ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ ಬಳಿಯಲ್ಲಿ ಮತ್ತೊಂದು ದಿಶಾ ಮಾದರಿಯ ಪ್ರಕರಣ ವರದಿಯಾಗಿದೆ. ರಂಗಾರೆಡ್ಡಿ ಜಿಲ್ಲೆಯ ತಂಗ್ಡಪಲ್ಲಿ ಗ್ರಾಮದಲ್ಲಿ 25 ರಿಂದ 30 ವರ್ಷದ ಮಹಿಳೆಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಮಹಿಳೆಯ ಬೆತ್ತಲೆ ಮೃತದೇಹ ಸಿಕ್ಕಿದ್ದು, ಮುಖದ ಗುರುತು ಪತ್ತೆಯಾಗಬಾರದು ಎಂಬ ಉದ್ದೇಶದಿಂದ ಕಲ್ಲಿನಲ್ಲಿ ಮುಖವನ್ನು ಜಜ್ಜಿ ಹಾಕಲಾಗಿದೆ. ಮಂಗಳವಾರ ಬೆಳಗ್ಗೆ 7 ಗಂಟೆ ವೇಳೆಗೆ ಗ್ರಾಮದ ಹೊರಭಾಗದ ಸೇತುವೆಯ ಕೆಳಭಾಗದಲ್ಲಿ ಶವ ಸಿಕ್ಕಿದ್ದು, ಆದರೆ ಯುವತಿಯ ಅತ್ಯಾಚರ ನಡೆದಿದೆಯೋ ಇಲ್ಲವೋ ಎಂಬುದು ಇನ್ನೂ ಸಾಬೀತಾಗಿಲ್ಲ. ಪೋಸ್ಟ್ ಮಾರ್ಟಂ ವರದಿ ಬಳಿಕವಷ್ಟೇ ಅತ್ಯಾಚಾರವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಚೆವೆಲ್ಲಾ ಇನ್ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.
ನ. 27ರಂದು ಅತ್ಯಾಚಾರ ಹಾಗೂ ಕೊಲೆಗೆ ಗುರಿಯಾದ ದಿಶಾಳ ಶವ ಸಿಕ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ (ಸೈಬರಾಬಾದ್ ಪೊಲೀಸ್ ಕಮಿಷನರೇಟ್) ಸದ್ಯ ಭೀಕರ ಕೊಲೆ ಪ್ರಕರಣ ವರದಿಯಾಗಿದೆ. ಮೃತ ಮಹಿಳೆಯು ಸಾಫ್ಟ್ವೇರ್ ಉದ್ಯೋಗಿ ಎಂದು ಹೇಳಲಾಗುತ್ತಿದ್ದು, ಇದುವರೆಗೂ ಗ್ರಾಮದ ಸುತ್ತಲಿನ ಯಾರೂ ಕೂಡ ಶವದ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಶವದ ಕೈಗಳನ್ನು ಕಟ್ಟಲಾಗಿದೆ. ಆಕೆ ಧರಿಸಿದ್ದ ಚಿನ್ನದ ಅಭರಣಗಳು ಕೂಡ ಹಾಗೆಯೇ ಇದೆ ಎಂದು ಶಮ್ಶಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ ಅವರು ಹೇಳಿದ್ದಾರೆ.
ಇನ್ನು, ಮಹಿಳೆಯ ಮೃತದೇಹವನ್ನು ವಾಹನದಲ್ಲಿ ಕರೆತಂದು ಕಲ್ವರ್ಟ್ನಲ್ಲಿ ಬಿಸಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ಸಂಬಂಧ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ನಡೆಸುವುದಾಗಿಯೂ ತಿಳಿಸಿದ್ದಾರೆ.
ನ. 27ರಂದು ಅತ್ಯಾಚಾರ ಹಾಗೂ ಕೊಲೆಗೆ ಗುರಿಯಾದ ದಿಶಾಳ ಶವ ಸಿಕ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ (ಸೈಬರಾಬಾದ್ ಪೊಲೀಸ್ ಕಮಿಷನರೇಟ್) ಸದ್ಯ ಭೀಕರ ಕೊಲೆ ಪ್ರಕರಣ ವರದಿಯಾಗಿದೆ. ಮೃತ ಮಹಿಳೆಯು ಸಾಫ್ಟ್ವೇರ್ ಉದ್ಯೋಗಿ ಎಂದು ಹೇಳಲಾಗುತ್ತಿದ್ದು, ಇದುವರೆಗೂ ಗ್ರಾಮದ ಸುತ್ತಲಿನ ಯಾರೂ ಕೂಡ ಶವದ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಶವದ ಕೈಗಳನ್ನು ಕಟ್ಟಲಾಗಿದೆ. ಆಕೆ ಧರಿಸಿದ್ದ ಚಿನ್ನದ ಅಭರಣಗಳು ಕೂಡ ಹಾಗೆಯೇ ಇದೆ ಎಂದು ಶಮ್ಶಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ ಅವರು ಹೇಳಿದ್ದಾರೆ.
ಇನ್ನು, ಮಹಿಳೆಯ ಮೃತದೇಹವನ್ನು ವಾಹನದಲ್ಲಿ ಕರೆತಂದು ಕಲ್ವರ್ಟ್ನಲ್ಲಿ ಬಿಸಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ಸಂಬಂಧ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ನಡೆಸುವುದಾಗಿಯೂ ತಿಳಿಸಿದ್ದಾರೆ.