ಆ್ಯಪ್ನಗರ

ಎನ್‌ಟಿಆರ್ ವಿವಿಗೆ ಅಪ್ಪನ ಹೆಸರಿನಲ್ಲಿ ಮರುನಾಮಕರಣ: ಜಗನ್ ರೆಡ್ಡಿ ನಡೆಗೆ ವ್ಯಾಪಕ ಆಕ್ರೋಶ

NTR University: ಆಂಧ್ರಪ್ರದೇಶದ ನಟ, ಮಾಜಿ ಸಿಎಂ ದಿವಂಗತ ಎನ್‌ಟಿ ರಾಮರಾವ್ ಅವರ ಹೆಸರು ಹೊಂದಿರುವ ಎನ್‌ಟಿಆರ್ ಆರೋಗ್ಯ ವಿಜ್ಞಾನ ವಿವಿಗೆ ತಮ್ಮ ತಂದೆ ವೈಎಸ್ ರಾಜಶೇಖರ ರೆಡ್ಡಿ ಅವರ ಹೆಸರಿಡಲು ಮಸೂದೆ ಅಂಗೀಕರಿಸಿರುವ ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.

Edited byಅಮಿತ್ ಎಂ.ಎಸ್ | Vijaya Karnataka Web 23 Sep 2022, 6:04 pm

ಹೈಲೈಟ್ಸ್‌:

  • ಆಂಧ್ರಪ್ರದೇಶದಲ್ಲಿ ಜಗನ್ ರೆಡ್ಡಿ ಸರ್ಕಾರದ ವಿರುದ್ಧ ಆಕ್ರೋಶ
  • ಎನ್‌ಟಿಆರ್ ಆರೋಗ್ಯ ವಿವಿಗೆ ಮರುನಾಮಕರಣಕ್ಕೆ ನಿರ್ಧಾರ
  • ತಂದೆ ವೈಎಸ್ ರಾಜಶೇಖರ ರೆಡ್ಡಿ ಹೆಸರಿಡಲು ತೀರ್ಮಾನ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Jagan reddy
ಹೈದರಾಬಾದ್: ಎನ್‌ಟಿಆರ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ತಮ್ಮ ತಂದೆಯ ಹೆಸರಿಟ್ಟು ಮರುನಾಮಕರಣ ಮಾಡಲು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮುಂದಾಗಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಈ ವಿಚಾರದಲ್ಲಿ ಮಧ್ಯಪ್ರದೇಶ ಮಾಡುವಂತೆ ರಾಜ್ಯಪಾಲ ವಿಶ್ವಭೂಷಣ್ ಹರಿಶ್ಚಂದ್ರ ಅವರಿಗೆ ಎನ್ ಚಂದ್ರಬಾಬು ನಾಯ್ಡು ಅವರ ತೆಲುಗು ದೇಸಂ ಪಕ್ಷ ಮನವಿ ಮಾಡಿದೆ.
ತೆಲಂಗಾಣ ರಾಜಕಾರಣಕ್ಕೆ ವೈಎಸ್‌ಆರ್‌ ಕುಟುಂಬ ಎಂಟ್ರಿ, ಹೊಸ ಪಕ್ಷ ಹುಟ್ಟುಹಾಕಲಿದ್ದಾರೆ ಜಗನ್‌ ರೆಡ್ಡಿ ತಂಗಿ

ಎನ್‌ಟಿಆರ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (ಯುಎಚ್‌ಎಸ್) ವೈಎಸ್‌ಆರ್ ಯುಎಚ್‌ಎಸ್ ಎಂದು ಮರುನಾಮಕರಣ ಮಾಡುವ ಮಸೂದೆಯನ್ನು ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಮುಂದಿಟ್ಟಿದೆ. ಟಿಡಿಪಿ ಮತ್ತು ಇತರೆ ಪಕ್ಷಗಳ ಬಲವಾದ ಪ್ರತಿಭಟನೆ ನಡುವೆಯೂ ಮಸೂದೆಗೆ ಅಂಗೀಕಾರ ದೊರಕಿದೆ.

"ಜನರ ಭಾವನೆಗಳನ್ನು ಪರಿಗಣಿಸದೆಯೆ ಸರ್ಕಾರವು ತೆಗೆದುಕೊಂಡಿರುವ ಏಕಪಕ್ಷೀಯ ನಿರ್ಧಾರಗಳನ್ನು ಆಂಧ್ರಪ್ರದೇಶ ರಾಜ್ಯಪಾಲರ ಗಮನಕ್ಕೆ ತರಲಾಗಿದೆ" ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
NTR Daughter suicide: ಎನ್‌ಟಿಆರ್ ಪುತ್ರಿ ಉಮಾ ಮಹೇಶ್ವರಿ ಆತ್ಮಹತ್ಯೆ

ಆರೋಗ್ಯ ವಿಜ್ಞಾನಗಳ ವಿವಿಗೆ ತಮ್ಮ ತಂದೆ, ದಿವಂಗತ ವೈಎಸ್ ರಾಜಶೇಖರ್ ರೆಡ್ಡಿ ಅವರ ಹೆಸರಿಡುವ ನಿರ್ಧಾರವನ್ನು ಜಗನ್ ಸಮರ್ಥಿಸಿಕೊಂಡಿದ್ದಾರೆ. ಇದು ಡಾ. ವೈಎಸ್ ರಾಜಶೇಖರ ರೆಡ್ಡಿ ಅವರಿಗೆ ನೀಡುವ ಶ್ರೇಯಸ್ಸೇ ವಿನಾ, ಎನ್‌ಟಿಆರ್ ಅವರಿಗೆ ತೋರಿಸುತ್ತಿರುವ ಅಗೌರವವಲ್ಲ ಎಂದಿದ್ದಾರೆ.

ರಾಜಕೀಯಕ್ಕೆ ಬರುವ ಮುನ್ನ ವೈಎಸ್‌ಆರ್ ಅವರು ವೈದ್ಯರಾಗಿದ್ದರು. ತಮ್ಮ 108 ಮತ್ತು 104 ಆಂಬುಲೆನ್ಸ್ ಸೇವೆಗಳ ಜತೆಗೆ ಆರೋಗ್ಯಾಶ್ರೀ ಯೋಜನೆ ಮೂಲಕ ಜನಸಾಮಾನ್ಯರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯ ಒದಗಿಸಿದ್ದರು. ಇದಕ್ಕಾಗಿ ಅವರ ಹೆಸರು ಇಡುವುದು ಅರ್ಹವಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ - ಜೂ. ಎನ್‌ಟಿಆರ್‌ ಭೇಟಿಗೆ ಕಾರಣವೇನು? ಸಂಚಲನ ಮೂಡಿಸಿದ ಮೀಟಿಂಗ್!

ಎನ್‌ಟಿ ರಾಮ ರಾವ್ ಅವರು ಈ ಆರೋಗ್ಯ ವಿಜ್ಞಾನ ವಿವಿಯನ್ನು ತಮ್ಮ ಆಡಳಿತ ಅವಧಿಯಲ್ಲಿ ಸ್ಥಾಪಿಸಿದ್ದರು. 1986ರ ಏಪ್ರಿಲ್‌ನಲ್ಲಿ ಅದನ್ನು ಉದ್ಘಾಟಿಸಿದ್ದರು. ಅವರ ನಿಧನದ ಬಳಿಕ 1998ರಲ್ಲಿ ವಿವಿಗೆ ಡಾ. ಎನ್‌ಟಿಆರ್ ವಿವಿ ಎಂಬ ಹೆಸರು ಇರಿಸಲಾಗಿತ್ತು.

ಜೂನಿಯರ್ ಎನ್‌ಟಿಆರ್ ಪ್ರತಿಕ್ರಿಯೆ ಈಗ ಜಗನ್ ಅವರ ನಡೆ ಎನ್‌ಟಿಆರ್ ಅಭಿಮಾನಿಗಳನ್ನು ಕೆರಳಿಸಿದೆ. "ಎನ್‌ಟಿಆರ್ ಮತ್ತು ವೈಎಸ್ಆರ್ ಇಬ್ಬರೂ ಅಪಾರ ಜನಪ್ರಿಯತೆ ಪಡೆದ ಮಹಾನ್ ನಾಯಕರು. ಒಬ್ಬರ ಹೆಸರನ್ನು ಮತ್ತೊಬ್ಬರ ಹೆಸರಿನೊಮದಿಗೆ ಬದಲಿಸುವುದು ವೈಎಸ್‌ಆರ್ ಅವರ ಶ್ರೇಷ್ಠತೆಯನ್ನು ಹೆಚ್ಚಿಸುವುದಿಲ್ಲ. ಹಾಗೆಯೇ ಎನ್‌ಟಿಆರ್ ಅವರ ಶ್ರೇಷ್ಠತೆಯನ್ನು ತಗ್ಗಿಸುವುದಿಲ್ಲ. ವಿವಿಯ ಹೆಸರು ಬದಲಿಸುವುದರಿಂದ ಎನ್‌ಟಿಆರ್ ಸಂಪಾದಿಸಿದ್ದ ಖ್ಯಾತಿಯನ್ನು, ತೆಲುಗು ರಾಜ್ಯಗಳಲ್ಲಿನ ಅವರ ಹಿರಿಮೆಯನ್ನು ಮತ್ತು ತೆಲುಗು ಜನರ ಹೃದಯದಲ್ಲಿ ಇರುವ ಅವರ ನೆನಪುಗಳನ್ನು ಅಳಿಸಲು ಸಾಧ್ಯವಿಲ್ಲ" ಎಂದು ಜೂನಿಯರ್ ಎನ್‌ಟಿಆರ್ ಪ್ರತಿಕ್ರಿಯೆ ನೀಡಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ