ಆ್ಯಪ್ನಗರ

ಹಿಂದೂಗಳ ನಂಬಿಕೆಯನ್ನು ಪ್ರಶ್ನಿಸುವುದು ಕಷ್ಟಕರ

ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಸಂವಿಧಾನ ಪೀಠವು ಒಂದು ಹಂತದಲ್ಲಿ, ದೈವತ್ವ, ವಿಗ್ರಹ ಮತ್ತು ದೈವಿ ನಂಬಿಕೆಯ ನೈಜ ಸ್ವರೂಪ ಎತ್ತಿಹಿಡಿಯಲು ಅವುಗಳಿಗೆ 'ಜ್ಯೂರಿಸ್ಟಿಕ್‌ ಪರ್ಸನಾಲಿಟಿ' ರೂಪ ನೀಡುವುದು ಅಗತ್ಯವೇ ಎಂದು ಸುನ್ನಿ ವಕ್ಫ್ ಬೋರ್ಡ್‌ ಮಂಡಳಿ ಪರ ವಕೀಲ ರಾಜೀವ್‌ ಧವನ್‌ ಅವರನ್ನು ಪ್ರಶ್ನಿಸಿತು.

PTI 24 Sep 2019, 5:00 am
ಹೊಸದಿಲ್ಲಿ: ಅಯೋಧ್ಯೆಯು ಶ್ರೀರಾಮಚಂದ್ರನ ಜನ್ಮಸ್ಥಳವಾಗಿತ್ತು ಎಂಬ ಕೋಟ್ಯಂತರ ಹಿಂದೂಗಳ ನಂಬಿಕೆಯನ್ನು ಪ್ರಶ್ನಿಸುವುದು ಕಷ್ಟಕರವಾಗಿದೆ. ಏಕೆಂದರೆ ಕೆಲ ಮುಸ್ಲಿಂ ಸಾಕ್ಷಿದಾರರೇ ತಮಗೆ ಹೇಗೆ ಮೆಕ್ಕಾ ಪವಿತ್ರವೋ ಹಾಗೆಯೇ ಹಿಂದೂಗಳಿಗೆ ಅಯೋಧ್ಯೆ ಪವಿತ್ರವಾಗಿದೆ ಎಂದು ಹೇಳಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ. 29ನೇ ದಿನ ಶ್ರೀರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ಒಡೆತನ ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಸಂವಿಧಾನ ಪೀಠವು ಒಂದು ಹಂತದಲ್ಲಿ, ದೈವತ್ವ, ವಿಗ್ರಹ ಮತ್ತು ದೈವಿ ನಂಬಿಕೆಯ ನೈಜ ಸ್ವರೂಪ ಎತ್ತಿಹಿಡಿಯಲು ಅವುಗಳಿಗೆ 'ಜ್ಯೂರಿಸ್ಟಿಕ್‌ ಪರ್ಸನಾಲಿಟಿ' ರೂಪ ನೀಡುವುದು ಅಗತ್ಯವೇ ಎಂದು ಸುನ್ನಿ ವಕ್ಫ್ ಬೋರ್ಡ್‌ ಮಂಡಳಿ ಪರ ವಕೀಲ ರಾಜೀವ್‌ ಧವನ್‌ ಅವರನ್ನು ಪ್ರಶ್ನಿಸಿತು. ''ಕೇವಲ ನಂಬಿಕೆಯನ್ನೇ ಆಧಾರವಾಗಿಸಿಕೊಂಡು ಅಯೋಧ್ಯೆ ಶ್ರೀರಾಮನ ಜನ್ಮಸ್ಥಳವೆಂದು 'ಜ್ಯೂರಿಸ್ಟಿಕ್‌ ಸ್ಟೇಟಸ್‌' ಕೊಟ್ಟು ವ್ಯಾಖ್ಯಾನಿಸಲು ಸಾಧ್ಯವಿಲ್ಲ,'' ಎಂದು ಧವನ್‌ ವಾದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ