ಆ್ಯಪ್ನಗರ

ಆಂಧ್ರದ 10 ಲಕ್ಷ ಕುಟುಂಬಗಳಿಗೆ ರಂಜಾನ್‌ ತೋಫಾ

10 ಲಕ್ಷ ಬಿಪಿಎಲ್‌ ಮುಸ್ಲಿಂ ಕುಟುಂಬಗಳಿಗೆ ರಂಜಾನ್‌ ಉಡುಗೊರೆ ನೀಡಲು ಆಂಧ್ರ ಸರಕಾರ ನಿರ್ಧರಿಸಿದೆ.

ಏಜೆನ್ಸೀಸ್ 15 Jun 2016, 3:04 pm
ಹೈದರಾಬಾದ್‌: 10 ಲಕ್ಷ ಬಿಪಿಎಲ್‌ ಮುಸ್ಲಿಂ ಕುಟುಂಬಗಳಿಗೆ ರಂಜಾನ್‌ ಉಡುಗೊರೆ ನೀಡಲು ಆಂಧ್ರ ಪ್ರದೇಶ ಸರಕಾರ ನಿರ್ಧರಿಸಿದೆ.
Vijaya Karnataka Web 10l families in ap to receive ramzan gift
ಆಂಧ್ರದ 10 ಲಕ್ಷ ಕುಟುಂಬಗಳಿಗೆ ರಂಜಾನ್‌ ತೋಫಾ


ರಂಜಾನ್‌ ವಿಶೇಷ ಉಡುಗೊರೆ ನೀಡಲು ಸರಕಾರದ ಬೊಕ್ಕಸಕ್ಕೆ 60 ಕೋಟಿ ರೂ. ಹೊರೆ ಬೀಳಲಿದೆ. ಬಿಪಿಎಲ್‌ ಕಾರ್ಡ್‌ ಹೊಂದಿರುವ ಮುಸ್ಲಿಂ ಕುಟುಂಬಗಳಿಗೆ ಜುಲೈ 1ರಿಂದ 7ರವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ 5 ಕೆ.ಜಿ. ಗೋಧಿ, 2 ಕೆ.ಜಿ. ಸಕ್ಕರೆ, ಒಂದು ಕೆ.ಜಿ. ಶಾವಿಗೆ, 100 ಗ್ರಾಂ ತುಪ್ಪವನ್ನು ವಿತರಿಸಲಾಗುತ್ತದೆ.

ಈ ಪ್ರಸ್ತಾವನೆಯನ್ನು ಸಂಪುಟದ ಉಪ ಸಮಿತಿ ಮಂಗಳವಾರ ಅಧಿಕೃತವಾಗಿ ಅನುಮೋದಿಸಿದೆ. ಹಬ್ಬಗಳ ಸಂದರ್ಭದಲ್ಲಿ ವಿತರಣೆ ಆಗುವ ಉಡುಗೊರೆ ಮೇಲೆ ತಪ್ಪದೇ ತಮ್ಮ ಹೆಸರು ಹಾಕಿ ಪ್ರಚಾರ ಗಿಟ್ಟಿಸುವ ಮುಖ್ಯಮಂತ್ರಿ ಎನ್‌.ಚಂದ್ರಬಾಬು ಬಾಯ್ಡು, ಈ ಹಿಂದೆಯೂ ನಾನಾ ಸಮುದಾಯದವರಿಗೆ ಉಡುಗೊರೆ ನೀಡಲು ಸುಮಾರು 600 ಕೋಟಿ ರೂ. ಖರ್ಚು ಮಾಡಿದ್ದಾರೆ.

ಬಿಪಿಎಲ್‌ ಕಾರ್ಡ್‌ ಹೊಂದಿರುವ 1.6 ಕೋಟಿ ಮಂದಿಗೆ ಸಂಕ್ರಾಂತಿ ಕನುಕ (ಸಂಕ್ರಾತಿ ಉಡುಗೊರೆ)ನೀಡುವ ಮೂಲಕ 2015 ಜನವರಿಯಲ್ಲಿ ಉಡುಗೊರೆ ಸಂಪ್ರದಾಯ ಆರಂಭವಾಯಿತು. ಅದಕ್ಕೆ ಚಂದ್ರಣ್ಣ ಸಂಕ್ರಾತಿ ಕನುಕ ಎಂದು ಕರೆಯಲಾಗಿತ್ತು. ಪ್ರತಿ ಪ್ಯಾಕ್‌ಗೆ 280 ರೂ. ವೆಚ್ಚವಾಗಿತ್ತು. ನಂತರ ಚಂದ್ರಣ್ಣ ಕ್ರಿಸ್ಮಸ್‌ ಉಡುಗೊರೆ ನೀಡಲಾಯಿತು. 2016ರಲ್ಲೂ ಸಂಕ್ರಾತಿ ಉಡುಗೊರೆ ವಿತರಿಸಲಾಗಿತ್ತು.

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರಕಾರ, ನೌಕರರ ಸಂಬಳವನ್ನು ಹೊರತು ಪಡಿಸಿ ಬೇರೆ ಯಾವುದಕ್ಕೂ ಹಣ ಕೇಳದಂತೆ ಸೂಚನೆ ನೀಡಿದೆ. ಅಧಿಕಾರಿಗಳು, ಶಾಸಕರು, ಸಚಿವರ ವಿದೇಶ ಪ್ರವಾಸ, ಬ್ಯುಸಿನೆಸ್‌ ಕ್ಲಾಸ್‌ ಪ್ರಯಾಣ, ದುಬಾರಿ ಹೋಟೆಲ್‌, ಐಷಾರಾಮಿ ಕಾರ್‌ ಬಳಕೆಗೆ ಈ ಹಿಂದೆ ಕಡಿವಾಣ ಹಾಕಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ