಾತಕಾರಿ ಸಂಗತಿ. ಇಂಥ ಆತಂಕದ ಸ್ಥಿತಿಯಿಂದ ಜಿಲ್ಲೆಯನ್ನು ಮುಕ್ತಿಗೊಳಿಸಲು ಪ್ರತಿಯೊಬ್ಬರೂ ಬಿಜೆಪಿಗೆ ಮತ ನೀಡಿ ಆಶೀರ್ವದಿಸಬೇಕು ಎಂದರು.

ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಮಾತನಾಡಿ, ಜಮೀರ್‌ ಅಹ್ಮದ್‌ ಅವರ ಮಾನಸಿಕ ಸ್ಥಿತಿ ಸರಿಯಿಲ್ಲ. ಲೋಕಸಭೆ ಚುನಾವಣೆ ಅವರನ್ನು ಹತಾಶೆರನ್ನಾಗಿ ಮಾಡಿದೆ. ಮತದಾನ ದಿನ ಹತ್ತಿರ ಬಂದಂತೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಮೋದಿ ಬಗ್ಗೆ ಜಮೀರ್‌ ಹೇಳಿಕೆ ನೀಡಿದ ಬಳಿಕ ನಾನು ಜಮೀರ್‌ ಅನ್ನುವ ಪದದ ಅರ್ಥ ಹುಡುಕಿದ್ದೇನೆ. ಜಮೀರ್‌ ಅಂದರೆ ಆತ್ಮ ಅಂತಕರಣ ಎಂದರ್ಥ ಎಂಬುದು ಗೊತ್ತಾಗಿದೆ. ಅಂದರೆ ಮಾನಸಿಕ ಸ್ಥಿತಿ ಅಧೋಗತಿಗೆ ತಲುಪಿದೆ ಎಂಬುದಾಗಿದೆ. ಆದ್ದರಿಂದ ಜಮೀರ್‌ ಅಹ್ಮದ್‌ ಮೊದಲು ಧಾರವಾಡದ ಹುಚ್ಚಾಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು ಎಂದರು.

ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿ, ಪ್ರಕಾಶ ಬುರಡಿಕಟ್ಟಿ, ಚೋಳಪ್ಪ ಕಸವಾಳ, ರಾಮಣ್ಣ ಕೋಲಗಾರ, ನಾಗರಾಜ ಅಡ್ಮನಿ, ದೀಪಕ ಹರಪನಹಳ್ಳಿ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ