ಆ್ಯಪ್ನಗರ

ಜನರ ತಲೆಗೆ ಕಸ ತುಂಬಿದ ನೆಹರೂ, ಗಾಂಧಿ: ವಿವಾದದ ಕಿಡಿ ಹಚ್ಚಿದ ಬಿಜೆಪಿ ಸಂಸದ

ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ್ ನೆಹರೂ ಅವರನ್ನು ಕಸಕ್ಕೆ ಹೋಲಿಸುವ ಮೂಲಕ ಆಸ್ಸಾಂ ರಾಜ್ಯದ ಜೋರ್ಹತ್ ಕ್ಷೇತ್ರದ ಬಿಜೆಪಿ ಸಂಸದ ಕಾಮಾಕ್ಯ ಪ್ರಸಾದ್ ಟಸ್ಸಾ ವಿವಾದ ಸೃಷ್ಟಿಸಿದ್ದಾರೆ.

THE ECONOMIC TIMES 23 Oct 2017, 11:31 am
ಗುವಾಹಟಿ: ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ್ ನೆಹರೂ ಅವರನ್ನು ಕಸಕ್ಕೆ ಹೋಲಿಸುವ ಮೂಲಕ ಆಸ್ಸಾಂ ರಾಜ್ಯದ ಜೋರ್ಹತ್ ಕ್ಷೇತ್ರದ ಬಿಜೆಪಿ ಸಂಸದ ಕಾಮಾಕ್ಯ ಪ್ರಸಾದ್ ಟಸ್ಸಾ ವಿವಾದ ಸೃಷ್ಟಿಸಿದ್ದಾರೆ.
Vijaya Karnataka Web  bjp mp courts controversy compares nehru gandhi with garbage
ಜನರ ತಲೆಗೆ ಕಸ ತುಂಬಿದ ನೆಹರೂ, ಗಾಂಧಿ: ವಿವಾದದ ಕಿಡಿ ಹಚ್ಚಿದ ಬಿಜೆಪಿ ಸಂಸದ


ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಅಸ್ಸಾಂ ಪ್ರದೇಶ ಕಾಂಗ್ರೆಸ್ ಕಮಿಟಿ ಆಗ್ರಹಿಸಿದೆ. ಪೂರ್ವ ಅಸ್ಸಾಂನ ಚರಾಯಾಡೋ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಸಂಸದರು ಈ ರೀತಿಯ ಹೇಳಿಕೆ ನೀಡಿದ್ದಾರೆ.

ಮಹಾತ್ಮಾ ಗಾಂಧಿ ಹಾಗೂ ನೆಹರೂ ಅವರು ಹೊಸ ಸಿದ್ದಾಂತಗಳಿಗೆ ಅವಕಾಶ ನೀಡದೆಯೇ, ಜನರ ತಲೆಯಲ್ಲಿ ಕಸ ತುಂಬುವ ಕೆಲಸ ಮಾಡಿದ್ದಾರೆ ಎಂದು ಸಂಸದ ಟಸ್ಸಾ ಗುಡುಗಿದ್ದಾರೆ.

ಸಂಸದ ಕಾಮಾಕ್ಯ ಪ್ರಸಾದ್ ಟಸ್ಸಾ ವಿರುದ್ಧ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ್ ನೆಹರು ಅವರನ್ನು ಕಸಕ್ಕೆ ಹೋಲಿಕೆ ಮಾಡಿರುವುದು ಕ್ಷಮಿಸಲಾರದ ಅಪರಾಧ ಎಂದು ಎಪಿಸಿಸಿ ಅಧ್ಯಕ್ಷ ರಿಪುನ್ ಬೋರಾ ಕಿಡಿಕಾರಿದ್ದಾರೆ.

BJP MP courts controversy, compares Nehru-Gandhi with garbage

GUWAHATI: BJP Lok Sabha Memebr of Parliament (MP) from Jorhat, Kamakhya Prasad Tassa, courted controversy when he allegedly compared Mahatma Gandhi, Jawaharlal Nehru with garbage

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ