ಆ್ಯಪ್ನಗರ

ಮಳೆ, ಧೂಳಿನ ಬಿರುಗಾಳಿಗೆ 13 ಮಂದಿ ಬಲಿ

ಜೂನ್‌ 7ರಂದು ಇದೇ ರೀತಿ ಧೂಳುಮಿಶ್ರಿತ ಬಿರುಗಾಳಿಗೆ ಯುಪಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಈಗ ಮತ್ತೆ 13 ಮಂದಿ ಮೃತಪಡುವ ಮೂಲಕ ಸಾವಿನ ಸಂಖ್ಯೆ 39ಕ್ಕೆ ಏರಿಕೆಯಾದಂತಾಗಿದೆ.

PTI 15 Jun 2019, 5:00 am
ಲಖನೌ: ಉತ್ತರ ಪ್ರದೇಶದಲ್ಲಿ ಧೂಳು ಮಿಶ್ರಿತ ಬಿರುಗಾಳಿ ಹಾಗೂ ಮಳೆ ಸಂಬಂಧಿ ಅವಘಡಗಳಿಂದ ಕಳೆದ 13 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರಕಾರ ಶುಕ್ರವಾರ ಹೇಳಿದೆ. ಜೂನ್‌ 7ರಂದು ಇದೇ ರೀತಿ ಧೂಳುಮಿಶ್ರಿತ ಬಿರುಗಾಳಿಗೆ ಯುಪಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಈಗ ಮತ್ತೆ 13 ಮಂದಿ ಮೃತಪಡುವ ಮೂಲಕ ಸಾವಿನ ಸಂಖ್ಯೆ 39ಕ್ಕೆ ಏರಿಕೆಯಾದಂತಾಗಿದೆ. ಧೂಳು ಮಿಶ್ರಿತ ಬಿರುಗಾಳಿಗೆ 22 ಜಾನುವಾರುಗಳೂ ಮೃತಪಟ್ಟಿವೆ. 93 ಮನೆಗಳು ಹಾನಿಗೊಳಗಾಗಿವೆ. ಧೂಳಿನ ಬಿರುಗಾಳಿಗೆ ಹೆದರಿ ಅಯೋಧ್ಯೆ, ಖುಷಿನಗರ, ಲಖೀಂಪುರದಲ್ಲಿ ಜನತೆ ಮನೆಯಿಂದ ಹೊರಬರುತ್ತಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರಕಾರ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದೆ.
Vijaya Karnataka Web 13 killed in dust storm hailstorm related incidents in up
ಮಳೆ, ಧೂಳಿನ ಬಿರುಗಾಳಿಗೆ 13 ಮಂದಿ ಬಲಿ




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ