ಆ್ಯಪ್ನಗರ

ಸಯೀದ್ ಬಿಡುಗಡೆ: ಬುಗ್ತಿಗೆ ಸಿಗುತ್ತಾ ಭಾರತದ ಆಶ್ರಯ?

ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನಾಪಡೆಗಳ ಮಾನವ ಹಕ್ಕುಗಳ ಉಲ್ಲಂಘಿಸುತ್ತಿದ್ದು, ಹೋರಾಟಗಾರ ಬಲೂಚ್ ರಿಪಬ್ಲಿಕನ್ ಪಾರ್ಟಿ ಅಧ್ಯಕ್ಷ ಬ್ರಹುಮ್‌ದಘ್ ಬುಗ್ತಿಗೆ ಸ್ವಿಡ್ಜರ್‌ಲ್ಯಾಂಡ್ ಆಶ್ರಯ ನೀಡಲು ತಿರಸ್ಕರಿಸಿದೆ.

Vijaya Karnataka Web 23 Nov 2017, 12:45 pm
ಹೊಸದಿಲ್ಲಿ: ಮುಂಬೈ ದಾಳಿ ವರ್ಷಾಚರಣೆಗೆ ಮೂರು ದಿನಗಳಿರುವಾಗಲೇ ಉಗ್ರ ಹಫೀಜ್ ಸಯೀದ್‌ ಮೇಲೆ ಕರುಣೆ ತೋರಿದ ಪಾಕಿಸ್ತಾನ ಕೋರ್ಟ್, ಬಂಧಮುಕ್ತಗೊಳಿಸಿದೆ. ಇದೇ ವೇಳೆ ಕಾಕತಾಳೀಯವೆಂಬಂತೆ ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನಾಪಡೆಗಳ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಹೋರಾಟಗಾರ ಬಲೂಚ್ ರಿಪಬ್ಲಿಕನ್ ಪಾರ್ಟಿ ಅಧ್ಯಕ್ಷ ಬ್ರಹುಮ್‌ದಘ್ ಬುಗ್ತಿಗೆ ಸ್ವಿಡ್ಜರ್‌ಲ್ಯಾಂಡ್ ಆಶ್ರಯ ನೀಡಲು ತಿರಸ್ಕರಿಸಿದೆ.
Vijaya Karnataka Web  tit for tat will india grant baloch leader asylum now that pakistani court has freed hafiz saeed
ಸಯೀದ್ ಬಿಡುಗಡೆ: ಬುಗ್ತಿಗೆ ಸಿಗುತ್ತಾ ಭಾರತದ ಆಶ್ರಯ?


ಕಳೆದ ಜನವರಿಯಲ್ಲಿಯೇ ಬುಗ್ತಿ ಆಶ್ರಯ ಕೋರಿ ಭಾರತಕ್ಕೂ ಪತ್ರ ಬರೆದಿದ್ದಾರೆ. ಆದರೆ, ಪಾಕಿಸ್ತಾನಕ್ಕೆ ಹೊಸ ಸೇನಾ ಮುಖ್ಯಸ್ಥ ನಿಯೋಜನೆಗೊಂಡ ಹಿನ್ನೆಲೆಯಲ್ಲಿ, ಉಭಯ ರಾಷ್ಟ್ರಗಳ ಸಂಬಂಧ ಹೇಗೆ ಸುಧಾರಿಸಬಹುದೆಂದು ಕಾದು ನೋಡಲು ದೇಶ ಮುಂದಾಗಿತ್ತು.

ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದು ನಿರಾಕರಿಸುತ್ತಿರುವುದಲ್ಲದೇ, ಭಾರತದಲ್ಲಿನ ಉಗ್ರ ದಾಳಿಯ ರೂವಾರಿ ಸಯೀದ್‌ನನ್ನು ಪಾಕಿಸ್ತಾನ ಬಂಧಮುಕ್ತಗೊಳಿಸಿದೆ. ಇದರಿಂದ ಉಭಯ ರಾಷ್ಟ್ರಗಳ ಸಂಬಂಧದ ಗಾಯದ ಮೇಲೆ ಉಪ್ಪು ಹಾಕಿದಂತಾಗಿದ್ದು, ನೆರೆ ರಾಷ್ಟ್ರದೊಂದಿಗೆ ಸೌಹಾರ್ದತೆ ಸಾಧಿಸುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಬುಗ್ತಿ ಅರ್ಜಿಯನ್ನು ಭಾರತ ಗಂಭೀರವಾಗಿ ಪರಿಗಣಿಸಬಹುದು.


ಆಶ್ರಯ ಕೋರಿ ಸಲ್ಲಿಸಿದ ಅರ್ಜಿಯನ್ನು ಸ್ವಿಸ್ ತಿರಸ್ಕರಿಸಿದ ಹಿನ್ನಲೆಯಲ್ಲಿ, ಬುಗ್ತಿ ಟ್ವೀಟ್ ಮಾಡಿದ್ದು, 'ನನ್ನಂಥವರೂ ಇನ್ನು ಪಾಕಿಸ್ತಾನಕ್ಕೆ ಅಗತ್ಯವಾಗಿ ಬೇಕಾಗಿದ್ದು, ಉಗ್ರ ಸಯೀದ್‌ನಂಥವರನ್ನು ಬಿಡುಗಡೆಯಾಗುವುದಲ್ಲದೇ, ಪಾಕಿಸ್ತಾನ ಸೇನೆಯ ಕೃಪಕಟಾಕ್ಷವೂ ಸಿಗಲಿದೆ,' ಎಂದಿದ್ದಾರೆ.



ವಿಶ್ವಸಂಸ್ಥೆಯೇ ಉಗ್ರನೆಂದು ಘೋಷಿಸಿದ ಸಯೀದ್ ಹಿಡಿದುಕೊಟ್ಟವರಿಗೆ ಅಮೆರಿಕ ಸುಮಾರು 64 ಕೋಟಿ ರೂ. ಬಹುಮಾನ ಘೋಷಿಸಿತ್ತು. 166 ಮಂದಿಯನ್ನು ಬಲಿ ತೆಗೆದುಕೊಂಡು ಮುಂಬೈ ಉಗ್ರ ದಾಳಿಯ ಪ್ರಮುಖ ಸಂಚುಕೋರ ಈತ. ಇಂಥವನನ್ನೇ ಕೋರ್ಟ್ ಬಿಡುಗಡೆ ಮಾಡಲು ಕೋರ್ಟ್ ಆದೇಶಿಸಿದ್ದು, ಪಾಕ್ ವಿರೋಧಿ ದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ