ಆ್ಯಪ್ನಗರ

ಆಂಬುಲೆನ್ಸ್‌ನಲ್ಲಿ ಹೃದ್ರೋಗಿ.. ಟ್ರಾಫಿಕ್ ನಿಯಂತ್ರಣಕ್ಕಾಗಿ 2 ಕಿ.ಮೀ. ಓಡಿದ ಖಾಕಿ ಕಾಯಕ ಯೋಗಿ..!

ವಾಹನಗಳನ್ನು ನಿಯಂತ್ರಿಸಿ ಆಂಬುಲೆನ್ಸ್‌ಗೆ ಜಾಗ ಮಾಡಿಕೊಡುವ ಪೇದೆಯ ಸಾಹಸದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ಇದೀಗ ಸೂಪರ್ ಹಿಟ್ ಆಗಿದೆ. ಜಿ. ಬಾಬ್ಜಿ ಎಂಬ ಈ ಪೇದೆ 2010ರ ಬ್ಯಾಚ್‌ನ ಪೊಲೀಸ್ ಪೇದೆ. ಇವರ ಈ ಮಾನವೀಯ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Vijaya Karnataka Web 9 Nov 2020, 1:32 pm

ಹೈಲೈಟ್ಸ್‌:

  • ಜೀವ ಉಳಿಸಲು ಟ್ರಾಫಿಕ್ ಪೇದೆಯ ಹರಸಾಹಸ
  • ಕೋಟ್ಯಂತರ ಜನರಿಂದ ಕಾನ್ಸ್‌ಟೇಬಲ್‌ಗೆ ಪ್ರಶಂಸೆ
  • 38 ವರ್ಷದ ಪೇದೆಯ ನಿಸ್ವಾರ್ಥ ಸೇವೆ..
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಹೈದರಾಬಾದ್: ಟ್ರಾಫಿಕ್ ಪೊಲೀಸ್ ಪೇದೆಯ 7 ವರ್ಷದ ಪುಟ್ಟ ಮಗಳು ‘ಥ್ಯಾಂಕ್ಸ್‌ ಅಪ್ಪಾ’ ಎಂದು ಪುಟ್ಟದೊಂದು ಪೇಪರ್‌ನಲ್ಲಿ ಬರೆದು ಕೊಟ್ಟಾಗ, ಆ ಪೇದೆಯ ಕಣ್ಣಾಲಿ ತುಂಬಿ ಬಂದಿತ್ತು..! ಆ ಕಾನ್ಸ್‌ಟೇಬಲ್‌ನ ಮಗಳು ಮಾತ್ರವಲ್ಲ, ರಾಜ್ಯ, ದೇಶ, ವಿದೇಶಗಳಿಂದಲೂ ಕಾನ್ಸ್‌ಟೇಬಲ್‌ಗೆ ಪ್ರಶಂಸೆಯ ಸುರಿಮಳೆ ಹರಿದುಬಂದಿತ್ತು. ಕೇಂದ್ರ ಸಚಿವರಾದಿಯಾಗಿ ಎಲ್ಲರೂ ಹೊಗಳಿದರು..! ಅದಕ್ಕೆ ಕಾರಣ ಕೂಡಾ ಇದೆ..
ಹೈದರಾಬಾದ್‌ನ ಅಬಿಡ್ಸ್‌ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದಂತೆಯೇ ಭಾರೀ ಟ್ರಾಫಿಕ್ ಇರುತ್ತದೆ. ಈ ಸಂದರ್ಭದಲ್ಲಿ ಬಾಬ್ಜಿ ಎಂಬ ಟ್ರಾಫಿಕ್ ಪೊಲೀಸ್ ಪೇದೆಗೆ ಆಂಬುಲೆನ್ಸ್‌ ಒಂದು ಟ್ರಾಫಿಕ್‌ ಮಧ್ಯೆ ಸಿಲುಕಿರೋದು ಕಂಡು ಬಂತು. ಕೂಡಲೇ ಆಂಬುಲೆನ್ಸ್‌ ಬಳಿ ಧಾವಿಸಿದ ಬಾಬ್ಜಿ, ರೋಗಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಆಂಬುಲೆನ್ಸ್‌ನಲ್ಲಿದ್ದ ರೋಗಿ ಹೃದಯಾಘಾತದಿಂದ ಬಳಲುತ್ತಿದ್ದರು. ಅವರಿಗೆ ತುರ್ತು ಚಿಕಿತ್ಸೆ ಅಗತ್ಯವಿತ್ತು.

ಕಾರು ನಿಲ್ಲಿಸಲು ಹೇಳಿದ ಪೇದೆಯನ್ನೇ ಬಾನೆಟ್ ಮೇಲೆ ಹೊತ್ತೊಯ್ದ ಚಾಲಕ: ಸಿಕ್ಕಾಗ ಕಾದಿದೆ ಕಜ್ಜಾಯ!

ಹೀಗಾಗಿ, ಬಾಬ್ಜಿ ಅವರು ಕೂಡಲೇ ವಾಹನಗಳ ತೆರವಿಗೆ ಮುಂದಾದರು. ಬ್ಯಾಂಕ್ ರಸ್ತೆಯಿಂದ ಕೋಟಿವರೆಗಿನ ರಸ್ತೆಯಲ್ಲಿ ಸಂಜೆ ವೇಳೆ ವಾಹನಗಳು ಹೆಚ್ಚು. ಈ ರಸ್ತೆಯಲ್ಲಿ ಆಂಬುಲೆನ್ಸ್ ಸಾಗಲು ದಾರಿ ಬಿಡುವಂತೆ ವಾಹನ ಚಾಲಕರಿಗೆ ಹೇಳುತ್ತಾ ಸುಮಾರು 2 ಕಿ.ಮೀ ದೂರ ಓಡಿದರು ಬಾಬ್ಜಿ. ಕಾನ್ಸ್‌ಟೇಬಲ್ ಬಾಬ್ಜಿ ಅವರ ಈ ಸಾಹಸವನ್ನು ಆಂಬುಲೆನ್ಸ್‌ ಒಳಗೆ ಕುಳಿತಿದ್ದ ರೋಗಿಯ ಸಂಬಂಧಿಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದರು.

ರಾಮನಗರ: ಸಹೋದ್ಯೋಗಿ ಕೊಲೆ, ಸ್ವಾಮೀಜಿಗೆ ಬೆದರಿಕೆ ಹಿನ್ನೆಲೆ ಇಬ್ಬರು ಪೊಲೀಸ್ ಪೇದೆಗಳ ವಜಾ

ಯಾವಾಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತೋ, ಬಾಬ್ಜಿ ಅವರಿಗೆ ಪ್ರಶಂಸೆಯ ಸುರಿಮಳೆಯೇ ಹರಿದುಬಂತು. 38 ವರ್ಷ ವಯಸ್ಸಿನ ಬಾಬ್ಜಿ ತಮ್ಮ ಕ್ಯಾಪ್ ತೆಗೆದು ರಸ್ತೆಯಲ್ಲಿ ಓಡುತ್ತಿದ್ದ ದೃಶ್ಯ ಇಂಟರ್‌ನೆಟ್‌ ಲೋಕದಲ್ಲಿ ಸೂಪರ್ ಹಿಟ್ ಆಗಿದೆ.

ಬೊಲೆರೊ ಡಿಕ್ಕಿ, ಮುಗಳಖೋಡ ಉಪಠಾಣೆಯ ಡಿಎಆರ್‌ ಪೊಲೀಸ್‌ ಪೇದೆ ಸಾವು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ