ಆ್ಯಪ್ನಗರ

ಉಕ್ಕಿ ಹರಿಯುತ್ತಿರೋ ನದಿಯಲ್ಲಿ ಜೀವದ ಹಂಗು ತೊರೆದು ನಾಯಿ ರಕ್ಷಣೆ..! ಹೋಮ್‌ ಗಾರ್ಡ್‌ ಕಾರ್ಯಕ್ಕೆ ಮೆಚ್ಚುಗೆ

ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ನಾಯಿ ರಕ್ಷಿಸಿದ ಗೃಹ ರಕ್ಷಕ ಸಿಬ್ಬಂದಿಯ ಕಾರ್ಯ ಈಗ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ. ನಾಗರ್‌ಕರ್ನೂಲ್‌ನ ಹೋಮ್‌ ಗಾರ್ಡ್‌ ಮುಜೀಬ್‌‌ ಅವರ ಮಾನವೀಯತೆ, ಧೈರ್ಯ ಹಾಗೂ ಸಮಯ ಪ್ರಜ್ಞೆಗೆ ಜನರು ಬಿಗ್‌ ಸಲಾಂ ಹೇಳಿದ್ದಾರೆ.

TNN 17 Sep 2020, 5:39 pm
ಹೈದರಾಬಾದ್: ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ನಾಯಿಯನ್ನು ರಕ್ಷಿಸಿದ ಗೃಹ ರಕ್ಷಕ ಸಿಬ್ಬಂದಿಯ ಮಾನವೀಯತೆ, ಧೈರ್ಯ ಹಾಗೂ ಸಮಯ ಪ್ರಜ್ಞೆ ಈಗ ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ಹೌದು, ನಾಗರ್‌ಕರ್ನೂಲ್‌ನಲ್ಲಿ ಉಕ್ಕಿ ಹರಿಯುವ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ನಾಯಿಯನ್ನು ಮುಜೀಬ್‌ ಹರ್‌ ರೆಹಮಾನ್‌ ರಕ್ಷಿಸಿ ಈಗ ಸುದ್ದಿಯಲ್ಲಿದ್ದಾರೆ.
Vijaya Karnataka Web telangana home guard shows bravery rescues dog from overflowing rivulet in nagarkurnool
ಉಕ್ಕಿ ಹರಿಯುತ್ತಿರೋ ನದಿಯಲ್ಲಿ ಜೀವದ ಹಂಗು ತೊರೆದು ನಾಯಿ ರಕ್ಷಣೆ..! ಹೋಮ್‌ ಗಾರ್ಡ್‌ ಕಾರ್ಯಕ್ಕೆ ಮೆಚ್ಚುಗೆ


ನನ್ನ ಕಣ್ಣ ಮುಂದೆಯೇ ನಾಯಿಯೊಂದು ನದಿಯಲ್ಲಿ ಕೊಚ್ಚಿ ಹೋಗುತ್ತಿತ್ತು. ಬಳಿಕ ಅದು ಪೊದೆಯಲ್ಲಿ ಸಿಲುಕಿಕೊಂಡಿತ್ತು. ಆಗ, ಏನು ಮಾಡಬೇಕೆಂದು ನಾನು ಯೋಚಿಸದೇ ನಾನು ನೀರಿನಲ್ಲಿ ಇಳಿದೆ. ಉಕ್ಕಿ ಹರಿಯುವ ನದಿಯಲ್ಲಿ ಭಾರೀ ಪ್ರಯಾಸ ಪಡಬೇಕಾಯಿತು. ಸಮತೋಲನದಿಂದ ನಾಯಿ ರಕ್ಷಿಸಿದೆ ಎಂದು 36 ವರ್ಷದ ಗೃಹ ರಕ್ಷಕ ಸಿಬ್ಬಂದಿ ಮುಜೀಬ್ ಉರ್ ರೆಹಮಾನ್ ತಿಳಿಸಿದ್ದಾರೆ.

ಮುಜೀಬ್‌ ಸಾಹಸಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವೈ.ಸಾಯಿ ಶೇಖರ್‌ ಮತ್ತು ನಾಗರ್‌ಕರ್ನೂಲ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಗಾಂಧಿ ನಾಯಕ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಜೀಬ್‌ ಅವರ ಸಾಹಸಕ್ಕೆ ಅವರ 11 ವರ್ಷದ ಮಗಳು ಸುಮಯ್ಯಾ, 7 ವರ್ಷದ ಮಗ ಯುಸೂಫ್‌ ಹಾಗೂ ಪತ್ನಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅವರು ಟಿವಿಯಲ್ಲಿ ಮುಜೀಬ್‌ ಅವರ ಸಾಹಸವನ್ನು ನೋಡಿ ನೀವಯ ಇಂತಹ ಸಾಹಸವನ್ನು ಮಾಡುತ್ತೀರಾ ಪ್ರಶ್ನೆ ಕೇಳಿದ್ದಾರೆ.

ವಿಶ್ವದ ಲಸಿಕೆಯ ರಾಜಧಾನಿ ಹೈದರಾಬಾದ್‌..! ಎಲ್ಲಿಯೇ ಸಂಶೋಧನೆಯಾದರೂ ತಯಾರಿಕೆ ಇಲ್ಲಿಯೇ..!

ಕೇಸರಿ ಸಮುದ್ರಂ ನದಿ ಉಕ್ಕಿ ಹರಿಯುತ್ತಿತ್ತು. ಹಿರಿಯ ಅಧಿಕಾರಿಗಳು ಮುಜೀಬ್ ರೆಹಮಾನ್ ಮತ್ತು ಇನ್ನೊಬ್ಬ ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಿದರು. ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜನರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದರು. ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ನಾಯಿ ಕೊಚ್ಚಿ ಹೋಗುವುದನ್ನು ಮುಜೀಬ್ ರೆಹಮಾನ್ ಗಮನಿಸಿದರು.

ತಿಮ್ಮಪ್ಪನ ಹುಂಡಿಗೆ ಒಂದೇ ದಿನ 1 ಕೋಟಿ ರೂ. ಕಾಣಿಕೆ..! ಕೊರೊನಾ ಬಳಿಕ ಚೇತರಿಕೆ ಕಂಡ ಟಿಟಿಡಿ ಆದಾಯ

ರಕ್ಷಿಸಿದ ನಾಯಿಯನ್ನು ನಾಗರ್‌ಕರ್ನೂಲ್‌ ಪಟ್ಟಣದ ಬಳಿಯ ಎಂಡಬೆಟ್ಟ ಗ್ರಾಮದಲ್ಲಿ ಬಿಡಲಾಯಿತು. ಮುಜೀದ್ ಹರ್ ರೆಹಮಾನ್ ಅವರ ಕಾರ್ಯ ಸಮಾಜಕ್ಕೆ ಪೊಲೀಸರ ಮಾನವೀಯ ಮುಖವನ್ನು ತೋರಿಸುತ್ತದೆ. ಇದನ್ನೇ ನಾವು ಮಾಡುತ್ತೇವೆ. ಮುಜೀಬ್‌ ಅವರ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದು ನಾಗರ್‌ಕರ್ನೂಲ್‌ ಸಿಐ ಗಾಂಧಿ ನಾಯಕ್ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ