ಆ್ಯಪ್ನಗರ

ಗಂಗಾ ಶುದ್ಧೀಕರಣಕ್ಕೆ NRIಗಳಿಂದ 500 ಕೋಟಿ!

ಪವಿತ್ರ ಗಂಗಾ ಶುದ್ಧೀಕರಣ ಯೋಜನೆಗೆ ಭಾರತೀಯ ಮೂಲದ ಲಂಡನ್‌ ಉದ್ಯಮಿಗಳು 500 ಕೋಟಿ ರೂಪಾಯಿ ಅನುದಾನ ನೀಡಲು ಮುಂದೆ ಬಂದಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

Vijaya Karnataka Web 30 Nov 2017, 3:51 pm
ಲಂಡನ್: ಪವಿತ್ರ ಗಂಗಾ ನದಿಯ ಶುದ್ಧೀಕರಣ ಯೋಜನೆಗೆ ಭಾರತೀಯ ಮೂಲದ ಲಂಡನ್‌ ಉದ್ಯಮಿಗಳು 500 ಕೋಟಿ ರೂಪಾಯಿ ಅನುದಾನ ನೀಡಲು ಮುಂದಾಗಿದ್ದಾರೆ.
Vijaya Karnataka Web  nitin gadkari gets rs 500 crore commitment for clean ganga mission
ಗಂಗಾ ಶುದ್ಧೀಕರಣಕ್ಕೆ NRIಗಳಿಂದ 500 ಕೋಟಿ!


'ಲಂಡನ್ ಮೂಲದ ನಾಲ್ಕು ಪ್ರಮುಖ ಉದ್ಯಮಿಗಳು ಪಾಟ್ನಾ, ಕಾನ್ಪುರ್, ಹರಿದ್ವಾರ ಮತ್ತು ಕೊಲ್ಕತ್ತಾದಲ್ಲಿರುವ ನದಿ ಪಾತ್ರದ ಪುನರುತ್ಪಾದನೆ ಮತ್ತು ಅಭಿವೃದ್ಧಿ ಜವಾಬ್ದಾರಿಯನ್ನು ಹೊತ್ತಿದ್ದಾರೆ,' ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಪಾಟ್ನಾ ಮೂಲದ ವೇದಾಂತ ಗ್ರೂಪ್ಸ್ ಮುಖ್ಯಸ್ಥ ಅನಿಲ್ ಅಗರ್ವಾಲ್ ಅವರು ನಗರದ ನದಿಯ ಪಾತ್ರದ ಪುನರುತ್ಪಾದನೆಯ ವಾಗ್ದಾನ ಮಾಡಿದ್ದು, ಶಿಪ್ಪಿಂಗ್ ಮ್ಯಾಗ್ನೇಟ್ ರವಿ ಮಲ್ಹೋತ್ರಾ ಅವರು ಕಾನ್ಪುರ್‌ದ ನದಿ ತಟವನ್ನು ಅಭಿವೃದ್ದಿಪಡಿಸಲಿದ್ದಾರೆ. ಅದರಂತೆ, ಹಿಂದೂಜಾ ಗ್ರೂಪ್‌ನ ಮುಖ್ಯಸ್ಥರು ಹರಿದ್ವಾದ ಘಾಟ್‌ಗಳ ಅಭಿವೃದ್ಧಿ ಹೊಣೆ ಹೊತ್ತಿದ್ದು, ಇಂದೊರಮಾ ಗ್ರೂಪ್‌ನ ಮಾಲೀಕರಾದ ಪ್ರಕಾಶ್ ಲೋಹಿಯಾ ಅವರು ಕೋಲ್ಕತ್ತಾದ ಗಂಗಾ ಸಾಗರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ.

'ಈ ಯೋಜನೆ 500 ಕೋಟಿ ರೂಪಾಯಿಗಳ ಬದ್ದತೆಯನ್ನು ಹೊಂದಿದ್ದು, 'ನಾಮಾಮಿ ಗಂಗೆ' ಯೋಜನೆ ಪೂರ್ಣಗಳಲ್ಲೂ ಅನಿವಾಸಿ ಭಾರತೀಯರು ಮುಂದೆ ಬರಬೇಕು ಎಂದು ಲಂಡನ್‌ ಪ್ರವಾಸದ ಕೊನೆಯ ದಿನ ಗಡ್ಕರಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ