ಆ್ಯಪ್ನಗರ

ಉಗ್ರರ ಕಳಿಸಿದರೆ ಶವ ಪಡೆಯಲು ಸಿದ್ಧರಾಗಿರಿ

ಕಾರ್ಗಿಲ್‌ ವಿಜಯ ದಿವಸದ ದ್ವಿದಶಮಾನೋತ್ಸವದ ಮುನ್ನಾದಿನ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂಚಿನಂತೆಯೇ ಪಾಕಿಸ್ತಾನವು ಉಗ್ರರು ಅಕ್ರಮವಾಗಿ ಭಾರತದ ಗಡಿಯೊಳಕ್ಕೆ ನುಸುಳಲು ಉತ್ತೇಜನ ನೀಡಿದರೆ ಭಾರತೀಯ ಸೇನೆ ಗುಂಡಿನಿಂದಲೇ ಉತ್ತರ ನೀಡುತ್ತದೆ. ಅದು ಪಾಕ್‌ ಸೇನೆಗೂ ಮನವರಿಕೆಯಾಗಿದೆ ಎಂದು ಹೇಳಿದರು.

PTI 26 Jul 2019, 5:00 am
ಶ್ರೀನಗರ: ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ನುಸಳುವಿಕೆ ಮುಂದುವರಿಸಿದರೆ ಅಂತಹವರ ಶವಗಳನ್ನು ವಾಪಸ್‌ ಪಡೆಯಬೇಕಾಗುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಪಾಕಿಸ್ತಾನಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web rawat


ಕಾರ್ಗಿಲ್‌ ವಿಜಯ ದಿವಸದ ದ್ವಿದಶಮಾನೋತ್ಸವದ ಮುನ್ನಾದಿನ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂಚಿನಂತೆಯೇ ಪಾಕಿಸ್ತಾನವು ಉಗ್ರರು ಅಕ್ರಮವಾಗಿ ಭಾರತದ ಗಡಿಯೊಳಕ್ಕೆ ನುಸುಳಲು ಉತ್ತೇಜನ ನೀಡಿದರೆ ಭಾರತೀಯ ಸೇನೆ ಗುಂಡಿನಿಂದಲೇ ಉತ್ತರ ನೀಡುತ್ತದೆ. ಅದು ಪಾಕ್‌ ಸೇನೆಗೂ ಮನವರಿಕೆಯಾಗಿದೆ ಎಂದು ಹೇಳಿದರು.
1999ರಲ್ಲಿ ಕಾರ್ಗಿಲ್‌ಗೆ ನುಸುಳುವ ದುಸ್ಸಾಹಸಕ್ಕೆ ಕೈಹಾಕಿದ ಪಾಕ್‌ಗೆ ಆಗಲೇ ಭಾರತೀಯ ಸೇನೆ ತಕ್ಕ ಶಿಕ್ಷೆ ಕೊಟ್ಟಿದೆ. ಎಷ್ಟೇ ಎತ್ತರದಿಂದ ನಮ್ಮ ದೇಶದೊಳಗೆ ನುಸುಳಲು ಯತ್ನಿಸಿದರೂ ನಾವು ಅವರನ್ನು ತಡೆದು ತಕ್ಕ ಶಿಕ್ಷೆ ನೀಡಲಿದ್ದೇವೆ. ಮುಂದೆಯೂ ಪಾಕ್‌ ಇಂಥ ದುಸ್ಸಾಹಸಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದರು.

ಪುಲ್ವಾಮ ಸಂಚು ಗೊತ್ತಿತ್ತು: ಪುಲ್ವಾಮದ ಹೆದ್ದಾರಿಯಲ್ಲಿ ತೆರಳುತ್ತಿದ್ದ ಭದ್ರತಾ ಪಡೆಗಳ ವಾಹನ ಗುರಿಯಾಗಿಸಿ ಆತ್ಮಹತ್ಯಾ ದಾಳಿ ನಡೆಸಿದ್ದು ಕಾಶ್ಮೀರಿ ಯುವಕ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆಯನ್ನು ರಾವತ್‌ ಖಂಡಿಸಿದರು. ''ದಾಳಿಯ ಆರೋಪವನ್ನು ನಮ್ಮ ಮೇಲೆ ಹೊರಿಸುತ್ತಿರುವ ಪಾಕಿಸ್ತಾನದ ಅಸಲಿಯತ್ತು ನಮಗೆ ಹಾಗೂ ಇಡೀ ಜಗತ್ತಿಗೆ ತಿಳಿದಿದೆ. ಪಾಕಿಸ್ತಾನದ ಕುಕೃತ್ಯದ ಬಗ್ಗೆ ಈಗಾಗಲೇ ನಮ್ಮ ಗುಪ್ತಚರ ಸಂಸ್ಥೆಗಳು ಬೇಕಾದಷ್ಟು ಸಾಕ್ಷ್ಯಗಳನ್ನು ಕೊಟ್ಟಿವೆ. ಇಮ್ರಾನ್‌ ಆರೋಪಕ್ಕೆ ಈ ಸಾಕ್ಷ್ಯಗಳೇ ಉತ್ತರ,'' ಎಂದು ಹೇಳಿದರು.

----------
ಪಾಠ ಕಲಿಯದ ಪಾಕಿಸ್ತಾನ


ಪಾಕಿಸ್ತಾನ ಉಗ್ರರಿಗೆ ಕುಮ್ಮಕ್ಕು ನೀಡಿ ಗಡಿಯಲ್ಲಿ ಅಕ್ರಮವಾಗಿ ನುಸುಳಿಸಿ ಭಾರತದಲ್ಲಿ ದಾಳಿಗಳನ್ನು ನಡೆಸುತ್ತಿದೆ ಎಂದು ಹಲವು ಬಾರಿ ಸಾಕ್ಷ್ಯ ಸಮೇತವಾಗಿ ಮನವರಿಕೆ ಮಾಡಿಕೊಡಲು ಯತ್ನಿಸಿದ್ದರೂ ಪಾಕಿಸ್ತಾನ ಉಗ್ರರ ನಿಗ್ರಹಕ್ಕೆ ಪರಿಣಾಮಕಾರಿ ಯತ್ನ ನಡೆಸಲೇ ಇಲ್ಲ ಎಂದು ರಾಜ್ಯಸಭೆಗೆ ಸರಕಾರ ತಿಳಿಸಿದೆ. ಗುರುವಾರ ಲಿಖಿತ ಉತ್ತರ ನೀಡಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಹಾಯಕ ಸಚಿವ ವಿ. ಮುರಳೀಧರನ್‌, ಯಾವುದೇ ರೂಪದಲ್ಲಿ ಉಗ್ರವಾದವನ್ನು ಬಳಸಿ ಭಾರತದ ಭೂಮಿಯನ್ನು ವಶಕ್ಕೆ ಪಡೆಯಲು ಪಾಕಿಸ್ತಾನಕ್ಕೆ ಸರಕಾರ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
--------

ಅಫಘಾನಿಸ್ತಾನ ಮತ್ತು ಕಾಶ್ಮೀರದಲ್ಲಿ ಹೋರಾಟ ನಡೆಸುತ್ತಿರುವ 30 ರಿಂದ 40 ಸಾವಿರ ಉಗ್ರರು ಈಗಲೂ ತಮ್ಮ ದೇಶದಲ್ಲಿ ಇದ್ದಾರೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ತಾವಾಗಿಯೇ ಒಪ್ಪಿಕೊಂಡಿದ್ದಾರೆ. ಉಗ್ರರಿಗೆ ಆಶ್ರಯ ನೀಡಿರುವುದನ್ನು ಆ ದೇಶ ಮೊದಲ ಸಲ ಒಪ್ಪಿಕೊಂಡಿದೆ. ಈಗ ಉಗ್ರರ ವಿರುದ್ಧ ಪರಿಣಾಮಕಾರಿ ಕ್ರಮ ಜರುಗಿಸಲು ಮುಂದಾಗಬೇಕು.

- ರವೀಶ್‌ ಕುಮಾರ್‌, ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ