ಆ್ಯಪ್ನಗರ

ಬೆಳಗ್ಗೆ 9.30ರೊಳಗೆ ಕಚೇರಿಗೆ ಕಡ್ಡಾಯ ಹಾಜರಿ: ಸಚಿವರಿಗೆ ಮೋದಿ

ರಾಜ್ಯ ಖಾತೆ ಸಚಿವರೊಂದಿಗೆ ಪ್ರಮುಖ ಯೋಜನೆಗಳ ಕಡತಗಳನ್ನು ಸಂಪುಟ ಸಚಿವರು ಹಂಚಿಕೊಳ್ಳಬೇಕು. ಆ ಮೂಲಕ ಹಿರಿಯ ಸಚಿವರು ಕಿರಿಯರಿಗೆ ಮತ್ತು ಹೊಸದಾಗಿ ಸಚಿವರಾಗಿರುವವರಿಗೆ ಮಾರ್ಗದರ್ಶನ ಮಾಡಬೇಕು.

PTI 13 Jun 2019, 9:23 am
ಹೊಸದಿಲ್ಲಿ : ಬುಧವಾರ ನಡೆದ ಮಂತ್ರಿ ಪರಿಷತ್ತಿನ ಮೊದಲ ಸಭೆಯಲ್ಲಿ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಕೆಲವು ಖಡಕ್‌ ಸೂಚನೆಗಳನ್ನು ನೀಡಿದ್ದಾರೆ. ಬೆಳಿಗ್ಗೆ 9.30ರೊಳಗೆ ಕಚೇರಿಗೆ ತಪ್ಪದೇ ಹಾಜರಾಗಿ, ಮನೆಯಿಂದ ಮತ್ತು ಇತರ ಸ್ಥಳಗಳಲ್ಲಿ ಕೂತು ಕಾರ್ಯನಿರ್ವಹಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
Vijaya Karnataka Web modi (1)


ರಾಜ್ಯ ಖಾತೆ ಸಚಿವರೊಂದಿಗೆ ಪ್ರಮುಖ ಯೋಜನೆಗಳ ಕಡತಗಳನ್ನು ಸಂಪುಟ ಸಚಿವರು ಹಂಚಿಕೊಳ್ಳಬೇಕು. ಆ ಮೂಲಕ ಹಿರಿಯ ಸಚಿವರು ಕಿರಿಯರಿಗೆ ಮತ್ತು ಹೊಸದಾಗಿ ಸಚಿವರಾಗಿರುವವರಿಗೆ ಮಾರ್ಗದರ್ಶನ ಮಾಡಬೇಕು. ಸಚಿವಾಲಯದ ಹಲವು ಬೆಳವಣಿಗೆಗಳ ಬಗ್ಗೆ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಚಿವರು ಚರ್ಚಿಸಬೇಕು. ಸಂಸದರನ್ನು, ಸಾರ್ವಜನಿಕರನ್ನು ಆಗಾಗ್ಗೆ ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಿ. ಐದು ವರ್ಷಗಳ ಸಚಿವಾಲಯ ಅಜೆಂಡಾ ಈಗಲೇ ಸಿದ್ಧವಿರಲಿ ಎಂದು ಪ್ರಧಾನಿ ಸಲಹೆ ಮಾಡಿದ್ದಾರೆ.

ಕಡತಗಳ ಶೀಘ್ರ ರವಾನೆ:
ಸಚಿವಾಲಯದೊಳಗೆ ಹಾಗೂ ಸಚಿವಾಲಯಗಳ ನಡುವೆ ಪ್ರಮುಖ ಯೋಜನೆಯ ಕಡತಗಳ ಶೀಘ್ರ ರವಾನೆಗೆ ಸಂಪುಟ ಸಚಿವರು ಮತ್ತು ಅವರ ಕಿರಿಯ ಸಹೋದ್ಯೋಗಿಗಳು ಒಟ್ಟಾಗಿ ಕೂತು ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿಯೇ ನಿರ್ಧಾರ ತೆಗೆದುಕೊಳ್ಳಬೇಕು. ಅನಗತ್ಯ ವಿಳಂಬ ಬೇಡ. ಇದರಿಂದ ಸಚಿವಾಲಯದ ಕೆಲಸಗಳ ವೇಗ ವೃದ್ಧಿಸುತ್ತದೆ ಎಂದು ಪ್ರಧಾನಿ ಮೋದಿ ಸಚಿವರಿಗೆ ಸೂತ್ರವೊಂದನ್ನು ನೀಡಿದ್ದಾರೆ.

ಮೊದಲ ಆಡಳಿತ ಅವಧಿಯಲ್ಲಿ ಕೂಡ ಪ್ರಧಾನಿ ಮೋದಿ ಅವರು ನಿಯಮಿತವಾಗಿ ಮಂತ್ರಿ ಪರಿಷತ್‌ ಸಭೆ ನಡೆಸಿ ಮಹತ್ವದ ಚರ್ಚೆ ನಡೆಸುತ್ತಿದ್ದರು. ಸರಕಾರದ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಜನಸಾಮಾನ್ಯರಿಗೆ ತಿಳಿಸುವಂತೆ ಸೂಚಿಸುತ್ತಿದ್ದರು. ಪ್ರಮುಖ ಸಚಿವಾಲಯಗಳು ಮತ್ತು ಕ್ಷೇತ್ರಗಳ ಅಭಿವೃದ್ಧಿ ಪರಿಶೀಲನಾ ಸಭೆಗಳನ್ನು ಕೂಡ ತಪ್ಪದೇ ಪ್ರಧಾನಿ ನಡೆಸುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ