ಆ್ಯಪ್ನಗರ

ತೆಲಂಗಾಣ: 9 ಮಂದಿಯನ್ನು ಬಾವಿಗೆ ನೂಕಿ ಕೊಲೆಗೈದವನಿಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್, ಹೇಗೆ ಕೊಂದ?

10 ಜನರನ್ನು ಕೊಲೆ ಮಾಡಿದ್ದಲ್ಲದೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಈ ಪ್ರಕರಣ ಅಪರೂಪದಲ್ಲಿ ಅಪರೂಪವಾಗಿದ್ದೆಂದು ಆರೋಪಿಗೆ ಮರಣದಂಡನೆ ವಿಧಿಸಬೇಕೆಂಬ ಪ್ರಾಸಿಕ್ಯೂಷನ್‌ ವಾದವನ್ನು ಕೋರ್ಟ್‌ ಎತ್ತಿ ಹಿಡಿದಿದೆ. ಹೇಗೆ 10 ಜನರನ್ನು ಈ ಆರೋಪಿ ಕೊಂದ ಎನ್ನುವ ಇಂಟ್ರೆಸ್ಟಿಂಗ್‌ ಸಂಗತಿ ಇಲ್ಲಿದೆ.

Vijaya Karnataka Web 31 Oct 2020, 6:53 am
ಹೈದರಾಬಾದ್‌: ಒಂದು ಕೊಲೆಯನ್ನು ಮುಚ್ಚಿಹಾಕಲು ಒಬ್ಬರ ಬೆನ್ನಿಗೆ ಒಬ್ಬರಂತೆ ಒಂಬತ್ತು ಜನರನ್ನು ಬಾವಿಗೆ ನೂಕಿ ಸಿನಿಮೀಯ ರೀತಿಯಲ್ಲಿ ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಗೆ ತೆಲಂಗಾಣದ ವಾರಂಗಲ್‌ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ. 10 ಜನರನ್ನು ಕೊಲೆ ಮಾಡಿದ್ದಲ್ಲದೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಈ ಪ್ರಕರಣ ಅಪರೂಪದಲ್ಲಿ ಅಪರೂಪವಾಗಿದ್ದೆಂದು ಆರೋಪಿಗೆ ಮರಣದಂಡನೆ ವಿಧಿಸಬೇಕೆಂಬ ಪ್ರಾಸಿಕ್ಯೂಷನ್‌ ವಾದವನ್ನು ಕೋರ್ಟ್‌ ಎತ್ತಿ ಹಿಡಿದಿದೆ.
Vijaya Karnataka Web warangal


ಮರಣದಂಡನೆಗೆ ಗುರಿಯಾದ ಆರೋಪಿಯು 24 ವರ್ಷದ ಸಂಜಯ್‌ ಕುಮಾರ್‌ ಯಾದವ್‌. ಕಳೆದ ಮಾರ್ಚ್‌ನಲ್ಲಿ ಒಂದು ಹಾಗೂ ಮೇನಲ್ಲಿ 10 ಕೊಲೆ ಎಸಗಿದ್ದ. ಈ ಬಗ್ಗೆ ಹಿನ್ನಲೆ ಸಮೇತ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಪ್ರಕರಣ?
ಸಂಜಯ್‌ ಆರು ವರ್ಷಗಳ ಹಿಂದೆ ಬಿಹಾರದಿಂದ ವಾರಂಗಲ್‌ಗೆ ವಲಸೆ ಬಂದಿದ್ದ. ಇಲ್ಲಿನ ಗೋಣಿಚೀಲ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ. ಇದೇ ಪ್ರದೇಶಕ್ಕೆ ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ಕುಟುಂಬದ ಹಿರಿಯ ಮಹಿಳೆಯ ಜತೆ ಸಂಜಯ್‌ ಸಹ ಜೀವನ ನಡೆಸುತ್ತಿದ್ದ. ಕ್ರಮೇಣ ಆಕೆಯ 16 ವರ್ಷದ ಮಗಳ ಜತೆಗೂ ಸಲುಗೆ ಬೆಳೆಸಿ, ಅತ್ಯಾಚಾರ ಎಸಗಿದ್ದ.

ಪೊಲೀಸರು ಸೀಜ್ ಮಾಡಿದ ಬಿಜೆಪಿ ಅಭ್ಯರ್ಥಿಯ 18 ಲಕ್ಷ ಹಣಕ್ಕಾಗಿ ಕಿತ್ತಾಡಿಕೊಂಡ ಅದೇ ಪಕ್ಷದ ಕಾರ್ಯಕರ್ತರು..!

ಈ ವಿಷಯ ತಿಳಿದ ಮಹಿಳೆ ಜಗಳ ಕಾದಾಗ, ''ನಿನ್ನ ಮಗಳನ್ನು ಮದುವೆಯಾಗುವೆ'' ಎಂದು ನಂಬಿಸಿ ಮಾರ್ಚ್ 6ರಂದು ಆಕೆಯನ್ನು ರೈಲಿನಲ್ಲಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯುತ್ತಿದ್ದ. ಇದೆಲ್ಲವೂ ಆತ ಹೆಣೆದ ಯೋಜನೆಯಾಗಿತ್ತು. ರೈಲು ಪಶ್ಚಿಮ ಗೋದಾವರಿಯತ್ತ ಬರುತ್ತಿದ್ದಂತೆಯೇ ಮಹಿಳೆಗೆ, ನಿದ್ದೆ ಮಾತ್ರೆಗಳನ್ನು ಬೆರೆಸಿದ್ದ ಮಜ್ಜಿಗೆ ನೀಡಿ ಆಕೆಗೆ ಮಂಪರು ಬಂದ ಬಳಿಕ ಚಲಿಸುವ ರೈಲಿನಿಂದ ಕೆಳಕ್ಕೆ ನೂಕಿ ಸಾಯಿಸಿದ್ದ. ಏನೂ ಗೊತ್ತಿಲ್ಲದಂತೆ ವಾರಂಗಲ್‌ಗೆ ವಾಪಸ್‌ ಬಂದು ಒಬ್ಬನೇ ವಾಸವಿದ್ದ.

ಇದನ್ನು ಗಮನಿಸಿದ ಮಹಿಳೆಯ ಕುಟುಂಬ ಸದಸ್ಯರು, ಕಾಣೆಯಾದ ಸಹ ಜೀವನದ ಸಂಗಾತಿಯ ಬಗ್ಗೆ ಸುಳಿವು ನೀಡದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದರು. ಮೇ ತಿಂಗಳಲ್ಲಿ ಸಂಜಯ್‌, ಸಂಗಾತಿಯ ಕುಟುಂಬದ ಆರು ಸದಸ್ಯರು ಸೇರಿ ಒಟ್ಟು 9 ಮಂದಿಗೆ ಮಂಪರು ಬರುವ ಮಾತ್ರೆ ನೀಡಿ, ಒಬ್ಬೊಬ್ಬರನ್ನು ಬಾವಿಗೆ ತಳ್ಳಿ ಸಾಯಿಸಿದ್ದ. ವಿಶೇಷ ಪೊಲೀಸ್‌ ತಂಡದ ತನಿಖೆಯಿಂದ ಪ್ರಕರಣ ಬೆಳಕಿಗೆ ಬಂದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ