ಆ್ಯಪ್ನಗರ

ದುರ್ಗಾದೇವಿ ಜತೆ ಸೆಲ್ಫಿ: ಕ್ಷಣ ಮಾತ್ರದಲ್ಲೇ ನಡೆಯಿತು ದುರಂತ

ನವರಾತ್ರಿ ಉತ್ಸವಕ್ಕೆ ತರುತ್ತಿದ್ದ ದುರ್ಗಾ ದೇವಿ ವಿಗ್ರಹದೊಂದಿಗೆ ಸೆಲ್ಫಿ ತೆಗದ ಕೆಲವೇ ಕ್ಷಣದಲ್ಲಿ ನಡೆದ ದುರ್ಘಟನೆಯಲ್ಲಿ ಬರಕಪುರದ ಸರ್ಬೋಜಾನಿನ್‌ ಪೂಜಾ ಸಮಿತಿ ಉಪಾಧ್ಯಕ್ಷ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.

TNN 22 Sep 2017, 10:45 pm
ಹೌರಾ: ನವರಾತ್ರಿ ಉತ್ಸವಕ್ಕೆ ತರುತ್ತಿದ್ದ ದುರ್ಗಾ ದೇವಿ ವಿಗ್ರಹದೊಂದಿಗೆ ಸೆಲ್ಫಿ ತೆಗದ ಕೆಲವೇ ಕ್ಷಣದಲ್ಲಿ ನಡೆದ ದುರ್ಘಟನೆಯಲ್ಲಿ ಬರಕಪುರದ ಸರ್ಬೋಜಾನಿನ್‌ ಪೂಜಾ ಸಮಿತಿ ಉಪಾಧ್ಯಕ್ಷ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
Vijaya Karnataka Web  man drowns after sending selfie with durga idol to son
ದುರ್ಗಾದೇವಿ ಜತೆ ಸೆಲ್ಫಿ: ಕ್ಷಣ ಮಾತ್ರದಲ್ಲೇ ನಡೆಯಿತು ದುರಂತ


ಅಶೋಕ್‌ ಗಂಗೂಲಿ ಹಾಗೂ ಇನ್ನೂ ಹಲವರು ಸೇರಿಕೊಂಡು ಕೊಲ್ಕತ್ತಾದ ಕುಮೊರ್ತುಲಿಯಿಂದ ಹೌರಾದ ಬಾಲಿಗೆ ದೋಣಿ ಮೂಲಕ ದುರ್ಗಾ ದೇವಿ ವಿಗ್ರಹಗಳನ್ನು ತರಲಾಗುತ್ತಿತ್ತು. ಬಾಲಿಯ ಕಾಕೇಶ್ವರ್ತಾ ಘಾಟ್ನ ದಡ ತಲುಪುತ್ತಿದ್ದ ವೇಳೆ ಗಂಗೂಲಿ ಹಾರಲು ಯತ್ನಿಸಿದ್ದಾರೆ. ಆದರೆ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಕೂಡಲೇ ಇವರನ್ನು ರಕ್ಷಿಸಲು ಮತ್ತೋರ್ವ ಸದಸ್ಯ ನೀರಿಗೆ ಜಿಗಿದಿದ್ದಾರೆ. ಆದರೆ ಗಂಗೂಲಿ ದೇಹ ಪತ್ತೆಯಾಗಿರಲಿಲ್ಲ. ಸುಮಾರು ಗಂಟೆಯ ಬಳಿಕ ಗಂಗೂಲಿ ಮೃತದೇಹ ಪತ್ತೆಯಾಗಿತ್ತು.



ಮಾಜಿ ಬ್ಯಾಂಕ್‌ ಉದ್ಯೋಗಿಯಾಗಿರುವ ಗಂಗಲೂ ಈ ದುರ್ಘಟನೆಗೆ ಕೆಲ ನಿಮಿಷಕ್ಕೂ ಮುನ್ನ ವಿದೇಶದಲ್ಲಿರುವ ತಮ್ಮ ಮಗನಿಗೆ ದುರ್ಗಾ ದೇವಿ ವಿಗ್ರಹಗಳೊಂದಿಗಿನಿ ಸೆಲ್ಫಿ ಹಾಗೂ ದೇವಿ ವಿಗ್ರಹಗಳ ಚಿತ್ರಗಳನ್ನು ರವಾನಿಸಿದ್ದರಂತೆ. ಹಬ್ಬದ ಹೊಸ್ತಿಲಿನಲ್ಲಿದ್ದ ಕುಟುಂಬಸ್ಥರಿಗೆ ಗಂಗೂಲಿ ಮರಣದ ಸುದ್ದಿ ಭಾರೀ ಆಗಾತವನ್ನುಂಟು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ