ಆ್ಯಪ್ನಗರ

ಪೊಲೀಸರು ಸೀಜ್ ಮಾಡಿದ ಬಿಜೆಪಿ ಅಭ್ಯರ್ಥಿಯ 18 ಲಕ್ಷ ಹಣಕ್ಕಾಗಿ ಕಿತ್ತಾಡಿಕೊಂಡ ಅದೇ ಪಕ್ಷದ ಕಾರ್ಯಕರ್ತರು..!

ಬಿಜೆಪಿ ಕಾರ್ಯಕರ್ತರು ಹಣವನ್ನು ಕದಿಯುತ್ತಿರುವ ವಿಡಿಯೋ ದಾಖಲೆ ಇದೆ. ಎಲ್ಲರನ್ನೂ ಬಂಧಿಸಿ ಅವರ ವಿರುದ್ಧ ಕ್ರಿಮಿನಲ್ ಮತ್ತು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸುತ್ತೇವೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ

TIMESOFINDIA.COM 27 Oct 2020, 2:15 pm
ಸಿದ್ದಿಪೇಟೆ: ತೆಲಂಗಾಣದ ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಡುಬ್ಬಾಕ್‌ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘುನಂದನ್‌ ರಾವ್‌ಗೆ ಸೇರಿದ ಸುಮಾರು 18.67 ಲಕ್ಷ ರೂಪಾಯಿ ಅಕ್ರಮ ಹಣವನ್ನು ಅವರ ಸಂಬಂಧಿಕರ ಮನೆಯಿಂದ ವಶಪಡಿಸಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣ ನೂರು ವರ್ಷದಲ್ಲಿ ಇಂತಹ ಭೀಕರ ಮಳೆ ಕಂಡಿರಲಿಲ್ಲ: ಕೆಸಿಆರ್‌ ಪರಿಹಾರ ಘೋಷಣೆ!

ವಿಪರ್ಯಾಸ ಅಂದ್ರೆ ಬಿಜೆಪಿ ಅಭ್ಯರ್ಥಿ ರಘುನಂದನ್ ರಾವ್ ಅವರಿಗೆ ಸೇರಿದ್ದ 18.67 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಕ್ಕಿಂತಲೂ ಹೆಚ್ಚು ಸುದ್ದಿಯಾಗಿರೋದು ನಂತರ ನಡೆದ ಘಟನೆ. ಹೌದು.. ಸೋಮವಾರ ರಘುನಂದನ್ ಅವರ ಸಂಬಂಧಿಕರಾದ ಗೋಪಾಲ್ ರಾವ್ ಅವರ ಮನೆಯಿಂದ 18.67 ಲಕ್ಷ ರೂಪಾಯಿ ಅಕ್ರಮ ಹಣವನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಅಲ್ಲೇ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಪೊಲೀಸರ ಕೈಯಿಂದ ಎಲ್ಲಾ ಹಣವನ್ನು ಕಸಿದುಕೊಂಡಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ಮಂದಿ 18.67 ಲಕ್ಷ ರೂಪಾಯಿ ಹಣವನ್ನು ಪೊಲೀಸರಿಂದ ಕಿತ್ತುಕೊಳ್ಳಲು ಪ್ರಯತ್ನಿಸಿದ್ದು ಅದಾಗ್ಯೂ ಸುಮಾರು 12 ಲಕ್ಷ ರೂಪಾಯಿ ಹಣವನ್ನು ಕಸಿದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಜೋಯಲ್ ಡೇವಿಸ್ ಹೇಳಿದ್ದಾರೆ.

ತೆಲಂಗಾಣದಲ್ಲಿ ಮಹಾಮಳೆಗೆ 70 ಬಲಿ, ಹೈದರಾಬಾದ್‌ನಲ್ಲೇ 33 ಸಾವು

ಅಲ್ಲದೇ ನಮ್ಮಲ್ಲಿ ಹಣವನ್ನು ಕದಿಯುತ್ತಿರುವ ವಿಡಿಯೋ ದಾಖಲೆ ಇದೆ. ಎಲ್ಲರನ್ನೂ ಬಂಧಿಸಿ ಅವರ ವಿರುದ್ಧ ಕ್ರಿಮಿನಲ್ ಮತ್ತು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸುತ್ತೇವೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ. ಅಕ್ರಮ ಹಣ ಸಂಗ್ರಹ ಇರುವ ಬಗ್ಗೆ ಖಚಿತ ಮಾಹಿತಿ ತಿಳಿದಿದ್ದ ಪೊಲೀಸರು ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದರು. ಆದರೆ ಗೋಪಾಲ್ ರಾವ್ ಮನೆಯಲ್ಲಿ ಅಕ್ರಮ ಹಣ ಪತ್ತೆಯಾಗಿದೆ.

ಇನ್ನೊಂದೆಡೆ ಪೊಲೀಸರೇ ಈ ಹಣವನ್ನು ಗೋಪಾಲ್ ರಾವ್ ಅವರ ಮನೆಯಲ್ಲಿ ಬಲವಂತವಾಗಿ ತಂದು ಇರಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದು, ಚುನಾವಣೆಯಲ್ಲಿ ರಘುನಂದನ್ ರಾವ್ ಅವರನ್ನು ಸೋಲಿಸಲು ಈ ರೀತಿಯ ಕೃತ್ಯ ಮಾಡಲಾಗ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಎರಡೂ ಕಡೆಗಳಿಂದ ಗಂಭೀರ ಆರೋಪ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಗೃಹ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಅವರು ಹೈದರಾಬಾದ್‌ನಿಂದ ಸಿದ್ದಿಪೇಟೆಗೆ ಆಗಮಿಸಿದ್ದಾರೆ.

ಮಟ ಮಟ ಮಧ್ಯಾಹ್ನವೇ ಶೂಟೌಟ್‌ ಮಾಡಿದ ಕಿರಾತಕರು; ಹರ್ಯಾಣದ ರಸ್ತೆಯಲ್ಲಿ ಬಿತ್ತು 21ರ ಯುವತಿಯ ಹೆಣ..!

ಘಟನೆ ಸಂಬಂಧ ವಿಜಯ ಕರ್ನಾಟಕ ಸೋದರ ಪತ್ರಿಕೆ ‘ಟೈಮ್ಸ್‌ ಆಫ್‌ ಇಂಡಿಯಾ’ಗೆ ಪ್ರತಿಕ್ರಿಯಿಸಿರೋ ಸಿದ್ದಿಪೇಟೆ ಪೊಲೀಸ್ ಆಯುಕ್ತ ಜೋಯಲ್ ಡೇವಿಸ್ ‘20 ಮಂದಿ ಅಧಿಕಾರಿಗಳು ಕಾನೂನುಬದ್ಧವಾಗಿ ವಶಪಡಿಸಿಕೊಂಡಿರುವ ಹಣವನ್ನು ಬಿಜೆಪಿ ಅಭ್ಯರ್ಥಿ ರಘುನಂದನ್ ಅವರು ತನ್ನ 250ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬಂದು ಹಣವನ್ನು ಕಸಿದುಕೊಂಡಿದ್ದಾರೆ. ಘಟನೆ ಸಂದರ್ಭ ನಮ್ಮ ಪೊಲೀಸ್‌ ಕಾನ್ಸ್‌ಟೇಬಲ್‌ಗಳ ಮೇಲೂ ರಘುನಂದನ್ ಮತ್ತು ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಪ್ರತ್ಯೇಕ ದೂರು ದಾಖಲಾಗಿದೆ’ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ