ಹೈದರಾಬಾದ್ : ಆಡಳಿತಾರೂಢ ಟಿಆರ್ಎಸ್ ಸರಕಾರವು ಧರ್ಮಾಧಾರಿತ ಮೀಸಲು ಜಾರಿಗೆ ತರಲು ಹೊರಟಿದ್ದು, ಇದರಿಂದ ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿಗೆ ಧಕ್ಕೆಯಾಗಲಿದೆ. ಸಿಎಂ ಕೆಸಿಆರ್ ಅವರು ಮುಸ್ಲಿಮರಿಗೆ ಶೇ.12ರಷ್ಟು ಮೀಸಲು ನೀಡಲು ಮುಂದಾಗಿರುವುದನ್ನು ತಡೆಯುತ್ತೇವೆ ಎಂದು ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ. ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಕೈಗೊಂಡಿರುವ ಪಾದಯಾತ್ರೆ ಸಮಾರೋಪ ಸಮಾರಂಭ-ದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಶಾ, ''ರಾಜ್ಯದ ನೌಕರಿ, ಶಿಕ್ಷಣದಲ್ಲಿಈಗಾಗಲೇ ಮುಸ್ಲಿಮರಿಗೆ ಧಾರ್ಮಿಕ ಅಲ್ಪಸಂಖ್ಯಾತರು ಎಂಬ ನೆಪದಲ್ಲಿ ಶೇ.4ರಷ್ಟು ಮೀಸಲು ನೀಡಲಾಗಿದೆ. ಅದನ್ನು ಶೇ.12ಕ್ಕೆ ಏರಿಸಲು ಸಿಎಂ ಕೆ. ಚಂದ್ರಶೇಖರ್ ರಾವ್ ಮುಂದಾಗಿದ್ದಾರೆ. 2017ರ ಏಪ್ರಿಲ್ನಿಂದಲೂ ಈ ಬಗ್ಗೆ ಒತ್ತಾಯಿಸುತ್ತಿರುವ ಟಿಆರ್ಎಸ್, ಪೂರಕ ಮಸೂದೆಯನ್ನು ಕೇಂದ್ರ ಸರಕಾರಕ್ಕೆ ಕಳಿಸಿಕೊಟ್ಟಿದೆ. ಆದರೆ, ಇದೆಲ್ಲವೂ ಚುನಾವಣಾ ತಂತ್ರಗಾರಿಕೆ ಮಾತ್ರ, ಅಲ್ಪಸಂಖ್ಯಾತರ ಓಲೈಕೆಗೆ ಟಿಆರ್ಎಸ್ ತಂತ್ರ,'' ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮದಲ್ಲಿ ‘ಪ್ರಧಾನಮಂತ್ರಿ ಅಮಿತ್ ಶಾ’ ಎಂದು ಕರೆದ ಅಸ್ಸಾಂ ಸಿಎಂ!
ಒವೈಸಿ ಟಿಆರ್ಎಸ್ ನ ಕೈಗೊಂಬೆ ''ಟಿಆರ್ಎಸ್ ಎಂಬ ಕಾರಿನ ಸ್ಟೀರಿಂಗ್ ಎಐಎಂಐಎಂ ನಾಯಕ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಕೈನಲ್ಲಿದೆ. ಒವೈಸಿ ಭಯದಿಂದ ಸಿಎಂ ಕೆಸಿಆರ್ 'ತೆಲಂಗಾಣ ವಿಮೋಚನಾ ದಿನ' ಆಚರಿಸಲಿಲ್ಲ. ಪಶ್ಚಿಮ ಬಂಗಾಳದಂಥ ವಾತಾವರಣ ತೆಲಂಗಾಣದಲ್ಲಿ ನಿರ್ಮಾಣ ಆಗುತ್ತಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿಗಳು ಹೆಚ್ಚುತ್ತಿವೆ. ಹಾಗಾಗಿಯೇ ಸಂಜಯ್ ಕುಮಾರ್ 'ಪ್ರಜಾ ಸಂಗ್ರಾಮ್ ಯಾತ್ರೆ' ನಡೆಸಿ ಟಿಆರ್ಎಸ್ ಭ್ರಷ್ಟಾಚಾರ, ದುರಾಡಳಿತವನ್ನು ಜನರ ಎದುರು ಬಯಲು ಮಾಡಿದ್ದಾರೆ,'' ಎಂದರು.
ಸಾರ್ವಜನಿಕ ಕಾರ್ಯಕ್ರಮದಲ್ಲಿ ‘ಪ್ರಧಾನಮಂತ್ರಿ ಅಮಿತ್ ಶಾ’ ಎಂದು ಕರೆದ ಅಸ್ಸಾಂ ಸಿಎಂ!
ಒವೈಸಿ ಟಿಆರ್ಎಸ್ ನ ಕೈಗೊಂಬೆ ''ಟಿಆರ್ಎಸ್ ಎಂಬ ಕಾರಿನ ಸ್ಟೀರಿಂಗ್ ಎಐಎಂಐಎಂ ನಾಯಕ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಕೈನಲ್ಲಿದೆ. ಒವೈಸಿ ಭಯದಿಂದ ಸಿಎಂ ಕೆಸಿಆರ್ 'ತೆಲಂಗಾಣ ವಿಮೋಚನಾ ದಿನ' ಆಚರಿಸಲಿಲ್ಲ. ಪಶ್ಚಿಮ ಬಂಗಾಳದಂಥ ವಾತಾವರಣ ತೆಲಂಗಾಣದಲ್ಲಿ ನಿರ್ಮಾಣ ಆಗುತ್ತಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿಗಳು ಹೆಚ್ಚುತ್ತಿವೆ. ಹಾಗಾಗಿಯೇ ಸಂಜಯ್ ಕುಮಾರ್ 'ಪ್ರಜಾ ಸಂಗ್ರಾಮ್ ಯಾತ್ರೆ' ನಡೆಸಿ ಟಿಆರ್ಎಸ್ ಭ್ರಷ್ಟಾಚಾರ, ದುರಾಡಳಿತವನ್ನು ಜನರ ಎದುರು ಬಯಲು ಮಾಡಿದ್ದಾರೆ,'' ಎಂದರು.