ಆ್ಯಪ್ನಗರ

ರಾಮಕಥೆ ಕೇಳುತ್ತಿದ್ದವರ ಮೇಲೆ ಪೆಂಡಾಲ್‌ ಕುಸಿತ, 14 ಸಾವು

ಮಳೆ ಹೊಡೆತಕ್ಕೆ ಪೆಂಡಾಲ್‌ ಬಿದ್ದಿದ್ದರಿಂದ, ಅದಕ್ಕೆ ಅಳವಡಿಸಲಾಗಿದ್ದ ಫ್ಯಾನ್‌ಗಳು ನೆಲಕ್ಕೆ ಉರುಳಿವೆ. ತೇವವಿದ್ದ ನೆಲದಲ್ಲಿ ವಿದ್ಯುತ್‌ ಶಾರ್ಟ್‌ ಸಕ್ರ್ಯೂಟ್‌ ಉಂಟಾಗಿ ಶಾಕ್‌ನಿಂದಾಗಿ ಜನರು ಸತ್ತಿದ್ದಾರೆ ಎಂದು ಸ್ಥಳೀಯರು ವಾದಿಸಿದ್ದಾರೆ.

PTI 24 Jun 2019, 5:00 am
ಜೈಪುರ: ರಾಜಸ್ಥಾನದ ಬಾರ್ಮೇರ್‌ ಜಿಲ್ಲೆಯ ಜಸೋಲ್‌ ಗ್ರಾಮದಲ್ಲಿ ಭಾನುವಾರ ಆಯೋಜನೆಗೊಂಡಿದ್ದ ರಾಮಕಥಾ ಕಾರ್ಯಕ್ರಮದಲ್ಲಿ ಪೆಂಡಾಲ್‌ ಕುಸಿದು 14 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Vijaya Karnataka Web barmer

ಸಂಜೆ 4.30ಕ್ಕೆ ಕಾಣಿಸಿಕೊಂಡ ಧೂಳು ಮಿಶ್ರಿತ ಬಿರುಗಾಳಿಯ ರಭಸಕ್ಕೆ ಪೆಂಡಾಲ್‌ ಬಿದ್ದಿದೆ. ನಂತರ ಜೋರಾಗಿ ಮಳೆಯೂ ಸುರಿಯಿತು. ಸುಮಾರು 1000 ಮಂದಿ ಕಾರ್ಯಕ್ರಮದಲ್ಲಿ ಸೇರಿದ್ದರು. ಗಾಯಾಳುಗಳಿಗೆ ಸಮೀಪದ ಬಾಲೋಟ್ರಾದಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ದುರಂತಕ್ಕೆ ಸಂತಾಪ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಅವರು ಘಟನೆಯ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ವಿದ್ಯುತ್‌ ಶಾಕ್‌ಗೆ ಸಾವು?: ಪೆಂಡಾಲ್‌ ಕುಸಿದ ಕಾರಣ 14 ಮಂದಿ ಮೃತಪಟ್ಟಿಲ್ಲ. ಮಳೆ ಹೊಡೆತಕ್ಕೆ ಪೆಂಡಾಲ್‌ ಬಿದ್ದಿದ್ದರಿಂದ, ಅದಕ್ಕೆ ಅಳವಡಿಸಲಾಗಿದ್ದ ಫ್ಯಾನ್‌ಗಳು ನೆಲಕ್ಕೆ ಉರುಳಿವೆ. ತೇವವಿದ್ದ ನೆಲದಲ್ಲಿ ವಿದ್ಯುತ್‌ ಶಾರ್ಟ್‌ ಸಕ್ರ್ಯೂಟ್‌ ಉಂಟಾಗಿ ಶಾಕ್‌ನಿಂದಾಗಿ ಜನರು ಸತ್ತಿದ್ದಾರೆ ಎಂದು ಸ್ಥಳೀಯರು ವಾದಿಸಿದ್ದಾರೆ. ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ಕಾರಣ ತಿಳಿದುಬರಬೇಕಿದೆ.

...........

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ