ಹೊಸದಿಲ್ಲಿ: 'ಇದು ನಮ್ಮೆಲ್ಲರ ಯಶಸ್ಸು. ಇದು ನವ ಭಾರತದ ಉತ್ಸಾಹದ ಸಾಕ್ಷಿಯಾಗಿದೆ. ಇದು ಹೊಸ ಭಾರತದ ಪ್ರತಿಫಲನವಾಗಿದೆ. ಇದು ದೇಶದ ಪ್ರತಿ ವ್ಯಕ್ತಿಗೆ ಸೇರಿದ ಸಾಧನೆ. ಈ ಸಾಧನೆಗಾಗಿ ಪ್ರತಿ ನಾಗರಿಕನನ್ನೂ ಅಭಿನಂದಿಸುತ್ತೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೇಶವು ನೂರು ಕೋಟಿ ಕೋವಿಡ್ 19 ಡೋಸ್ ಲಸಿಕೆಯ ಮೈಲುಗಲ್ಲು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಶುಕ್ರವಾರ ಭಾಷಣ ಮಾಡಿದರು. ಅವರ ಭಾಷಣದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.
ಭಾರತದ ಮಹತ್ವದ ಮೈಲುಗಲ್ಲು ದಾಟಿದೆ. ದೇಶ ತನ್ನ ಕರ್ತವ್ಯ ಮಾಡಿದೆ. ನೂರು ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ಭಾರತ ಅಕ್ಟೋಬರ್ 21ರಂದು ಇತಿಹಾಸ ಸೃಷ್ಟಿಸಿದೆ. ಜಗತ್ತು ಭಾರತದ ಸಾಧನೆಯನ್ನು ಕೊಂಡಾಡುತ್ತಿದೆ. ನೂರು ಕೋಟಿ ಲಸಿಕೆ ಸಾಧನೆಯು ಒಂದು ಸಂಖ್ಯೆಯಷ್ಟೇ. ಇದು ಇತಿಹಾಸದ ಹೊಸ ಅಧ್ಯಾಯ. ಭಾರತವು ಕಷ್ಟಕರ ಗುರಿಯನ್ನು ಯಶಸ್ವಿಯಾಗಿ ಸಾಧಿಸಬಲ್ಲದು ಎನ್ನುವುದಕ್ಕೆ ಒಂದು ಉದಾಹರಣೆ. ತನ್ನ ಗುರಿಗಳನ್ನು ತಲುಪಲು ದೇಶ ಕಠಿಣ ಶ್ರಮ ಪಡಲಿದೆ ಎಂಬುದನ್ನು ತೋರಿಸಿದೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕವನ್ನು ಭಾರತ ಹೇಗೆ ಎದುರಿಸಲಿದೆ? ಭಾರತಕ್ಕೆ ಲಸಿಕೆಗಳು ಸಿಗುತ್ತದೆಯೇ ಎಂದು ಜನರು ಪ್ರಶ್ನಿಸುತ್ತಿದ್ದರು. ಆದರೆ ಈ ಎಲ್ಲ ಪ್ರಶ್ನೆಗಳಿಗೆ 100 ಕೋಟಿ ಡೋಸ್ ಲಸಿಕೆ ಉತ್ತರ ನೀಡಿದೆ. ಭಾರತದ ಲಸಿಕೆ ಅಭಿಯಾನವು 'ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಔರ್ ಸಬ್ ಕಾ ಪ್ರಯಾಸ್' ಮಂತ್ರಕ್ಕೆ ಸಜೀವ ಉದಾಹರಣೆ ಎಂದು ಟೀಕಾಕಾರರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಕಾಯಿಲೆಯು ಬಡವ ಅಥವಾ ಶ್ರೀಮಂತ ಎಂದು ತಾರತಮ್ಯ ಮಾಡುವುದಿಲ್ಲವೋ ಹಾಗೆಯೇ ಲಸಿಕೆ ಅಭಿಯಾನವೂ ತಾರತಮ್ಯ ಮಾಡುವುದಿಲ್ಲ. ನಮ್ಮ ಲಸಿಕೀಕರಣ ಯೋಜನೆಯ ಮೇಲೆ ವಿಐಪಿ ಸಂಸ್ಕೃತಿ ಆವರಿಸಬಾರದು ಎಂಬುದನ್ನು ಖಾತರಿಪಡಿಸಿಕೊಂಡಿದ್ದೆವು. ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗಿದೆ. ಭಾರತದ ಸಂಪೂರ್ಣ ಲಸಿಕೀಕರಣ ಕಾರ್ಯಕ್ರಮವು ವಿಜ್ಞಾನ-ಚಾಲಿತ ಮತ್ತು ವಿಜ್ಞಾನ ಆಧಾರಿತ ಎನ್ನುವ ಅಂಶದ ಬಗ್ಗೆ ನಾವು ಹೆಮ್ಮೆ ಪಡಬೇಕು. ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನವನ್ನು ಆಧರಿಸಿದೆ. ಜಗತ್ತಿನ ಅನೇಕ ದೇಶಗಳು ಲಸಿಕೆ ಬಗ್ಗೆ ಹಿಂಜರಿಕೆಯ ಸಮಸ್ಯೆ ಎದುರಿಸುತ್ತಿದ್ದರೆ, ಭಾರತ 100 ಕೋಟಿ ಸಾಧನೆ ಮಾಡಿರುವುದು ವಿಶೇಷವಾಗಿದೆ ಎಂದರು.
ಭಾರತ ಹಾಗೂ ವಿದೇಶಗಳಲ್ಲಿನ ಪರಿಣತರು ಭಾರತದ ಆರ್ಥಿಕತೆ ಬಗ್ಗೆ ಸಕಾರಾತ್ಮಕವಾಗಿದ್ದಾರೆ. ಇಂದು ಭಾರತದ ಕಂಪೆನಿಗಳು ಕೇವಲ ದಾಖಲೆಯ ಹೂಡಿಕೆ ಪಡೆದುಕೊಳ್ಳುತ್ತಿರುವುದಷ್ಟೇ ಅಲ್ಲ, ಯುವಜನರಿಗೆ ಉದ್ಯೋಗ ಸೃಷ್ಟಿಯೂ ನಡೆಯುತ್ತಿದೆ. ಸ್ಟಾರ್ಟ್ ಅಪ್ಗಳಲ್ಲಿನ ದಾಖಲೆ ಹೂಡಿಕೆ ಬಳಿಕ, ದಾಖಲೆಯ ಪ್ರಮಾಣದ ಸ್ಟಾರ್ಟ್ಅಪ್ಗಳು ಕೂಡ ಅಭಿವೃದ್ಧಿಯಾಗುತ್ತಿವೆ.
ಭಾರತವು ಈಗ ಕೋವಿಡ್ನಿಂದ ಇನ್ನಷ್ಟು ಸುರಕ್ಷಿತವಾಗಿದೆ ಎಂಬುದನ್ನು ಜಗತ್ತು ನೋಡುತ್ತಿದೆ. ಭಾರತವು ಔಷಧ ಹಬ್ ಆಗಿರುವುದನ್ನು ಜಗತ್ತು ಒಪ್ಪಿಕೊಂಡಿದೆ. ಸಾಂಕ್ರಾಮಿಕದ ವಿರುದ್ಧ ರಕ್ಷಣೆಯ ನಮ್ಮ ಮೊದಲ ಪ್ರಯತ್ನ ಸಾರ್ವಜನಿಕ ಪಾಲ್ಗೊಳ್ಳುವಿಕೆಯಾಗಿತ್ತು. ಇದರ ಭಾಗವಾಗಿ ಜನರು ದೀಪ ಹಚ್ಚಿ, ಚಪ್ಪಾಳೆ ತಟ್ಟಿದರು. ನಾವು ಇದರಿಂದ ಕಾಯಿಲೆಯಿಂದ ಮುಕ್ತವಾಗಬಹುದೇ ಎಂದು ಅನೇಕರು ಪ್ರಶ್ನಿಸಿದ್ದರು ಎಂದು ಮೋದಿ ಹೇಳಿದ್ದಾರೆ.
ನಾವು ಆಲೋಚಿಸಿದಾಗಲೆಲ್ಲ ಆಶಾವಾದವಷ್ಟೇ ಕಾಣಿಸುತ್ತಿತ್ತು. ಇದಕ್ಕೂ ಮುಂಚೆ ಆ ದೇಶ, ಈ ದೇಶದಲ್ಲಿ ತಯಾರಿಸುವ ಬಗ್ಗೆ ಮಾತುಗಳನ್ನು ಕೇಳುತ್ತಿದ್ದೆವು. ಆದರೆ ಇಂದು ಪ್ರತಿಯೊಬ್ಬರೂ 'ಮೇಡ್ ಇನ್ ಇಂಡಿಯಾ' ಬಗ್ಗೆ ಮಾತನಾಡುತ್ತಿದ್ದಾರೆ. ಮೇಡ್ ಇನ್ ಇಂಡಿಯಾದ ತಾಕತ್ತು ಎಲ್ಲ ಭಾರತೀಯರಿಗೂ ಅರಿವಾಗಿದೆ. ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನೇ ಖರೀದಿ ಮಾಡುವ ಮೂಲಕ ಭಾರತೀಯ ಉತ್ಪಾದಕರಿಗೆ ಪ್ರೋತ್ಸಾಹ ನೀಡಬೇಕು. 'ವೋಕಲ್ ಫಾರ್ ಲೋಕಲ್' ಅನ್ನು ಪ್ರಚಾರ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಜನರು ಮುಂದಿನ ಹಬ್ಬಗಳನ್ನು ಬಹಳ ಎಚ್ಚರಿಕೆಯಿಂದ ಆಚರಿಸಬೇಕು ಎಂದು ಮನವಿ ಮಾಡುತ್ತೇನೆ. ಮೊದಲ ಡೋಸ್ ಕೋವಿಡ್ 19 ಲಸಿಕೆಯನ್ನು ಪಡೆದುಕೊಳ್ಳದವರೆಲ್ಲರೂ ಲಸಿಕೆ ಪಡೆದುಕೊಳ್ಳುವುದನ್ನು ಅತಿ ಮುಖ್ಯ ಆದ್ಯತೆಯನ್ನಾಗಿಸಿಕೊಳ್ಳುವಂತೆ ಕೋರುತ್ತೇನೆ. ಲಸಿಕೆ ಪಡೆದವರು, ಪಡೆಯದವರನ್ನು ಹುರಿದುಂಬಿಸಿ ಎಂದರು.
ಭಾರತದ ಮಹತ್ವದ ಮೈಲುಗಲ್ಲು ದಾಟಿದೆ. ದೇಶ ತನ್ನ ಕರ್ತವ್ಯ ಮಾಡಿದೆ. ನೂರು ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ಭಾರತ ಅಕ್ಟೋಬರ್ 21ರಂದು ಇತಿಹಾಸ ಸೃಷ್ಟಿಸಿದೆ. ಜಗತ್ತು ಭಾರತದ ಸಾಧನೆಯನ್ನು ಕೊಂಡಾಡುತ್ತಿದೆ. ನೂರು ಕೋಟಿ ಲಸಿಕೆ ಸಾಧನೆಯು ಒಂದು ಸಂಖ್ಯೆಯಷ್ಟೇ. ಇದು ಇತಿಹಾಸದ ಹೊಸ ಅಧ್ಯಾಯ. ಭಾರತವು ಕಷ್ಟಕರ ಗುರಿಯನ್ನು ಯಶಸ್ವಿಯಾಗಿ ಸಾಧಿಸಬಲ್ಲದು ಎನ್ನುವುದಕ್ಕೆ ಒಂದು ಉದಾಹರಣೆ. ತನ್ನ ಗುರಿಗಳನ್ನು ತಲುಪಲು ದೇಶ ಕಠಿಣ ಶ್ರಮ ಪಡಲಿದೆ ಎಂಬುದನ್ನು ತೋರಿಸಿದೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕವನ್ನು ಭಾರತ ಹೇಗೆ ಎದುರಿಸಲಿದೆ? ಭಾರತಕ್ಕೆ ಲಸಿಕೆಗಳು ಸಿಗುತ್ತದೆಯೇ ಎಂದು ಜನರು ಪ್ರಶ್ನಿಸುತ್ತಿದ್ದರು. ಆದರೆ ಈ ಎಲ್ಲ ಪ್ರಶ್ನೆಗಳಿಗೆ 100 ಕೋಟಿ ಡೋಸ್ ಲಸಿಕೆ ಉತ್ತರ ನೀಡಿದೆ. ಭಾರತದ ಲಸಿಕೆ ಅಭಿಯಾನವು 'ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಔರ್ ಸಬ್ ಕಾ ಪ್ರಯಾಸ್' ಮಂತ್ರಕ್ಕೆ ಸಜೀವ ಉದಾಹರಣೆ ಎಂದು ಟೀಕಾಕಾರರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಕಾಯಿಲೆಯು ಬಡವ ಅಥವಾ ಶ್ರೀಮಂತ ಎಂದು ತಾರತಮ್ಯ ಮಾಡುವುದಿಲ್ಲವೋ ಹಾಗೆಯೇ ಲಸಿಕೆ ಅಭಿಯಾನವೂ ತಾರತಮ್ಯ ಮಾಡುವುದಿಲ್ಲ. ನಮ್ಮ ಲಸಿಕೀಕರಣ ಯೋಜನೆಯ ಮೇಲೆ ವಿಐಪಿ ಸಂಸ್ಕೃತಿ ಆವರಿಸಬಾರದು ಎಂಬುದನ್ನು ಖಾತರಿಪಡಿಸಿಕೊಂಡಿದ್ದೆವು. ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗಿದೆ. ಭಾರತದ ಸಂಪೂರ್ಣ ಲಸಿಕೀಕರಣ ಕಾರ್ಯಕ್ರಮವು ವಿಜ್ಞಾನ-ಚಾಲಿತ ಮತ್ತು ವಿಜ್ಞಾನ ಆಧಾರಿತ ಎನ್ನುವ ಅಂಶದ ಬಗ್ಗೆ ನಾವು ಹೆಮ್ಮೆ ಪಡಬೇಕು. ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನವನ್ನು ಆಧರಿಸಿದೆ. ಜಗತ್ತಿನ ಅನೇಕ ದೇಶಗಳು ಲಸಿಕೆ ಬಗ್ಗೆ ಹಿಂಜರಿಕೆಯ ಸಮಸ್ಯೆ ಎದುರಿಸುತ್ತಿದ್ದರೆ, ಭಾರತ 100 ಕೋಟಿ ಸಾಧನೆ ಮಾಡಿರುವುದು ವಿಶೇಷವಾಗಿದೆ ಎಂದರು.
ಭಾರತ ಹಾಗೂ ವಿದೇಶಗಳಲ್ಲಿನ ಪರಿಣತರು ಭಾರತದ ಆರ್ಥಿಕತೆ ಬಗ್ಗೆ ಸಕಾರಾತ್ಮಕವಾಗಿದ್ದಾರೆ. ಇಂದು ಭಾರತದ ಕಂಪೆನಿಗಳು ಕೇವಲ ದಾಖಲೆಯ ಹೂಡಿಕೆ ಪಡೆದುಕೊಳ್ಳುತ್ತಿರುವುದಷ್ಟೇ ಅಲ್ಲ, ಯುವಜನರಿಗೆ ಉದ್ಯೋಗ ಸೃಷ್ಟಿಯೂ ನಡೆಯುತ್ತಿದೆ. ಸ್ಟಾರ್ಟ್ ಅಪ್ಗಳಲ್ಲಿನ ದಾಖಲೆ ಹೂಡಿಕೆ ಬಳಿಕ, ದಾಖಲೆಯ ಪ್ರಮಾಣದ ಸ್ಟಾರ್ಟ್ಅಪ್ಗಳು ಕೂಡ ಅಭಿವೃದ್ಧಿಯಾಗುತ್ತಿವೆ.
ಭಾರತವು ಈಗ ಕೋವಿಡ್ನಿಂದ ಇನ್ನಷ್ಟು ಸುರಕ್ಷಿತವಾಗಿದೆ ಎಂಬುದನ್ನು ಜಗತ್ತು ನೋಡುತ್ತಿದೆ. ಭಾರತವು ಔಷಧ ಹಬ್ ಆಗಿರುವುದನ್ನು ಜಗತ್ತು ಒಪ್ಪಿಕೊಂಡಿದೆ. ಸಾಂಕ್ರಾಮಿಕದ ವಿರುದ್ಧ ರಕ್ಷಣೆಯ ನಮ್ಮ ಮೊದಲ ಪ್ರಯತ್ನ ಸಾರ್ವಜನಿಕ ಪಾಲ್ಗೊಳ್ಳುವಿಕೆಯಾಗಿತ್ತು. ಇದರ ಭಾಗವಾಗಿ ಜನರು ದೀಪ ಹಚ್ಚಿ, ಚಪ್ಪಾಳೆ ತಟ್ಟಿದರು. ನಾವು ಇದರಿಂದ ಕಾಯಿಲೆಯಿಂದ ಮುಕ್ತವಾಗಬಹುದೇ ಎಂದು ಅನೇಕರು ಪ್ರಶ್ನಿಸಿದ್ದರು ಎಂದು ಮೋದಿ ಹೇಳಿದ್ದಾರೆ.
ನಾವು ಆಲೋಚಿಸಿದಾಗಲೆಲ್ಲ ಆಶಾವಾದವಷ್ಟೇ ಕಾಣಿಸುತ್ತಿತ್ತು. ಇದಕ್ಕೂ ಮುಂಚೆ ಆ ದೇಶ, ಈ ದೇಶದಲ್ಲಿ ತಯಾರಿಸುವ ಬಗ್ಗೆ ಮಾತುಗಳನ್ನು ಕೇಳುತ್ತಿದ್ದೆವು. ಆದರೆ ಇಂದು ಪ್ರತಿಯೊಬ್ಬರೂ 'ಮೇಡ್ ಇನ್ ಇಂಡಿಯಾ' ಬಗ್ಗೆ ಮಾತನಾಡುತ್ತಿದ್ದಾರೆ. ಮೇಡ್ ಇನ್ ಇಂಡಿಯಾದ ತಾಕತ್ತು ಎಲ್ಲ ಭಾರತೀಯರಿಗೂ ಅರಿವಾಗಿದೆ. ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನೇ ಖರೀದಿ ಮಾಡುವ ಮೂಲಕ ಭಾರತೀಯ ಉತ್ಪಾದಕರಿಗೆ ಪ್ರೋತ್ಸಾಹ ನೀಡಬೇಕು. 'ವೋಕಲ್ ಫಾರ್ ಲೋಕಲ್' ಅನ್ನು ಪ್ರಚಾರ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಜನರು ಮುಂದಿನ ಹಬ್ಬಗಳನ್ನು ಬಹಳ ಎಚ್ಚರಿಕೆಯಿಂದ ಆಚರಿಸಬೇಕು ಎಂದು ಮನವಿ ಮಾಡುತ್ತೇನೆ. ಮೊದಲ ಡೋಸ್ ಕೋವಿಡ್ 19 ಲಸಿಕೆಯನ್ನು ಪಡೆದುಕೊಳ್ಳದವರೆಲ್ಲರೂ ಲಸಿಕೆ ಪಡೆದುಕೊಳ್ಳುವುದನ್ನು ಅತಿ ಮುಖ್ಯ ಆದ್ಯತೆಯನ್ನಾಗಿಸಿಕೊಳ್ಳುವಂತೆ ಕೋರುತ್ತೇನೆ. ಲಸಿಕೆ ಪಡೆದವರು, ಪಡೆಯದವರನ್ನು ಹುರಿದುಂಬಿಸಿ ಎಂದರು.