[This story originally published in Times Of India on Sep 21, 2018]
ರಾಜ್ಕೋಟ್: ಗುಜರಾತ್ನಲ್ಲಿ ದೇಶದಲ್ಲೇ ಹೆಚ್ಚು ಸಿಂಹಗಳು ಕಾಣಸಿಗುತ್ತದೆ. ಆದರೆ, ಕಳೆದ 10 ದಿನಗಳಿಂದ ರಾಜ್ಯದ ಅಮ್ರೇಲಿ ಜಿಲ್ಲೆಯೊಂದರಲ್ಲಿ 12 ಸಿಂಹಗಳು ಮೃತಪಟ್ಟಿವೆ. 6 ಸಿಂಹದ ಮರಿಗಳು ಸೇರಿ ಹತ್ತಕ್ಕೂ ಅಧಿಕ ಸಿಂಹಗಳು ಮೃತಪಟ್ಟಿದ್ದಕ್ಕೆ ಕಂಗಾಲಾಗಿರುವ ರಾಜ್ಯ ಸರಕಾರ ತನಿಖೆಗೆ ಆದೇಶಿಸಿದೆ.
8 ಸಿಂಹಗಳು ಅನಾರೋಗ್ಯದಿಂದ ಮೃತಪಟ್ಟಿದ್ದು, 3 ಸಿಂಹಗಳು ಒಳಜಗಳದಿಂದ ಸಾವಿಗೀಡಾಗಿವೆ. ಆದರೆ, ಇಷ್ಟು ಕಡಿಮೆ ಅವಧಿಯಲ್ಲಿ 10ಕ್ಕೂ ಅಧಿಕ ಪ್ರಾಣಿಗಳು ಬಲಿಯಾಗಿರುವುದು ಅರಣ್ಯ ಇಲಾಖೆಯ ಚಿಂತೆಗೀಡುಮಾಡಿದೆ. ಗಿರ್ ಅರಣ್ಯದ ಪೂರ್ವ ಭಾಗದ ದಲ್ಖಾನಿಯಾ ವಲಯದಲ್ಲೇ 11 ಸಿಂಹ ಮೃತಪಟ್ಟಿವೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 18ರಂದು ಚಿಕಿತ್ಸೆ ಫಲಿಸದೆ ಮೂರು ಸಿಂಹದ ಮರಿಗಳು ಸಾವಿಗೀಡಾಗಿವೆ. ಮತ್ತೊಂದೆಡೆ, ವಿಷಪೂರಿತ ಕಾಡು ಹಂದಿಯನ್ನು ತಿಂದು ಹೆಣ್ಣು ಸಿಂಹ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು, 'ಸಿಂಹಗಳ ಮರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಗಾಂಧಿನಗರದಿಂದ ಅಮ್ರೇಲಿಗೆ ಒಂದು ತಂಡವನ್ನು ತನಿಖೆಗೆ ರವಾನಿಸಲಾಗಿದೆ. ಈ ಪೈಕಿ, ಮೂರು ಸಿಂಹಗಳು ಒಳಜಗಳದಿಂದ ಮೃತಪಟ್ಟಿವೆ. ಇದು ನೈಸರ್ಗಿಕ ಕಾರಣ. ಇನ್ನಿತರ ಸಿಂಹಗಳು ಬಲಿಯಾಗಿರುವ ಬಗ್ಗೆ ಮರಣೋತ್ತರ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ' ಎಂದು ಅರಣ್ಯ ಹಾಗೂ ಪರಿಸರ ಸಚಿವ ಗಣಪತ್ ವಾಸವ ಮಾಹಿತಿ ನೀಡಿದ್ದಾರೆ.
ಇನ್ನು,' 8 ಸಿಂಹಗಳು ಶ್ವಾಸಕೋಶ ಅಥವಾ ಯಕೃತ್ತು ಸೋಂಕಿನಿಂದಾಗಿ ಮೃತಪಟ್ಟಿವೆ. ಸಾವಿನ ನಿಖರವಾದ ಕಾರಣ ತಿಳಿಯಲು ಪಶುವೈದ್ಯ ಆಸ್ಪತ್ರೆಗೆ ಮಾದರಿಗಳನ್ನು ಕಳಿಸಲಾಗಿದೆ. ಆದರೆ, ಸಾಂಕ್ರಾಮಿಕ ರೋಗ ಇದಕ್ಕೆ ಕಾರಣವಲ್ಲ. ನೈಸರ್ಗಿಕ ಕಾರಣದಿಂದಲೇ ಮೃತಪಟ್ಟಿರಬಹುದು' ಎಂದು ಹಿರಿಯ ಅಧಿಕಾರಿ ಚೌಧರಿ ಹೇಳಿದ್ದಾರೆ. ಇನ್ನೊಂದೆಡೆ, ಸಿಂಹಗಳ ಅಕಾಲಿಕ ಮರಣದ ಬಗ್ಗೆ ರಾಜ್ಯಸಭೆ ಸದಸ್ಯ ಪರಿಮಲ್ ನಾಥ್ವಾನಿ ಸಹ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಕೋಟ್: ಗುಜರಾತ್ನಲ್ಲಿ ದೇಶದಲ್ಲೇ ಹೆಚ್ಚು ಸಿಂಹಗಳು ಕಾಣಸಿಗುತ್ತದೆ. ಆದರೆ, ಕಳೆದ 10 ದಿನಗಳಿಂದ ರಾಜ್ಯದ ಅಮ್ರೇಲಿ ಜಿಲ್ಲೆಯೊಂದರಲ್ಲಿ 12 ಸಿಂಹಗಳು ಮೃತಪಟ್ಟಿವೆ. 6 ಸಿಂಹದ ಮರಿಗಳು ಸೇರಿ ಹತ್ತಕ್ಕೂ ಅಧಿಕ ಸಿಂಹಗಳು ಮೃತಪಟ್ಟಿದ್ದಕ್ಕೆ ಕಂಗಾಲಾಗಿರುವ ರಾಜ್ಯ ಸರಕಾರ ತನಿಖೆಗೆ ಆದೇಶಿಸಿದೆ.
8 ಸಿಂಹಗಳು ಅನಾರೋಗ್ಯದಿಂದ ಮೃತಪಟ್ಟಿದ್ದು, 3 ಸಿಂಹಗಳು ಒಳಜಗಳದಿಂದ ಸಾವಿಗೀಡಾಗಿವೆ. ಆದರೆ, ಇಷ್ಟು ಕಡಿಮೆ ಅವಧಿಯಲ್ಲಿ 10ಕ್ಕೂ ಅಧಿಕ ಪ್ರಾಣಿಗಳು ಬಲಿಯಾಗಿರುವುದು ಅರಣ್ಯ ಇಲಾಖೆಯ ಚಿಂತೆಗೀಡುಮಾಡಿದೆ. ಗಿರ್ ಅರಣ್ಯದ ಪೂರ್ವ ಭಾಗದ ದಲ್ಖಾನಿಯಾ ವಲಯದಲ್ಲೇ 11 ಸಿಂಹ ಮೃತಪಟ್ಟಿವೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 18ರಂದು ಚಿಕಿತ್ಸೆ ಫಲಿಸದೆ ಮೂರು ಸಿಂಹದ ಮರಿಗಳು ಸಾವಿಗೀಡಾಗಿವೆ. ಮತ್ತೊಂದೆಡೆ, ವಿಷಪೂರಿತ ಕಾಡು ಹಂದಿಯನ್ನು ತಿಂದು ಹೆಣ್ಣು ಸಿಂಹ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು, 'ಸಿಂಹಗಳ ಮರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಗಾಂಧಿನಗರದಿಂದ ಅಮ್ರೇಲಿಗೆ ಒಂದು ತಂಡವನ್ನು ತನಿಖೆಗೆ ರವಾನಿಸಲಾಗಿದೆ. ಈ ಪೈಕಿ, ಮೂರು ಸಿಂಹಗಳು ಒಳಜಗಳದಿಂದ ಮೃತಪಟ್ಟಿವೆ. ಇದು ನೈಸರ್ಗಿಕ ಕಾರಣ. ಇನ್ನಿತರ ಸಿಂಹಗಳು ಬಲಿಯಾಗಿರುವ ಬಗ್ಗೆ ಮರಣೋತ್ತರ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ' ಎಂದು ಅರಣ್ಯ ಹಾಗೂ ಪರಿಸರ ಸಚಿವ ಗಣಪತ್ ವಾಸವ ಮಾಹಿತಿ ನೀಡಿದ್ದಾರೆ.
ಇನ್ನು,' 8 ಸಿಂಹಗಳು ಶ್ವಾಸಕೋಶ ಅಥವಾ ಯಕೃತ್ತು ಸೋಂಕಿನಿಂದಾಗಿ ಮೃತಪಟ್ಟಿವೆ. ಸಾವಿನ ನಿಖರವಾದ ಕಾರಣ ತಿಳಿಯಲು ಪಶುವೈದ್ಯ ಆಸ್ಪತ್ರೆಗೆ ಮಾದರಿಗಳನ್ನು ಕಳಿಸಲಾಗಿದೆ. ಆದರೆ, ಸಾಂಕ್ರಾಮಿಕ ರೋಗ ಇದಕ್ಕೆ ಕಾರಣವಲ್ಲ. ನೈಸರ್ಗಿಕ ಕಾರಣದಿಂದಲೇ ಮೃತಪಟ್ಟಿರಬಹುದು' ಎಂದು ಹಿರಿಯ ಅಧಿಕಾರಿ ಚೌಧರಿ ಹೇಳಿದ್ದಾರೆ. ಇನ್ನೊಂದೆಡೆ, ಸಿಂಹಗಳ ಅಕಾಲಿಕ ಮರಣದ ಬಗ್ಗೆ ರಾಜ್ಯಸಭೆ ಸದಸ್ಯ ಪರಿಮಲ್ ನಾಥ್ವಾನಿ ಸಹ ಆತಂಕ ವ್ಯಕ್ತಪಡಿಸಿದ್ದಾರೆ.