ಹೈದರಾಬಾದ್: ಈ ಬಾರಿಯ ಹೈದರಾಬಾದ್ ಮಹಾನಗರ ಪಾಲಿಕೆ(GHMC) ಚುನಾವಣೆ ಬಿಜೆಪಿ VS ಎಐಎಂಐಎಂ ಎಂಬಂತಾಗಿದ್ದು, ಈ ಎರಡೂ ಪಕ್ಷಗಳ ಅಬ್ಬರ ಜೋರಾಗಿದೆ.
GHMC ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿ ಬರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಬಿಜೆಪಿ ಪ್ರಧಾನಿ ಮೋದಿ ಅವರನ್ನು ಪ್ರಚಾರಕ್ಕೆ ಕರೆತರಲಿ. ಹೈದರಾಬಾದ್ ಯಾರದ್ದು ಎಂಬುದು ನಿರ್ಣಯವಾಗಿಯೇ ಬಿಡಲಿ ಎಂದು ಒವೈಸಿ ಬಹಿರಂಗ ಸವಾಲು ಹಾಕಿದ್ದಾರೆ.
ಬಿಜೆಪಿ GHMC ಪ್ರಚಾರಕ್ಕೆ ಟ್ರಂಪ್ ಅವರನ್ನಾದರೂ ಕರೆತರಲಿ: ಕೆಟಿಆರ್ ರಾವ್ ವ್ಯಂಗ್ಯ!
ಅಭಿವೃದ್ಧಿ ಅಜೆಂಡಾ ಮರೆತಿರುವ ಬಿಜೆಪಿ, ಹಳೆ ಹೈದರಾಬಾದ್ ಭಾಗದಲ್ಲಿ ಪಾಕಿಸ್ತಾನಿಯರು ನುಸುಳಿದ್ದಾರೆ ಎಂದು ಸುಳ್ಳು ಪ್ರಚಾರ ನಡೆಸುತ್ತಿದೆ. ಒಂದು ವೇಳೆ ಇಲ್ಲಿ ಪಾಕಿಸ್ತಾನಿಯರು ಆಶ್ರಯ ಪಡೆದಿದ್ದರೆ ಅದು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವೈಫಲ್ಯವಲ್ಲವೇ ಎಂದು ಅಸಾದುದ್ದೀನ್ ಒವೈಸಿ ಪ್ರಶ್ನಿಸಿದ್ದಾರೆ.
ನಾವು ಪ್ರಧಾನಿ ಮೋದಿ GHMC ಚುನಾವಣಾ ಪ್ರಚಾರಕ್ಕೆ ಬರುವುದನ್ನು ಕಾಯುತ್ತೇವೆ. ಅವರು ಇಲ್ಲಿ ಪ್ರಚಾರ ನಡೆಸಲಿ. ಹೈದರಾಬಾದ್ ನಗರ ಯಾರಿಗೆ ಸೇರಿದ್ದು ಎಂದು ಚುನಾವಣಾ ಫಲಿತಾಂಶ ಬಂದ ಬಳಿಕ ಬಿಜೆಪಿಗೆ ಗೊತ್ತಾಗಲಿದೆ ಎಂದು ಒವೈಸಿ ವ್ಯಂಗ್ಯವಾಡಿದ್ದಾರೆ.
ನಗರರದ ಹಿಂದೂ-ಮುಸ್ಲಿಮ್ ಭಾವೈಕ್ಯತೆ ಕೊಳ್ಳಿ ಇಡಲು ಪ್ರಯತ್ನಿಸಿರುವ ಬಿಜೆಪಿಗೆ ಮತದಾರನೇ ತಕ್ಕ ಪಾಠ ಕಲಿಸಲಿದ್ದು, ಪಕ್ಷದ ಅಭಿವೃದ್ಧಿ ಕಾರ್ಯಗಳು ನಮ್ಮ ಕೈಹಿಡಿಯಲಿದೆ ಎಂದು ಒವೈಸಿ ಈ ವೇಳೆ ಭರವಸೆ ವ್ಯಕ್ತಪಡಿಸಿದರು.
ಹೈದರಾಬಾದ್ ಪಾಲಿಕೆ ಚುನಾವಣೆಗೆ ಮೋದಿ ಪ್ರಚಾರ?: ತೆಲಂಗಾಣ 'ಗೆಲುವಿನ ಪಥ'ಕ್ಕೆ ಬಿಜೆಪಿ ಶಪಥ!
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ GHMC ಚುನಾವಣೆಯಲ್ಲಿ ಪ್ರಚಾರ ನಡೆಸಲಿದ್ದಾರೆ ಎಂಬ ಮಾತುಗಳು ತೆಲಂಗಾಣ ಬಿಜೆಪಿ ಘಟಕದಲ್ಲಿ ಕೇಳಿ ಬರುತ್ತಿವೆ. ಈ ಕುರಿತು ಪಕ್ಷ ಇನ್ನೂ ಅಧಿಕೃತ ಹೇಳಿಕೆ ನೀಡುವುದು ಬಾಕಿ ಇದೆ.
GHMC ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿ ಬರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಬಿಜೆಪಿ ಪ್ರಧಾನಿ ಮೋದಿ ಅವರನ್ನು ಪ್ರಚಾರಕ್ಕೆ ಕರೆತರಲಿ. ಹೈದರಾಬಾದ್ ಯಾರದ್ದು ಎಂಬುದು ನಿರ್ಣಯವಾಗಿಯೇ ಬಿಡಲಿ ಎಂದು ಒವೈಸಿ ಬಹಿರಂಗ ಸವಾಲು ಹಾಕಿದ್ದಾರೆ.
ಬಿಜೆಪಿ GHMC ಪ್ರಚಾರಕ್ಕೆ ಟ್ರಂಪ್ ಅವರನ್ನಾದರೂ ಕರೆತರಲಿ: ಕೆಟಿಆರ್ ರಾವ್ ವ್ಯಂಗ್ಯ!
ಅಭಿವೃದ್ಧಿ ಅಜೆಂಡಾ ಮರೆತಿರುವ ಬಿಜೆಪಿ, ಹಳೆ ಹೈದರಾಬಾದ್ ಭಾಗದಲ್ಲಿ ಪಾಕಿಸ್ತಾನಿಯರು ನುಸುಳಿದ್ದಾರೆ ಎಂದು ಸುಳ್ಳು ಪ್ರಚಾರ ನಡೆಸುತ್ತಿದೆ. ಒಂದು ವೇಳೆ ಇಲ್ಲಿ ಪಾಕಿಸ್ತಾನಿಯರು ಆಶ್ರಯ ಪಡೆದಿದ್ದರೆ ಅದು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವೈಫಲ್ಯವಲ್ಲವೇ ಎಂದು ಅಸಾದುದ್ದೀನ್ ಒವೈಸಿ ಪ್ರಶ್ನಿಸಿದ್ದಾರೆ.
ನಾವು ಪ್ರಧಾನಿ ಮೋದಿ GHMC ಚುನಾವಣಾ ಪ್ರಚಾರಕ್ಕೆ ಬರುವುದನ್ನು ಕಾಯುತ್ತೇವೆ. ಅವರು ಇಲ್ಲಿ ಪ್ರಚಾರ ನಡೆಸಲಿ. ಹೈದರಾಬಾದ್ ನಗರ ಯಾರಿಗೆ ಸೇರಿದ್ದು ಎಂದು ಚುನಾವಣಾ ಫಲಿತಾಂಶ ಬಂದ ಬಳಿಕ ಬಿಜೆಪಿಗೆ ಗೊತ್ತಾಗಲಿದೆ ಎಂದು ಒವೈಸಿ ವ್ಯಂಗ್ಯವಾಡಿದ್ದಾರೆ.
ನಗರರದ ಹಿಂದೂ-ಮುಸ್ಲಿಮ್ ಭಾವೈಕ್ಯತೆ ಕೊಳ್ಳಿ ಇಡಲು ಪ್ರಯತ್ನಿಸಿರುವ ಬಿಜೆಪಿಗೆ ಮತದಾರನೇ ತಕ್ಕ ಪಾಠ ಕಲಿಸಲಿದ್ದು, ಪಕ್ಷದ ಅಭಿವೃದ್ಧಿ ಕಾರ್ಯಗಳು ನಮ್ಮ ಕೈಹಿಡಿಯಲಿದೆ ಎಂದು ಒವೈಸಿ ಈ ವೇಳೆ ಭರವಸೆ ವ್ಯಕ್ತಪಡಿಸಿದರು.
ಹೈದರಾಬಾದ್ ಪಾಲಿಕೆ ಚುನಾವಣೆಗೆ ಮೋದಿ ಪ್ರಚಾರ?: ತೆಲಂಗಾಣ 'ಗೆಲುವಿನ ಪಥ'ಕ್ಕೆ ಬಿಜೆಪಿ ಶಪಥ!
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ GHMC ಚುನಾವಣೆಯಲ್ಲಿ ಪ್ರಚಾರ ನಡೆಸಲಿದ್ದಾರೆ ಎಂಬ ಮಾತುಗಳು ತೆಲಂಗಾಣ ಬಿಜೆಪಿ ಘಟಕದಲ್ಲಿ ಕೇಳಿ ಬರುತ್ತಿವೆ. ಈ ಕುರಿತು ಪಕ್ಷ ಇನ್ನೂ ಅಧಿಕೃತ ಹೇಳಿಕೆ ನೀಡುವುದು ಬಾಕಿ ಇದೆ.