ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆಗೆ ನಡೆದ ಚುನಾವಣೆ ಫಲಿತಾಂಶ ಶುಕ್ರವಾರ (ಡಿ.4) ಪ್ರಕಟವಾಗಲಿದ್ದು, ತೆಲಂಗಾಣದ ಮುಂದಿನ ರಾಜಕೀಯ ಹಣಾಹಣಿಗೆ ವೇದಿಕೆ ಸೃಷ್ಟಿಯಾಗಲಿದೆ.
ಆಡಳಿತಾರೂಢ ಟಿಆರ್ಎಸ್, ಬಿಜೆಪಿ, ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆದರೆ, ಮಂಗಳವಾರ ನಡೆದ ಚುನಾವಣೆಯಲ್ಲಿ ಕೇವಲ ಶೇ.35.08ರಷ್ಟು ಮತದಾನವಾಗಿರುವುದು ಎಲ್ಲ ಪಕ್ಷಗಳಿಗೂ ಆತಂಕ ತಂದಿದೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಹೈದರಾಬಾದ್ ಪಾಲಿಕೆಯೇ ಮೆಟ್ಟಿಲು ಎಂದು ಭಾವಿಸಿರುವ ಬಿಜೆಪಿಯು, ಶತಾಯಗತಾಯ ಅಧಿಕಾರ ಹಿಡಿಯುವ ತವಕದಲ್ಲಿದೆ. ಪಾಲಿಕೆಯ ಅಧಿಕಾರ ಹಿಡಿದರೆ ಹೈದರಾಬಾದ್ಗೆ ‘ಭಾಗ್ಯನಗರ’ ಎಂದು ಮರುನಾಮಕರಣ ಮಾಡುವುದಾಗಿಯೂ ಘೋಷಿಸಿದೆ. ಆದರೆ ಇದಕ್ಕೆ ಜನರು ಮಣೆ ಹಾಕಿದ್ದಾರಾ ಎಂಬುದು ಶುಕ್ರವಾರದ ಫಲಿತಾಂಶದಲ್ಲಿ ಸ್ಪಷ್ಟವಾಗಲಿದೆ.
ಇನ್ನೊಂದೆಡೆ ಬಿಜೆಪಿಯಿಂದ ತೀವ್ರ ದಾಳಿಗೆ ಗುರಿಯಾದ ಅಸಾದುದ್ದೀನ್ ಓವೈಸಿಯವರ ಎಐಎಂಐಎಂ ಕೂಡ ಕಣದಲ್ಲಿದ್ದು, ಹೈದರಾಬಾದ್ ಒಂದು ಭಾಗದಲ್ಲಿ ಪಕ್ಷ ಪ್ರಭಾವಶಾಲಿಯಾಗಿದೆ. ಬಿಜೆಪಿಯ ಎಂಟ್ರಿ ಎಐಎಂಐಎಂ ಮೇಲೆ ಯಾವ ಪರಿಣಾಮ ಬೀರಿದೆ ಎಂಬುದೂ ಶುಕ್ರವಾರ ತಿಳಿದು ಬರಲಿದೆ.
ಹೈದರಾಬಾದ್ ವರ್ಸಸ್ ಬಿಜೆಪಿಯ ಭಾಗ್ಯನಗರ, ಗೆಲುವು ಯಾರ ಪರ?
ಅವಧಿಗೂ ಮುನ್ನವೇ ತೆಲಂಗಾಣ ವಿಧಾನಸಭೆ ಚುನಾವಣೆಯನ್ನು ಎದುರಿಸಿ ಭರ್ಜರಿ ಗೆಲುವಿನ ನಗೆ ಬೀರಿದ್ದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಕೆಸಿಆರ್ಗೂ ಬಿಜೆಪಿಯ ಸ್ಪರ್ಧೆ ಸವಾಲನ್ನು ತಂದಿತ್ತಿತ್ತು. ಈ ಸವಾಲನ್ನು ಪಕ್ಷ ಎಷ್ಟರ ಮಟ್ಟಿಗೆ ಮೆಟ್ಟಿ ನಿಂತಿದೆ ಎಂಬುದಕ್ಕೂ ಫಲಿತಾಂಶ ಕನ್ನಡಿ ಹಿಡಿಯಲಿದೆ.
ಬಿರುಸಿನ ಪ್ರಚಾರದ ನಡುವೆಯೂ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಕಳಪೆ ಮತದಾನ
ಜೊತೆಗೆ ಮೊದಲೇ ಹೇಳಿದಂತೆ ಈ ಫಲಿತಾಂಶ ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ. ಒಂದೊಮ್ಮೆ ಮುತ್ತಿನ ನಗರಿ ಬಿಜೆಪಿ ಮಡಿಲಿಗೆ ಬಿದ್ದರೆ, ಮುಂದೆ ಟಿಆರ್ಎಸ್ಗೆ ಪ್ರಬಲ ಪ್ರತಿಸ್ಪರ್ಧಿಯೊಬ್ಬ ರಾಜ್ಯದಲ್ಲಿ ಹುಟ್ಟಿಕೊಳ್ಳಲಿದ್ದಾನೆ. ಹಾಗಾಗದೇ ಇದ್ದಲ್ಲಿ, ಕೆಸಿಆರ್ ಒಂದಷ್ಟು ದಿನ ನೆಮ್ಮದಿಯಿಂದ ಇರಬಹುದು.
ಆಡಳಿತಾರೂಢ ಟಿಆರ್ಎಸ್, ಬಿಜೆಪಿ, ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆದರೆ, ಮಂಗಳವಾರ ನಡೆದ ಚುನಾವಣೆಯಲ್ಲಿ ಕೇವಲ ಶೇ.35.08ರಷ್ಟು ಮತದಾನವಾಗಿರುವುದು ಎಲ್ಲ ಪಕ್ಷಗಳಿಗೂ ಆತಂಕ ತಂದಿದೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಹೈದರಾಬಾದ್ ಪಾಲಿಕೆಯೇ ಮೆಟ್ಟಿಲು ಎಂದು ಭಾವಿಸಿರುವ ಬಿಜೆಪಿಯು, ಶತಾಯಗತಾಯ ಅಧಿಕಾರ ಹಿಡಿಯುವ ತವಕದಲ್ಲಿದೆ. ಪಾಲಿಕೆಯ ಅಧಿಕಾರ ಹಿಡಿದರೆ ಹೈದರಾಬಾದ್ಗೆ ‘ಭಾಗ್ಯನಗರ’ ಎಂದು ಮರುನಾಮಕರಣ ಮಾಡುವುದಾಗಿಯೂ ಘೋಷಿಸಿದೆ. ಆದರೆ ಇದಕ್ಕೆ ಜನರು ಮಣೆ ಹಾಕಿದ್ದಾರಾ ಎಂಬುದು ಶುಕ್ರವಾರದ ಫಲಿತಾಂಶದಲ್ಲಿ ಸ್ಪಷ್ಟವಾಗಲಿದೆ.
ಇನ್ನೊಂದೆಡೆ ಬಿಜೆಪಿಯಿಂದ ತೀವ್ರ ದಾಳಿಗೆ ಗುರಿಯಾದ ಅಸಾದುದ್ದೀನ್ ಓವೈಸಿಯವರ ಎಐಎಂಐಎಂ ಕೂಡ ಕಣದಲ್ಲಿದ್ದು, ಹೈದರಾಬಾದ್ ಒಂದು ಭಾಗದಲ್ಲಿ ಪಕ್ಷ ಪ್ರಭಾವಶಾಲಿಯಾಗಿದೆ. ಬಿಜೆಪಿಯ ಎಂಟ್ರಿ ಎಐಎಂಐಎಂ ಮೇಲೆ ಯಾವ ಪರಿಣಾಮ ಬೀರಿದೆ ಎಂಬುದೂ ಶುಕ್ರವಾರ ತಿಳಿದು ಬರಲಿದೆ.
ಹೈದರಾಬಾದ್ ವರ್ಸಸ್ ಬಿಜೆಪಿಯ ಭಾಗ್ಯನಗರ, ಗೆಲುವು ಯಾರ ಪರ?
ಅವಧಿಗೂ ಮುನ್ನವೇ ತೆಲಂಗಾಣ ವಿಧಾನಸಭೆ ಚುನಾವಣೆಯನ್ನು ಎದುರಿಸಿ ಭರ್ಜರಿ ಗೆಲುವಿನ ನಗೆ ಬೀರಿದ್ದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಕೆಸಿಆರ್ಗೂ ಬಿಜೆಪಿಯ ಸ್ಪರ್ಧೆ ಸವಾಲನ್ನು ತಂದಿತ್ತಿತ್ತು. ಈ ಸವಾಲನ್ನು ಪಕ್ಷ ಎಷ್ಟರ ಮಟ್ಟಿಗೆ ಮೆಟ್ಟಿ ನಿಂತಿದೆ ಎಂಬುದಕ್ಕೂ ಫಲಿತಾಂಶ ಕನ್ನಡಿ ಹಿಡಿಯಲಿದೆ.
ಬಿರುಸಿನ ಪ್ರಚಾರದ ನಡುವೆಯೂ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಕಳಪೆ ಮತದಾನ
ಜೊತೆಗೆ ಮೊದಲೇ ಹೇಳಿದಂತೆ ಈ ಫಲಿತಾಂಶ ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ. ಒಂದೊಮ್ಮೆ ಮುತ್ತಿನ ನಗರಿ ಬಿಜೆಪಿ ಮಡಿಲಿಗೆ ಬಿದ್ದರೆ, ಮುಂದೆ ಟಿಆರ್ಎಸ್ಗೆ ಪ್ರಬಲ ಪ್ರತಿಸ್ಪರ್ಧಿಯೊಬ್ಬ ರಾಜ್ಯದಲ್ಲಿ ಹುಟ್ಟಿಕೊಳ್ಳಲಿದ್ದಾನೆ. ಹಾಗಾಗದೇ ಇದ್ದಲ್ಲಿ, ಕೆಸಿಆರ್ ಒಂದಷ್ಟು ದಿನ ನೆಮ್ಮದಿಯಿಂದ ಇರಬಹುದು.