ಆ್ಯಪ್ನಗರ

ಆಪರೇಶನ್ 200% ಸೇಫ್ ಎಂದ ವೈದ್ಯರು; 43 ಲಕ್ಷ ವೆಚ್ಚ ಮಾಡಿದ್ರೂ ಬದುಕುಳಿಯಲಿಲ್ಲ ಬಡ ಜೀವ

200% ಸುರಕ್ಷಿತ ಎಂಬ ಭರವಸೆ ನೀಡಿ 43 ಲಕ್ಷ ವೆಚ್ಚದಲ್ಲಿ ನಡೆದ ಶಸ್ತ್ರಚಿಕಿತ್ಸೆ ವಿಫಲವಾಗಿ ಮಹಿಳೆ ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ನಡೆದಿದೆ.

Vijaya Karnataka Web 8 Jan 2018, 12:39 pm
ಮುಂಬಯಿ: 200% ಸುರಕ್ಷಿತ ಎಂಬ ಭರವಸೆ ನೀಡಿ 43 ಲಕ್ಷ ರೂ ವೆಚ್ಚದಲ್ಲಿ ನಡೆದ ಶಸ್ತ್ರಚಿಕಿತ್ಸೆ ವಿಫಲವಾಗಿ ಮಹಿಳೆ ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ನಡೆದಿದ್ದು, ಬಹಳ ತಡವಾಗಿ ಬೆಳಕಿಗೆ ಬಂದಿದೆ. ವೈದ್ಯರ ಈ ವಂಚನೆ ಮತ್ತು ಹಗಲು ದರೋಡೆಯ ವಿರುದ್ಧ ಸಿಡಿದೆದ್ದಿರುವ ಮೃತ ಮಹಿಳೆಯ ಪತಿ ಈಗ ನ್ಯಾಯ ದೊರಕಿಸಿ ಕೊಡುವಂತೆ ಮಹಾರಾಷ್ಟ್ರ ವೈದ್ಯಕೀಯ ಮಂಡಳಿಯ ಕದ ತಟ್ಟಿದ್ದಾರೆ.
Vijaya Karnataka Web  woman dies after 200 safe operation costing rs 43 lakh
ಆಪರೇಶನ್ 200% ಸೇಫ್ ಎಂದ ವೈದ್ಯರು; 43 ಲಕ್ಷ ವೆಚ್ಚ ಮಾಡಿದ್ರೂ ಬದುಕುಳಿಯಲಿಲ್ಲ ಬಡ ಜೀವ


ಹಿಂದುಜಾ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದೆ. 56 ವರ್ಷದ ಮಹಿಳೆ ಮಂಜು (56) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದುರ್ದೈವಿ.

ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಿಥಲಾಲ್ ಭಾಫ್ನಾ (60) ಅವರು 43 ಲಕ್ಷ ರೂಪಾಯಿ ಹಣ ಸಂಗ್ರಹಿಸಿ ಅರ್ಧಾಂಗಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು.

ಟ್ರಾನ್ಸ್‌ಕೆಥೆಟರ್ ಮಿಟ್ರಲ್ ವಾಲ್ವ್ ರಿಪೇರಿ 200ರಷ್ಟು ಸುರಕ್ಷಿತ ಎಂದು ವೈದ್ಯರ ಭರವಸೆ ನೀಡಿದ್ದರು. ಆಪರೇಶನ್ ಬಳಿಕ ಕೇವಲ 5 ದಿನಗಳಲ್ಲಿ ಮನೆಗೆ ಮರಳಬಹುದು ಎಂದು ವೈದ್ಯರು ತಿಳಿಸಿದ್ದರು. ಆದರೆ, 60 ದಿನಗಳ ಬಳಿಕ ಕೋಮಾಸ್ಥಿತಿಯಲ್ಲಿದ್ದ ರೋಗಿಯನ್ನು ಮನೆಗೆ ಒಯ್ಯಲು ವೈದ್ಯರು ಸೂಚಿಸಿದ್ದರು. ಕಳೆದ ಡಿಸೆಂಬರ್ 19ರಂದು ಆಸ್ಪತ್ರೆಯಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಆಂಬುಲೆನ್ಸ್‌ನಲ್ಲಿ ರೋಗಿ ಮೃತಪಟ್ಟಿದ್ದಾರೆ ಎಂದು ಭಾಫ್ನಾ ದೂರಿದ್ದಾರೆ.

ಆದರೆ, ಮಾನವೀಯತೆಯ ದೃಷ್ಟಿಯಿಂದ 12.47 ಲಕ್ಷ ರೂಪಾಯಿ ಮರುಪಾವತಿ ಮಾಡಲಾಗಿದೆ ಎಂದು ಆಸ್ಪತ್ರೆ ಹೇಳಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ