ಆ್ಯಪ್ನಗರ

ಸರಕಾರದ ಕಠಿಣ ಕ್ರಮ: ಕಾಶ್ಮೀರದಲ್ಲಿ ಕಲ್ಲು ತೂರಾಟ ಇಳಿಕೆ

ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಭದ್ರತಾ ಪಡೆಗಳ ಕಠಿಣ ಪರಿಶ್ರಮದಿಂದ ಪ್ರಸಕ್ತ ವರ್ಷ ಕಾಶ್ಮೀರದಲ್ಲಿ ಶೇ.50ರಷ್ಟು ಕಲ್ಲು ತೂರಾಟ ಪ್ರಕರಣಗಳು ಕಡಿಮೆಯಾಗಿವೆ.

ಎಕನಾಮಿಕ್ ಟೈಮ್ಸ್ 27 Jul 2017, 11:26 am
ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಭದ್ರತಾ ಪಡೆಗಳ ಕಠಿಣ ಪರಿಶ್ರಮದಿಂದ ಪ್ರಸಕ್ತ ವರ್ಷ ಕಾಶ್ಮೀರದಲ್ಲಿ ಶೇ.50ರಷ್ಟು ಕಲ್ಲು ತೂರಾಟ ಪ್ರಕರಣಗಳು ಕಡಿಮೆಯಾಗಿವೆ ಎಂದು ಸಿಆರ್‌ಪಿಎಫ್ ಡಿಜಿ ತಿಳಿಸಿದೆ.
Vijaya Karnataka Web  stone pelting incidents down by half in kashmir valley crpf dg
ಸರಕಾರದ ಕಠಿಣ ಕ್ರಮ: ಕಾಶ್ಮೀರದಲ್ಲಿ ಕಲ್ಲು ತೂರಾಟ ಇಳಿಕೆ


ಸಿಆರ್‌ಪಿಎಫ್ ಮಹಾನಿರ್ದೇಶಕ ಆರ್‌.ಆರ್.ಭಟ್ನಾಗರ್ ಅವರ ಪ್ರಕಾರ, ಕಳೆದ ವರ್ಷ 1590 ಬಾರಿ ಕಲ್ಲು ತೂರಾಟ ನಡೆದಿದ್ದು, ಪ್ರಸಕ್ತ ಸಾಲಿನಲ್ಲಿ 424 ಬಾರಿ ಕಲ್ಲು ತೂರಾಟ ನಡೆದಿದೆ. ಇದು ಕಳೆದ ವರ್ಷಕ್ಕಿಂತ ಅರ್ಧದಷ್ಟು ಎಂದು ಮಾಹಿತಿ ನೀಡಿದ್ದಾರೆ.

ಅರೆಸೇನಾಪಡೆಯ 78ನೇ ಸಂಸ್ಥಾಪನಾ ದಿನಕ್ಕೂ ಹಿಂದಿನ ದಿನ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಜಿ ಅವರು, ಸರಕಾರ ಹಾಗೂ ಸೇನಾಪಡೆ ತೆಗೆದುಕೊಂಡಿರುವ ಕಠಿಣ ಕ್ರಮಗಳ ಫಲವಾಗಿ ಕಲ್ಲೂ ತೂರಾಟ ಪ್ರಕರಣಗಳು ಇಳಿಮುಖವಾಗಿದ್ದು, ಪ್ರತ್ಯೇಕವಾದಿಗಳ ವಿರುದ್ಧದ ತೀವ್ರ ತನಿಖೆ ಹಾಗೂ ಜಂಟಿ ಕಾರ್ಯಾಚರಣೆ ಶಾಂತಿ ನೆಲೆಸಲು ಕಾರಣವಾಗಿದೆ ಎಂದಿದ್ದಾರೆ.

ಈ ಎಲ್ಲ ಕ್ರಮಗಳಿಂದ ಕಾಶ್ಮೀರದ ಪರಿಸ್ಥಿತಿಯನ್ನು ಸುಧಾರಿಸಿದೆ. ಭಯೋತ್ಪಾದಕ ಸಂಘಟನೆ ಹಾಗೂ ಪ್ರತ್ಯೇಕವಾದಿಗಳಿಗೆ ನೆರವು ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಸಿಆರ್‌ಪಿಎಫ್ ಪಡೆ ಸಹಕರಿಸುತ್ತಿದೆ ಎಂದು ಭಟ್ನಾಗರ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ