ಆ್ಯಪ್ನಗರ

ಮಗಳನ್ನ ಹತ್ಯೆಗೈದಿದಕ್ಕೆ ಅಳಿಯನ ತಲೆ ಕತ್ತರಿಸಿದ ಮಾವ, ರುಂಡದೊಂದಿಗೆ ಪೊಲೀಸರಿಗೆ ಸರಂಡರ್‌!

ಮಗಳನ್ನ ಕೊಂದಿದಲ್ಲದೆ ಎರಡನೇ ಮದುವೆಗೆ ಪ್ಲಾನ್‌ ಮಾಡಿದ್ದ ಅಳಿಯನಿಗೆ ನರಕದ ಬಾಗಿಲನ್ನ ಮಾವ ತೋರಿಸಿಕೊಟ್ಟಿದ್ದಾನೆ. ರುಂಡ ತುಂಡರಿಸಿ ಅದನ್ನೇ ಪೊಲೀಸರಿಗೆ ಸಾಕ್ಷಿಯಾಗಿ ಕೊಟ್ಟು ಶರಣಾಗಿದ್ದಾನೆ ಮಾವ ಸತ್ಯನಾರಾಯಣ. ಈ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

Vijaya Karnataka Web 10 Aug 2020, 2:02 pm
ಹೈದರಬಾದ್: ಮಗಳನ್ನ ಕೊಂದ ಅಳಿಯನ ತಲೆ ಕತ್ತರಿಸಿ ಬಳಿಕ ಪೊಲೀಸ್‌ ಸ್ಟೇಷನ್‌ಗೆ ರುಂಡವನ್ನ ತೆಗೆದುಕೊಂಡು ಹೋಗುವ ಮೂಲಕ ಮಾವನೊಬ್ಬ ಖಾಕಿ ಮುಂದೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಧಾರಾ ಜಗನಾನಂದಪುರಂ ಹಳ್ಳಿಯಲ್ಲಿ ನಡೆದಿದೆ. ಮಾವ ಪಳ್ಳ ಸತ್ಯನಾರಾಯಣ ಎಂಬವರು ಅಳಿಯ ಲಚ್ಚಚ್ಚಾನಾ ಎಂಬಾತನನ್ನ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Vijaya Karnataka Web pic (17)


ಎರಡನೇ ಮದುವೆ ಆಗುವುದಕ್ಕೆ ತನ್ನ ಮಗಳನನ್ನ ಅಳಿಯ ಕೊಂದದ್ದಾನೆ ಎಂದು ತಿಳಿದ ಸತ್ಯನಾರಾಯಣ, ಕಂಠಪೂರ್ತಿ ಕುಡಿದು ಮನೆಗೆ ಬಂದ ಲಚ್ಚಚ್ಚಾನಾನ ತಲೆ ಕತ್ತರಿಸಿ ಬಳಿಕ ಮಾವ ಸತ್ಯನಾರಾಯಣ ಅದನ್ನ ಪೊಲೀಸ್‌ ಠಾಣೆಗೆ ತೆಗೆದುಕೊಂಡು ಹೋಗಿ ಶರಣಾಗಿದ್ದಾನೆ.

ಹೇಗೆ ನಡೆಯಿತು ಘಟನೆ!
ಸತ್ಯನಾರಾಯಣ ಅವರ ಪುತ್ರಿ ಪಾವನಿ ಹತ್ತು ತಿಂಗಳ ಹಿಂದೆ ಸಾವನಪ್ಪಿದ್ದಳು. ಈ ಹಿನ್ನೆಲೆ ಮಗಳ ಕಾರ್ಯಕಮವೊಂದನ್ನ ಸತ್ಯನಾರಾಯಣ ತನ್ನ ಮನೆಯಲ್ಲಿ ಆಯೋಜಿಸಿದ್ದ. ಈ ಕಾರ್ಯಕ್ರಮಕ್ಕೆ ಅಳಿಯ ಲಚ್ಚಚ್ಚಾನಿಗು ಆಹ್ವಾನ ನೀಡಿದ್ದ. ಆದರೆ ಅಳಿಯ ಕಂಠಪೂರ್ತಿ ಕುಡಿದು ಮಾವನ ಮನೆಗೆ ತೆರಳಿದ್ದಾನೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಸೋಂಕು: ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ!

ಕುಡಿತದ ಅಮಲಿನಲ್ಲಿ ತಾನು ತನ್ನ ಪತ್ನಿಯನ್ನ ಕೊಲೆ ಮಾಡಿದ್ದಾಗಿ ಸತ್ಯ ಬಿಚ್ಚಿಟ್ಟಿದ್ದಾನೆ. ಅಲ್ಲದೇ ಮಾವನ ಮನೆಯಲ್ಲಿರುವ ತನ್ನ ಇಬ್ಬರು ಹೆಣ್ಣು ಮಕ್ಕಳನ್ನ ಸಾಯಿಸಿ ಬೇರೆ ಮದುವೆಯಾಗುವುದಾಗಿ ಹೇಳಿದ್ದಾನೆ. ಸತ್ಯವನ್ನರಿತು ಕೆರಳಿದ ಮಾವ ಸತ್ಯನಾರಾಯಣ ಮನೆಯಲ್ಲಿದ್ದ ಕತ್ತಿಯಿಂದ ಅಳಿಯನ ಕತ್ತು ಕುಯ್ದಿದ್ದಾನೆ.

ನಂತರ ಆತನ ರುಂಡವನ್ನ ನೇರ ಪೊಲೀಸ್‌ ಠಾಣೆಗೆ ತೆಗೆದುಕೊಂಡು ಹೋಗಿ ಒಪ್ಪಿಸಿದ್ದಾನೆ. ತಾನು ಕೊಲೆ ಮಾಡಿರುವುದಾಗಿ ಹೇಳಿದ ಹಿನ್ನೆಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಮಾವ ಸತ್ಯನಾರಾಯಣನನ್ನು ಬಂಧಿಸಿದ್ದಾರೆ. ತನಿಖೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ