ಆ್ಯಪ್ನಗರ

ಉಗ್ರವಾದದ ಭಾಷೆ ಒಪ್ಪಲ್ಲ: ಒವೈಸಿ ಸಹೋದರರ ಭದ್ರಕೋಟೆಯಲ್ಲಿ ನಿಂತು ಘರ್ಜಿಸಿದ ತೇಜಸ್ವಿ ಸೂರ್ಯ!

ಹೈದರಾಬಾದ್‌ನಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂಬ ಎಐಎಂಐಎಂ ಪಕ್ಷದ ಒವೈಸಿ ಸಹೋದರರ ಮಾತುಗಳು ಹಾಸ್ಯಾಸ್ಪದ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ.

Vijaya Karnataka Web 23 Nov 2020, 5:50 pm
ಹೈದರಾಬಾದ್: ಹೈದರಾಬಾದ್‌ನಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂಬ ಎಐಎಂಐಎಂ ಪಕ್ಷದ ಒವೈಸಿ ಸಹೋದರರ ಮಾತುಗಳು ಹಾಸ್ಯಾಸ್ಪದ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ.
Vijaya Karnataka Web EngKeGWVQAEyEIN
ಹೈದರಾಬಾದ್‌ನಲ್ಲಿ ಒವೈಸಿ ಸಹೋದರರ ವಿರುದ್ಧ ಕಿಡಿಕಾರಿದ ತೇಜಸ್ವಿ ಸೂರ್ಯ


ಹೈದರಾಬಾದ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ಅಕ್ಬರುದ್ದೀನ್ ಒವೈಸಿ ಹಾಗೂ ಅಸಾದುದ್ದೀನ್ ಒವೈಸಿ ದ್ವೇಷದ ರಾಜಕಾರಣ ಮಾಡುತ್ತಾರೆ ಎಂದು ಹರಿಹಾಯ್ದರು.

ಹಳೆಯ ಹೈದರಾಬಾದ್ ಭಾಗದಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುವ ಒವೈಸಿ ಸಹೋದರರು, ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರೆ ಎಂದು ತೇಜಸ್ವಿ ಸೂರ್ಯ ಕಿಡಿಕಾರಿದರು.

ಮತ್ತೊಬ್ಬ ಜಿನ್ನಾ ಆಗುತ್ತಿದ್ದಾರಾ ಓವೈಸಿ..? ಉರ್ದು ಕವಿ ಮುನ್ನಾವರ್‌ ಹೇಳಿದ್ದೇನು..?

ಮತಗಳಿಕೆಗಾಗಿ ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ಕಲ್ಪಿಸಿರುವ ಒವೈಸಿ ಸಹೋದರರು, ಭಾರತ ವಿರೋಧಿ ಚಟುವಟಿಕೆಗಳನ್ನು ಬೆಂಬಲಿಸುತ್ತಾರೆ ಎಂದು ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದರು.


ಒವೈಸಿ ಸಹೋದರರಿಗೆ ಬೀಳುವ ಪ್ರತಿಯೊಂದೂ ಮತವೂ ದೇಶದ ಹಿತಾಸಕ್ತಿಯ ವಿರುದ್ಧ ಬೀಳುವ ಮತಗಳಾಗಿದ್ದು, ಈ ಪರಿಸ್ಥಿತಿಯನ್ನು ಬದಲಾಯಿಸುವ ಸಮಯ ಬಂದಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಅಸಾದುದ್ದೀನ್ ಒವೈಸಿ ಪಾಕಿಸ್ತಾನದ ನಿರ್ಮಾತ ಮೊಹಮ್ಮದ್ ಅಲಿ ಜಿನ್ನಾ ಅವರಂತೆ ಪ್ರತ್ಯೇಕತಾವಾದದ ರಾಜಕಾರಣ ಮಾಡುತ್ತಾರೆ. ಇಸ್ಲಾಂ ಹೆಸರಲ್ಲಿ ಜನರನ್ನು ಪ್ರಚೋದಿಸುವುದೇ ಅವರ ಕಾಯಕ ಎಂದು ತೇಜಸ್ವಿ ಸೂರ್ಯ ತೀವ್ರ ವಾಗ್ದಾಳಿ ನಡೆಸಿದರು.

ನಾನು ಪಾಕ್ ಹೊಗಳಿದ್ದೇನೆ ಎಂದು ಯೋಗಿ ಸಾಬೀತುಪಡಿಸಲಿ: ಒವೈಸಿ ಸವಾಲು!

ಒವೈಸಿ ಸಹೋದರರ ನೇತೃತ್ವದ ಎಐಎಂಐಎಂ ಪಕ್ಷದ ಗಟ್ಟಿನೆಲೆ ಎಂದೇ ಹೇಳಲಾಗುವ ಹೈದರಾಬಾದ್‌ನಲ್ಲಿ, ತೇಜಸ್ವಿ ಸೂರ್ಯ ಅವರ ಘರ್ಜನೆ ರಾಷ್ಟ್ರದ ಗಮನ ಸೆಳೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ