ಆ್ಯಪ್ನಗರ

30 ಸೆಂಕೆಂಡ್‌ನಲ್ಲಿ ಬ್ಯಾಂಕಿನಿಂದ 10 ಲಕ್ಷ ಎಗರಿಸಿದ 10 ವರ್ಷದ ಬಾಲಕ; ಕೃತ್ಯದ ಹಿಂದೆ ನಟೋರಿಯಸ್‌ ಗ್ಯಾಂಗ್‌!

ಭಾರತದಲ್ಲಿ ಚಿಕ್ಕ ಬಾಲಕರನ್ನ ಅಪರಾಧ ಕೃತ್ಯಕ್ಕೆ ಬಳಸುವ ಪ್ರಕರಣಗಳು ಹೆಚ್ಚುತ್ತಿದೆ. ಭಿಕ್ಷೆ ಬೇಡಲು, ಜೀತದಾಳು ಎಂಬಂತೆ ಬಳಸುತ್ತಿದ್ದರು. ಇದೀಗ ಗ್ಯಾಂಗ್‌ವೊಂದು ಮಕ್ಕಳನ್ನ ಕಳ್ಳತನಕ್ಕೆ ಬಳಸುತ್ತಿದೆ. ಅದು ಕೂಡ ಫುಲ್‌ ತರಬೇತಿ ನೀಡಿ. ಮಕ್ಕಳನ್ನ ಹಿಡಿಯಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಮಕ್ಕಳಿಂದ ಈ ಕೃತ್ಯ ನಡೆಸುತ್ತಿದ್ದಾರೆ.

Vijaya Karnataka Web 15 Jul 2020, 1:24 pm
ಭೋಪಾಲ್‌: ಕೆಲವೊಂದು ಸಿನಿಮಾಗಳಲ್ಲಿ ನಾವು ನೋಡಿರುತ್ತೇವೆ. ಸಣ್ಣ ಪ್ರಾಯದ ಮಕ್ಕಳಿಗೆ ಕಳ್ಳತನದ ಬಗ್ಗೆ ತರಬೇತಿ ನೀಡುವುದು. ನಂತರ ಅವರನ್ನ ಕಳುಹಿಸಿ ಕಳ್ಳತನ ನಡೆಸುವುದು. ಇಂತಹದನ್ನು ರೀಲ್‌ ಅಲ್ಲಿ ನೋಡಿರುತ್ತೇವೆ. ಆದರೆ ರಿಯಲ್‌ ಆಗಿ ಇಂತಹ ಘಟನೆ ನಡೆಯುತ್ತೆ. ಹೌದು, ಅಂತಹದೊಂದು ಗ್ಯಾಂಗ್‌ ಮಧ್ಯಪ್ರದೇಶದಲ್ಲಿದೆ. ಈ ಗ್ಯಾಂಗ್‌ ಮಕ್ಕಳನ್ನ ಬಳಸಿ ಕಳ್ಳತನ ನಡೆಸುತ್ತಿದೆ. ಅದಕ್ಕೆ ಬ್ಯಾಂಕ್‌ವೊಂದರ ಸಿಸಿಟಿವಿಯ ದೃಶ್ಯಗಳೆ ಸಾಕ್ಷಿ.
Vijaya Karnataka Web 10 year old boy steals rs 10 lakh from bank in just 30 seconds at madhya pradesh
30 ಸೆಂಕೆಂಡ್‌ನಲ್ಲಿ ಬ್ಯಾಂಕಿನಿಂದ 10 ಲಕ್ಷ ಎಗರಿಸಿದ 10 ವರ್ಷದ ಬಾಲಕ; ಕೃತ್ಯದ ಹಿಂದೆ ನಟೋರಿಯಸ್‌ ಗ್ಯಾಂಗ್‌!



ನಡೆದಿದ್ದು ಏನು?

ಬ್ಯಾಂಕಿನೊಳಗೆ ಕಳ್ಳರ ಗ್ಯಾಂಗ್‌ವೊಂದಿದೆ ಎಂದು ಗೊತ್ತೆ ಇರುವುದಿಲ್ಲ. ದಿನ ನಿತ್ಯದಂತೆ ಬ್ಯಾಂಕಿನ ಸಿಬ್ಬಂದಿಗಳು ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಹೀಗೆ ಕೆಲಸ ಮಾಡುತ್ತಿದ್ದಾಗ ಒಬ್ಬ 10 ವರ್ಷದ ಬಾಲಕನೊಬ್ಬ ಟಿಪ್‌ಟಾಪ್‌ ಆಗಿ ಬ್ಯಾಂಕಿಗೆ ಎಂಟ್ರಿಕೊಡುತ್ತಾನೆ. ಹತ್ತು ವರ್ಷದ ಬಾಲಕನ ದೇಹ ಕೂಡ ಸಣ್ಣದಾಗಿರುವುದರಿಂದ ಮೆಲ್ಲನೆ ಕ್ಯಾಶಿಯರ್‌ನ ಕ್ಯಾಬಿನ್‌ಗೆ ಎಂಟ್ರಿ ಕೊಡುತ್ತಾನೆ. ಮೆಲ್ಲಗೆ ಅಲ್ಲಿ ಅಡಗಿ ಕುಳಿತು. ಸುಮಾರು ಹತ್ತು ಲಕ್ಷ ರೂ. ಹಣವನ್ನ ಬ್ಯಾಗ್‌ನಲ್ಲಿ ತುಂಬಿಸಿಕೊಂಡು, ಯಾರಿಗೂ ತಿಳಿಯದಂತೆ ಮೆಲ್ಲಗೆ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಈ ಕಳ್ಳತನ ಕೇವಲ ಮೂವತ್ತು ಸೆಕೆಂಡ್‌ನಲ್ಲಿ ನಡೆದಿರುವುದು ಭಾರೀ ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿದೆ. ಬ್ಯಾಂಕಿನ ಯಾವುದೇ ಸಿಬ್ಬಂದಿಗೆ ಈ ಬಗ್ಗೆ ಸುಳಿವು ಸಿಗಲೇ ಇಲ್ಲ.

ಲಾಕ್‌ಡೌನ್ ಟೈಮ್‌ನಲ್ಲಿ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಜೋಡಿಯ ವಿಡಿಯೋ ಕಾಲ್ ಮಾತುಕತೆ!

ಡೈರೆಕ್ಷನ್‌ ಕೊಟ್ಟಿದ್ದು ಮತ್ತೊಬ್ಬ!

ಇನ್ನು ಬಾಲಕ ಈ ರೀತಿಯ ಕೈಚಳಕ ತೋರಿದ್ದು ಬೇರೆಯವರ ನಿರ್ದೇಶನದಂತೆ. ಹೌದು, ಕಳ್ಳತನ ನಡೆಸುವ ಎರಡು ಮೂರು ದಿನಗಳ ಮುಂಚೆಯೇ ಎಲ್ಲಾವೂ ನೋಡಿಕೊಂಡಿದ್ದ ಈ ಗ್ಯಾಂಗ್‌ನ ಮುಖ್ಯಸ್ಥ. ಎರಡು ಮೂರು ಬಾರಿ ಬ್ಯಾಂಕಿಗೆ ಬಂದು ಎಲ್ಲವೂ ಗಮನಿಸಿ, ನಂತರ ಸರಿಯಾಗಿ ಪ್ಲಾನ್‌ ರೂಪಿಸಿ ಕಳ್ಳತನ ನಡೆಸಲು ಬಂದಿದ್ದ. ಬ್ಯಾಂಕಿನೊಳಗೆ ಇದ್ದ ಈತ ಕ್ಯಾಶಿಯರ್‌ ಕೌಂಟರ್‌ನಲ್ಲಿದ್ದ ಸಿಬ್ಬಂದಿ ಅಲ್ಲಿಂದ ಬೇರೆ ರೂಮ್‌ಗೆ ತೆರಳಿದಾಗ. ಹೊರಗಡೆ ನಿಂತಿದ್ದ ಬಾಲಕನಿಗೆ ಸನ್ನೆ ಮಾಡಿ ದುಡ್ಡು ಕದಿಯಲು ಸೂಚಿಸಿದ್ದಾನೆ. ಬಾಲಕ ಇವನ ಮಾತನ್ನ ಕೇಳಿಕೊಂಡು ಹಣ ಎಗರಿಸಿದ್ದಾನೆ.

ಹುಬ್ಬಳ್ಳಿಯಲ್ಲಿ ಕೋವಿಡ್‌ ಸೋಂಕಿಗೆ ಎಎಸ್ಐ ಮೃತ: ರಾಜ್ಯದಲ್ಲಿ 7 ಪೊಲೀಸರು ಬಲಿ!

ಇವರ ಹಿಂದೆ ಇದೆ ದೊಡ್ಡ ಗ್ಯಾಂಗ್‌!

ಸದ್ಯ ಬಾಲಕ ಹೊರಗೆ ಹೋಗುವಾಗ ಕ್ಯಾಶಿಯರ್‌ ಇದನ್ನ ಗಮನಿಸಿದ್ದಾನೆ. ತಕ್ಷಣ ಜೋರಾಗಿ ಕೂಗಿದ್ದಾನೆ. ಆ ವೇಳೆಗೆ ಬಾಲಕ ಹಾಗೂ ಆತನ ಮುಖ್ಯಸ್ಥ ಹಣ ಹಿಡಿದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇನ್ನು ಸಿಸಿಟಿವಿಯಲ್ಲಿ ಇವರ ಕೃತ್ಯ ಬಯಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಗೆ ಮುಂದಾಗಿರುವ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಇಂತಹದೊಂದು ಗ್ಯಾಂಗ್‌ ಸಕ್ರಿಯವಾಗಿದ್ದು, ಮಕ್ಕಳನ್ನ ಬಳಸಿ ಕಳ್ಳತನವನ್ನ ಮಾಡಿಸುತ್ತಿದ್ದಾರಂತೆ. ಈ ಗ್ಯಾಂಗ್‌ನಲ್ಲಿ ಒಂದು ಬಾಲಕಿ ಕೂಡ ಇದ್ದಾಳೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ