ಆ್ಯಪ್ನಗರ

PFI Ban: ಪಿಎಫ್‌ಐ ನಿಷೇಧವನ್ನು ಬೆಂಬಲಿಸೊಲ್ಲ: ಅಸಾದುದ್ದೀನ್ ಓವೈಸಿ ವಿರೋಧ

PFI Ban for 5 Years: ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಐದು ವರ್ಷಗಳ ಅವಧಿಗೆ ನಿಷೇಧಿಸಿರುವುದನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

Edited byಅಮಿತ್ ಎಂ.ಎಸ್ | TIMESOFINDIA.COM 28 Sep 2022, 9:18 pm

ಹೈಲೈಟ್ಸ್‌:

  • ಪಿಎಫ್‌ಐ ಸಂಘಟನೆ ಮೇಲೆ ಐದು ವರ್ಷಗಳ ನಿಷೇಧ
  • ನಿಷೇಧ ಕ್ರಮವನ್ನು ಬೆಂಬಲಿಸಲಾಗದು ಎಂದ ಓವೈಸಿ
  • ಯುಎಪಿಎ ಕಾಯ್ದೆಗೆ ಅಸಾದುದ್ದೀನ್ ಓವೈಸಿ ವಿರೋಧ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web asaduddin owaisi
ಹೈದರಾಬಾದ್: ಕೆಲವು ವ್ಯಕ್ತಿಗಳು ಅಪರಾಧ ಕೃತ್ಯ ಎಸಗಿದ್ದಾರೆ ಎಂಬ ಕಾರಣಕ್ಕೆ ಸಂಘಟನೆಯನ್ನೇ ನಿಷೇಧ ಮಾಡಬೇಕು ಎನ್ನುವುದು ಸರಿಯಾದ ಕ್ರಮವಲ್ಲ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಿಷೇಧವನ್ನು ಎಐಎಂಐ ಮುಖಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.
ತಾವು ಯಾವಾಗಲೂ ಪಿಎಫ್‌ಐನ ನಡೆಯನ್ನು ಟೀಕಿಸಿದ್ದಾಗಿ ಮತ್ತು ಪ್ರಜಾಸತ್ತಾತ್ಮಕ ನಡೆಯನ್ನು ಬೆಂಬಲಿಸಿರುವುದಾಗಿ ಓವೈಸಿ ಪ್ರತಿಪಾದಿಸಿದ್ದಾರೆ. ಸಂಘಟನೆಯೊಂದರ ಜತೆ ನಂಟು ಹೊಂದಿದ್ದಾರೆ ಎನ್ನುವುದು ಯಾರನ್ನೋ ಶಿಕ್ಷೆಗೆ ಒಳಪಡಿಸಲು ಪ್ರಬಲ ಕಾರಣವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಕೂಡ ತೀರ್ಪು ನೀಡಿತ್ತು ಎಂದು ಹೇಳಿದ್ದಾರೆ.
PFI Ban: ನಿಷೇಧದ ಬಳಿಕ ಸಂಘಟನೆಯನ್ನು ವಿಸರ್ಜಿಸಿದ ಪಿಎಫ್‌ಐ

"ಈ ಮಾದರಿಯ ಕಠೋರ ನಿಷೇಧವು ಅಪಾಯಕಾರಿಯಾಗಿದೆ. ಏಕೆಂದರೆ ಇದು ತನ್ನ ಮನಸಿನಾಳದಿಂದ ಮಾತನಾಡಲು ಬಯಸುವ ಯಾವುದೇ ಮುಸ್ಲಿಂ ವ್ಯಕ್ತಿ ಮೇಲಿನ ನಿಷೇಧವಾಗಿದೆ. ಭಾರತದ ಚುನಾವಣಾ ಪರಿಪೂರ್ಣತೆಯು ಫ್ಯಾಸಿಸಂ ಕಡೆಗೆ ಹೋಗುತ್ತಿರುವಾಗ, ಪ್ರತಿ ಮುಸ್ಲಿಂ ಯುವಕರನ್ನೂ ಈಗ ಪಿಎಫ್‌ಐ ಕರಪತ್ರದೊಂದಿಗೆ ಭಾರತದ ಕರಾಳ ಕಾನೂನಾದ ಯುಎಪಿಎ ಅಡಿ ಬಂಧಿಸಲಾಗುತ್ತದೆ" ಎಂದು ಓವೈಸಿ ಹೇಳಿದ್ದಾರೆ.

"ಖಾಜಾ ಅಜ್ಮೇರಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರು ನಂಟು ಹೊಂದಿದ್ದ ಸಂಘಟನೆಯನ್ನು ನಿಷೇಧಿಸಿದಲ್ಲ. ಆದರೆ ಪಿಎಫ್‌ಐ ಅನ್ನು ಹೇಗೆ ನಿಷೇಧಿಸಿದ್ದಾರೆ? ಸರ್ಕಾರವು ಬಲಪಂಥೀಯ ಬಹುಸಂಖ್ಯಾತ ಸಂಘಟನೆಗಳನ್ನು ಏಕೆ ನಿಷೇಧ ಮಾಡಿಲ್ಲ?" ಎಂದು ಪ್ರಶ್ನಿಸಿದ್ದಾರೆ.
PFI Ban - UAPA Explained: ಪಿಎಫ್‌ಐ ನಿಷೇಧ: ಏನಿದು ಯುಎಪಿಎ ಕಾಯ್ದೆ? ನಿಷೇಧಕ್ಕೆ ಒಳಗಾಗಿರುವ ಎಲ್ಲ ಸಂಘಟನೆಗಳ ಪಟ್ಟಿ

"ಕೋರ್ಟ್‌ಗಳಿಂದ ಖುಲಾಸೆಗೊಳ್ಳುವ ಮುನ್ನ ಮುಸ್ಲಿಮರು ದಶಕಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ. ನಾನು ಯುಎಪಿಎಯನ್ನು ವಿರೋಧಿಸಿದ್ದೆ. ಯುಎಪಿಎ ಅಡಿ ತೆಗೆದುಕೊಳ್ಳುವ ಎಲ್ಲ ಕ್ರಮಗಳನ್ನೂ ನಾನು ವಿರೋಧಿಸುತ್ತೇನೆ. ಇದು ಸಂವಿಧಾನದ ಮೂಲ ರಚನೆಯಾಗಿರುವ ಸ್ವಾತಂತ್ರ್ಯದ ತತ್ವವನ್ನು ಹತ್ತಿಕ್ಕುವ ಕೆಲಸ ಮಾಡುತ್ತದೆ. ಯುಎಪಿಎಯನ್ನು ಕಠಿಣಗೊಳಿಸಲು ಕಾಂಗ್ರೆಸ್ ಅದಕ್ಕೆ ತಿದ್ದುಪಡಿ ತಂದಿತ್ತು ಮತ್ತು ಬಿಜೆಪಿಯು ಕಾನೂನಿಗೆ ತಿದ್ದುಪಡಿ ತಂದಾಗ ಅದನ್ನು ಮತ್ತಷ್ಟು ಕಠಿಣಗೊಳಿಸಿತ್ತು ಹಾಗೂ ಅದಕ್ಕೆ ಕಾಂಗ್ರೆಸ್ ಬೆಂಬಲ ನೀಡಿತ್ತು ಎನ್ನುವುದನ್ನು ನಾವು ನೆನಪಿಡಬೇಕು. ಈ ಪ್ರಕರಣವು ಕಪ್ಪನ್ (ಪತ್ರಕರ್ತ ಸಿದ್ದಿಕಿ ಕಪ್ಪನ್) ಪ್ರಕರಣದಂತೆಯೇ ಸಾಗಲಿದೆ. ಯಾವುದೇ ಕಾರ್ಯಕರ್ತ ಅಥವಾ ಪತ್ರಕರ್ತನನ್ನು ಮನಬಂದಂತೆ ಬಂಧಿಸಲಾಗುತ್ತದೆ ಮತ್ತು ಜಾಮೀನು ಪಡೆಯಲು ಸಹ ಎರಡು ವರ್ಷ ಬೇಕಾಗುತ್ತದೆ" ಎಂದು ಹೇಳಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ