ಆ್ಯಪ್ನಗರ

ಬೆಂಗಾಳಿ ಮಹಿಳೆಯ ‘ರತ್ನಗರ್ಭ’ದಲ್ಲಿ 1.5 ಕೆ.ಜಿ ಆಭರಣ!

ಮಹಿಳೆಯೊಬ್ಬರ ಹೊಟ್ಟೆಯಲ್ಲಿ 1.5 ಕೆಜಿ ಚಿನ್ನಾಭರಣ ಮತ್ತು ನಾಣ್ಯಗಳು ಸಿಕ್ಕಿವೆಯಂತೆ. ಹೊಟ್ಟೆಯಲ್ಲಿ ಏನೇನಿತ್ತು ಅಂತೀರಾ? ಚಿನ್ನದ ಸರ, ಮೂಗಿನ ನತ್ತು, ಕಿವಿಯ ಬೆಂಡೋಲೆ, ಬಳೆಗಳು, ಬ್ರೇಸ್‌ಲೆಟ್‌, ಕಾಲ್ಗೆಜ್ಜೆ, ವಾಚು!

PTI 26 Jul 2019, 5:00 am
ಕೋಲ್ಕೊತಾ: ಪುರಾಣದಲ್ಲಿ ಬ್ರಹ್ಮನನ್ನು ರತ್ನಗರ್ಭ ಎಂದು ಕರೆಯುತ್ತಾರೆ. ವಿಷ್ಣು ಅವನ ಹೊಟ್ಟೆಯನ್ನು ಹೊಕ್ಕಾಗ ಕಂಡದ್ದೆಲ್ಲವೂ ಚಿನ್ನ, ವಜ್ರ, ಮುತ್ತು, ರತ್ನಗಳಂತೆ!
Vijaya Karnataka Web 2-2-25072-PTI7_25_2019_000127B

ಅಂತಹುದೇ ಘಟನೆ ಪಶ್ಚಿಮಬಂಗಾಳದಲ್ಲೂ ನಡೆದಿದೆ. ಇಲ್ಲಿನ ಮಹಿಳೆಯೊಬ್ಬರ ಹೊಟ್ಟೆಯಲ್ಲಿ 1.5 ಕೆಜಿ ಚಿನ್ನಾಭರಣ ಮತ್ತು ನಾಣ್ಯಗಳು ಸಿಕ್ಕಿವೆಯಂತೆ. ಹೊಟ್ಟೆಯಲ್ಲಿ ಏನೇನಿತ್ತು ಅಂತೀರಾ? ಚಿನ್ನದ ಸರ, ಮೂಗಿನ ನತ್ತು, ಕಿವಿಯ ಬೆಂಡೋಲೆ, ಬಳೆಗಳು, ಬ್ರೇಸ್‌ಲೆಟ್‌, ಕಾಲ್ಗೆಜ್ಜೆ, ವಾಚು! ಇದರ ಜತೆಗೆ 5 ರೂ. ಮತ್ತು 10 ರೂಪಾಯಿಯ 90 ನಾಣ್ಯಗಳು. ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ ವೀರಭೂಮಿ ಜಿಲ್ಲೆಯ ರಾಮಪುರ್ಹತ್‌ನಲ್ಲಿ. ಇಲ್ಲಿನ ಸರಕಾರಿ ಮೆಡಿಕಲ್‌ ಕಾಲೇಜಿನಲ್ಲಿ .

ಯಾರೀ ಮಹಿಳೆ?: ಮರ್‌ಗ್ರಾಮ್‌ ಗ್ರಾಮದ ಆಕೆಗೆ 26 ವರ್ಷ. ಸ್ವಲ್ಪ ಮಟ್ಟಿಗಿನ ಮಾನಸಿಕ ಅಸ್ವಸ್ಥೆ. ''ನಮ್ಮ ಮನೆಯಲ್ಲಿ ಆಗಾಗ ಆಭರಣಗಳು ನಾಪತ್ತೆಯಾಗುತ್ತಿದ್ದವು. ಆಕೆಯೇ ಆಭರಣ ನುಂಗುತ್ತಿದ್ದಳು ಎಂಬ ಬಗ್ಗೆ ನಮಗೆ ಸಂಶಯವಿತ್ತಾದರೂ ಕೇಳಿದರೆ ಜೋರಾಗಿ ಅಳುತ್ತಿದ್ದಳು. ನಾವೇ ಸಾಕಷ್ಟು ಜಾಗೃತೆ ವಹಿಸುತ್ತಿದ್ದರೂ ಹೇಗೋ ಅದನ್ನು ನುಂಗಿ ಬಿಡುತ್ತಿದ್ದಳು,'' ಎಂದು ಮಹಿಳೆಯ ತಾಯಿ ಹೇಳುತ್ತಾರೆ. ಆಕೆ ನಾಣ್ಯಗಳನ್ನು ನುಂಗಿದ್ದು ಸಹೋದರನ ಅಂಗಡಿಯಿಂದಂತೆ.

''ಕಳೆದ ಎರಡು ತಿಂಗಳಿನಿಂದ ಆಕೆ ಆಸ್ವಸ್ಥಳಾಗಿದ್ದಳು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ನಾನಾ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋದೆವು. ಕೊನೆಗೆ ರಾಮಪುರತ್‌ನ ಆಸ್ಪತ್ರೆಗೆ ಕರೆದುಕೊಂಡು ಹೋದೆವು,'' ಎನ್ನುತ್ತಾರೆ ಅವರು.

ಡಾ. ಸಿದ್ಧಾರ್ಥ್‌ ಬಿಸ್ವಾಸ್‌ ನೇತೃತ್ವದ ತಂಡ ಸುಮಾರು ಒಂದು ವಾರ ಕಾಲ ತಪಾಸಣೆ ನಡೆಸಿದ ಬಳಿಕ ಹೊಟ್ಟೆಯ ಆಪರೇಷನ್‌ ನಡೆಸಿದರು. ಹೊಟ್ಟೆಯಲ್ಲಿ ಕೆಲವು ಬಂಗಾರದ ಜುವೆಲ್ಲರಿಗಳಿದ್ದವು. ಹೆಚ್ಚಿನವು ತಾಮ್ರ ಮತ್ತು ಹಿತ್ತಾಳೆಯವು ಎಂದು ವೈದ್ಯರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ