ಆ್ಯಪ್ನಗರ

ಮುಸ್ಲಿಂ ಮಹಿಳಾ ವಿಚ್ಛೇದನ ಹಕ್ಕಿಗೆ ಗುಜರಾತ್‌ ಯತ್ನ

ಮುಸ್ಲಿಂ ಮಹಿಳಾ ವಿಚ್ಛೇದನ ಹಕ್ಕಿಗಾಗಿ ಗುಜರಾತಿನ ಭಾವನಗರ್ ಸಂಸ್ಥಾನ ಶ್ರಮಿಸುತ್ತಿದೆ.

ಟೈಮ್ಸ್ ಆಫ್ ಇಂಡಿಯಾ 13 Mar 2017, 12:27 pm
ಅಹಮದಾಬಾದ್: ಶಹ ಬಾನೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಮಹಿಳೆಯರು ವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯುವ ಹಕ್ಕು ಹೊಂದಿದ್ದಾರೆ ಎಂದು 1985ರಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಆದರೆ, ಗುಜರಾತಿನ ಭಾವನಗರದಲ್ಲಿ ಆಳ್ವಿಕೆ ನಡೆಸುತ್ತಿದ್ದ ಕೃಷ್ಣಕುಮಾರಸಿಂಹಜೀ ಭಾವಸಿಂಹಜೀ 1943ರಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಸುಧಾರಣೆಗೆ ಪ್ರಯತ್ನಿಸಿದ ಮೊದಲ ರಾಜ ಎನ್ನುವುದು ಗಮನಾರ್ಹ ಸಂಗತಿ.
Vijaya Karnataka Web  ahead of time bhavnagar tried to give muslim women right to divorce
ಮುಸ್ಲಿಂ ಮಹಿಳಾ ವಿಚ್ಛೇದನ ಹಕ್ಕಿಗೆ ಗುಜರಾತ್‌ ಯತ್ನ


ಪತಿಯಿಂದ ಏಕಾಏಕಿ ತಲಾಖ್ ಪಡೆಯುವ ಮುಸ್ಲಿಂ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಮುಸ್ಲಿಂ ಮಹಿಳೆಯರ ತಲಾಖ್‌ ಕಾನೂನಿಗೆ ಸಂಬಂಧಿಸಿದಂತೆ ವಿಧೇಯಕ ಮಂಡಿಸಲು ಗುಜರಾತ್‌ ಸರಕಾರ ಮುಂದಾಗಿದೆ. ಆದರೆ, ಈ ವಿಧೇಯಕಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ಮುಸ್ಲಿಂ ವೈಯಕ್ತಿಕ ಕಾನೂನು ಸುಧಾರಣೆಗಾಗಿ ಶ್ರಮಿಸುತ್ತಿರುವ ಭಾವನಗರ ಸಂಸ್ಥಾನ ಉದ್ದೇಶಿತ ಮಸೂದೆಗೆ ಪ್ರತಿಕ್ರಿಯೆ ನೀಡುವಂತೆ ಮುಸ್ಲಿಂ ಸಮುದಾಯಗಳಿಗೆ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಮೂರು ತಿಂಗಳಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದೆ.

'ರಾಜಸಂಸ್ಥಾನ ಜಾರಿ ಮಾಡಿರುವ ಅಧಿಸೂಚನೆ, ಮುಸ್ಲಿಂ ಮಹಿಳೆಯರ ತಲಾಖ್‌ ಹಕ್ಕಿನ ಕುರಿತು ಅರಿವು ಮೂಡಿಸಲು ಪ್ರಯತ್ನಿಸುತ್ತಿದೆ. ಇದು ಸಾಕಷ್ಟು ಸೂಕ್ಷ್ಮವಾದ ವಿಷಯ. ಸಾಮಾಜಿಕ ಮಾಧ್ಯಮಗಳು ಹಾಗೂ ಫೋನ್ ಮೂಲಕ ಏಕಾಏಕಿ ತಲಾಖ್ ನೀಡುವುದರಿಂದ ಸಾಕಷ್ಟು ಕುಟುಂಬಗಳು ನಾಶವಾಗುತ್ತವೆ' ಎಂದು ನಗರ ಪ್ರದೇಶದ ಇತಿಹಾಸಕಾರ ರಿಜ್ವಾನ್ ಕದ್ರಿ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ