ಆ್ಯಪ್ನಗರ

ಅಯೋಧ್ಯೆ ಭೂಮಿ ಪೂಜೆಯಲ್ಲಿ ಪ್ರಧಾನಿ ಭಾಗಿ: ಮೋದಿ ಒಂದು ಧರ್ಮಕ್ಕಷ್ಟೇ ಸಿಮೀತವೇ ಎಂದ ಒವೈಸಿ!

ಅಯೋಧ್ಯೆ ರಾಮ ಜನ್ಮಭೂಮಿಯ ಭೂಮಿ ಪೂಜೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗುವುದನ್ನು ತೀವ್ರವಾಗಿ ವಿರೋಧಿಸಿರುವ ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ, ಭಾರತದ ಪ್ರಧಾನಿ ಕೇವಲ ಒಂದು ಧರ್ಮಕ್ಕಷ್ಟೇ ಸಿಮೀತವೇ ಎಂದು ಪ್ರಶ್ನಿಸಿದ್ದಾರೆ.

Vijaya Karnataka Web 29 Jul 2020, 10:09 am
ಹೈದರಾಬಾದ್: ಪ್ರಧಾನಿ ಮೋದಿ ಇದೇ ಆಗಸ್ಟ್ 5 ರಂದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರದ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಮೂಲಕ ಸಮಸ್ತ ಭಾರತೀಯರ ಕನಸೊಂದು ನನಸಾಗಲಿದೆ.
Vijaya Karnataka Web Asaduddin Owaisi
ಸಂಗ್ರಹ ಚಿತ್ರ


ಆದರೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾಗುವುದನ್ನು ಪ್ರತಿಪಕ್ಷಗಳು ವಿರೋಧಿಸುತ್ತಿವೆ. ಕೆಲವರು ಕೊರೊನಾ ವೈರಸ್ ಹಾವಳಿಯ ಸಮಯದಲ್ಲಿ ಭೂಮಿ ಪೂಜೆ ಏಕೆ ಎಂದು ಪ್ರಶ್ನಸಿದರೆ, ಮತ್ತೆ ಕೆಲವರು ಭೂಮಿ ಪೂಜೆಯಲ್ಲಿ ಪ್ರಧಾನಿ ಉಪಸ್ಥಿತಿ ಕುರಿತು ಚಕಾರ ಎತ್ತಿದ್ದಾರೆ.

ಅಯೋಧ್ಯೆ ಇ-ಭೂಮಿ ಪೂಜೆಗೆ ಕಾಂಗ್ರೆಸ್ ಆಗ್ರಹ!

ಅದರಂತೆ ಅಯೋಧ್ಯೆ ರಾಮ ಜನ್ಮಭೂಮಿಯ ಭೂಮಿ ಪೂಜೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗುವುದನ್ನು ತೀವ್ರವಾಗಿ ವಿರೋಧಿಸಿರುವ ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ, ಭಾರತದ ಪ್ರಧಾನಿ ಕೇವಲ ಒಂದು ಧರ್ಮಕ್ಕಷ್ಟೇ ಸಿಮೀತವೇ ಎಂದು ಪ್ರಶ್ನಿಸಿದ್ದಾರೆ.

ಅಯೋಧ್ಯೆ ಭೂಮಿ ಪೂಜೆಯಲ್ಲಿ ಪ್ರಧಾನಿ ಭಾಗವಹಿಸುವುದರಿಂದ ಸರ್ಕಾರದ ಜಾತ್ಯಾತೀತ ಚಹೆರೆಗೆ ಧಕ್ಕೆ ಬರುತ್ತದೆ ಎಂದಿರುವ ಒವೈಸಿ, ದೇಶದ ಪ್ರಧಾನಿ ಎಲ್ಲಾ ಧರ್ಮೀಯರ ಪ್ರಧಾನಿಯೇ ಹೊರತು ಒಂದು ನಿರ್ದಿಷ್ಟ ಧರ್ಮದ ಪ್ರಧಾನಿ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕವೂ ಭೂಮಿ ಪೂಜೆ ಮಾಡಬಹುದು: ಉದ್ಧವ್ ಠಾಕ್ರೆ!

ಅಯೋಧ್ಯೆ ಭೂಮಿ ಪೂಜೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುವುದರಿಂದ ದೇಶಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದಿರುವ ಅಸದುದ್ದೀನ್ ಒವೈಸಿ, ಭೂಮಿ ಪೂಜೆಗೆ ಪ್ರಧಾನಿ ಹೋಗಬಾರದು ಎಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ