ಆ್ಯಪ್ನಗರ

ಹೈದರಾಬಾದ್‌ನಲ್ಲಿ ಮತ್ತೊಂದು ಮರ್ಯಾದಾ ಹತ್ಯೆ; ಪತ್ನಿಯ ಎದುರೇ ಪತಿಯನ್ನು ಅಪಹರಿಸಿ ಹತ್ಯೆ

ಪತ್ನಿಯ ಎದುರೇ ಪತಿಯನ್ನು ಅಪಹರಿಸಿ ಹತ್ಯೆಗೈದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪೊಲೀಸರು ಮರ್ಯಾದಾ ಹತ್ಯೆಯ ಶಂಕೆ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ಮೂಲದ ಯುವಕನನ್ನು ಕೊಲೆಗೂ ಮುನ್ನ ಆತನ ಪತ್ನಿಯ ಮನೆಯವರು ಅಪಹರಿಸಿದ್ದು, ನೆರೆಯ ಸಂಗಾರೆಡ್ಡಿ ಜಿಲ್ಲೆಯಲ್ಲಿ ಶವವನ್ನು ಎಸೆಯಲಾಗಿದೆ.

TNN 25 Sep 2020, 7:54 pm
ಹೈದರಾಬಾದ್: ವ್ಯಕ್ತಿಯನ್ನು ಆತನ ಪತ್ನಿಯ ಮನೆಯವರೇ ಹತ್ಯೆಗೈದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೈದರಾಬಾದ್ ಮೂಲದ ಯುವಕನನ್ನು ಕೊಲೆಗೂ ಮುನ್ನ ಆತನ ಪತ್ನಿಯ ಮನೆಯವರು ಅಪಹರಿಸಿದ್ದು, ಮರ್ಯಾದಾ ಹತ್ಯೆಯ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ನೆರೆಯ ಸಂಗಾರೆಡ್ಡಿ ಜಿಲ್ಲೆಯಲ್ಲಿ ಎಸೆಯಲಾಗಿದ್ದ ವ್ಯಕ್ತಿಯ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Vijaya Karnataka Web hyderabad man killed by wifes family in suspected case of honour killing
ಹೈದರಾಬಾದ್‌ನಲ್ಲಿ ಮತ್ತೊಂದು ಮರ್ಯಾದಾ ಹತ್ಯೆ; ಪತ್ನಿಯ ಎದುರೇ ಪತಿಯನ್ನು ಅಪಹರಿಸಿ ಹತ್ಯೆ


ಮೃತನನ್ನು ಹೇಮಂತ್‌ ಎಂದು ಗುರುತಿಸಲಾಗಿದ್ದು, ವೈಶ್ಯ ಸಮುದಾಯಕ್ಕೆ ಸೇರಿದ್ದ ಎನ್ನಲಾಗಿದೆ. ಹೇಮಂತ್‌ ಕಳೆದ ವರ್ಷ ಚಂದಾನಗರದಲ್ಲಿ ವಾಸವಿದ್ದಾಗ ರೆಡ್ಡಿ ಸಮುದಾಯದ ಅವಂತಿ ಎಂಬುವವರನ್ನು ಪ್ರೀತಿಸುತ್ತಿದ್ದ. ಈ ವರ್ಷ ಜುಲೈನಲ್ಲಿ ಹೇಮಂತ್ ಅವಂತಿಯನ್ನು ಆಕೆಯ ಮನೆಯಲ್ಲಿ ಇಷ್ಟವಿಲ್ಲದಿದ್ದರೂ ಮದುವೆಯಾಗಿದ್ದರು. ವಿವಾಹದ ನಂತರ ದಂಪತಿ ಗಚಿಬೌಲಿಯ ಟಿಎನ್‌ಜಿಒ ಕಾಲೋನಿಯಲ್ಲಿ ವಾಸಿಸುತ್ತಿದ್ದರು.

ಗುರುವಾರ ಬೆಳಗ್ಗೆ ಅವಂತಿಯ ಕುಟುಂಬ ಸದಸ್ಯರು ಟಿಎನ್‌ಜಿಒ ಕಾಲೋನಿಯಲ್ಲಿ ದಂಪತಿಯನ್ನು ಭೇಟಿಯಾಗುವುದಾಗಿ ತಿಳಿಸಿದ್ದರು. ಹೇಮಂತ್ ಕೂಡ ತಮ್ಮ ಕುಟುಂಬಕ್ಕೆ ಮಾತುಕತೆಯ ಬಗ್ಗೆ ಮಾಹಿತಿ ನೀಡಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ ಹೇಮಂತ್‌ ತಂದೆ ಮಗನ ಮನೆಗೆ ತಲುಪಿದಾಗ ಅವಂತಿ ಕುಟುಂಬ ದಂಪತಿಯನ್ನು ಕಾರ್‌ನಲ್ಲಿ ಬಲವಂತವಾಗಿ ಕರೆದೊಯ್ಯುತ್ತಿರುವುದನ್ನು ನೋಡಿದ್ದಾರೆ.

ಹೇಮಂತ್ ತಂದೆ ತಮ್ಮ ಬೈಕ್‌ನಲ್ಲಿ ಮತ್ತು ಗೋಪನ್‌ಪಲ್ಲಿ ಬಳಿ ಕಾರನ್ನು ಬೆನ್ನಟ್ಟಿದ್ದರು. ಆಗ ಅವಂತಿ ಕಾರ್‌ನಿಂದ ಹೊರಬಂದಿದ್ದರು. ಆದರೆ, ಹೇಮಂತ್‌ಗೆ ಅದು ಸಾಧ್ಯವಾಗಲಿಲ್ಲ. ಹೇಮಂತ್‌ ಕುಟುಂಬ ಪೊಲೀಸರಿಗೆ ದೂರು ನೀಡಿದ ನಂತರ, ಪೊಲೀಸರು ಅಪಹರಣಕಾರರನ್ನು ಬಂಧಿಸಲು ತನಿಖೆ ಆರಂಭಿಸಿದ್ದಾರೆ.

ಉಕ್ಕಿ ಹರಿಯುತ್ತಿರೋ ನದಿಯಲ್ಲಿ ಜೀವದ ಹಂಗು ತೊರೆದು ನಾಯಿ ರಕ್ಷಣೆ..! ಹೋಮ್‌ ಗಾರ್ಡ್‌ ಕಾರ್ಯಕ್ಕೆ ಮೆಚ್ಚುಗೆ

ಗುರುವಾರ ರಾತ್ರಿ ವೇಳೆಗೆ ಪೊಲೀಸರು ಶಂಕಿತರನ್ನು ಬಂಧಿಸಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಅವರ ಹೇಳಿಕೆ ಆಧರಿಸಿ ಶುಕ್ರವಾರ ಬೆಳಗ್ಗೆ ಸಂಗಾರೆಡ್ಡಿ ಜಿಲ್ಲೆಯಲ್ಲಿ ಹೇಮಂತ್ ಶವವನ್ನು ವಶಪಡಿಸಿಕೊಂಡಿದ್ದು, ಅವಂತಿಯ ಸೋದರ ಮಾವ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.

ತಿಮ್ಮಪ್ಪನ ಹುಂಡಿಗೆ ಒಂದೇ ದಿನ 1 ಕೋಟಿ ರೂ. ಕಾಣಿಕೆ..! ಕೊರೊನಾ ಬಳಿಕ ಚೇತರಿಕೆ ಕಂಡ ಟಿಟಿಡಿ ಆದಾಯ

ನನ್ನ ಕುಟುಂಬಸ್ಥರು ನಮಗೇನು ಮಾಡುವುದಿಲ್ಲ ಎಂದು ನನ್ನನ್ನು ನಂಬಿಸಿದ್ದರು. ಜೊತೆಗೆ ನನ್ನ ಮನೆಯ ವಿಳಾಸವನ್ನು ಕೂಡ ಗೊತ್ತು ಮಾಡಿಕೊಂಡಿದ್ದರು. ನಂತರ, ನಮ್ಮನ್ನು ಬಲವಂತವಾಗಿ ಕಾರಿನಲ್ಲಿ ಹತ್ತಿಸಿಕೊಂಡು ಹೋದರು. ನನ್ನ ಪತಿ ತುಂಬಾ ಒಳ್ಳೆಯವರು. ಅವರನ್ನು ಕೊಲ್ಲಲು ನನ್ನ ಕುಟುಂಬಸ್ಥರಿಗೆ ಹೇಗೆ ಅನಿಸಿತೋ ಗೊತ್ತಿಲ್ಲ ಎಂದು ಅವಂತಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ