ಆ್ಯಪ್ನಗರ

ಯುಪಿ: ನೇಣು ಬಿಗಿದ ಸ್ಥಿತಿಯಲ್ಲಿ ವಸತಿ ಶಾಲೆಯ ವಿದ್ಯಾರ್ಥಿನಿ, ಪೋಷಕರಿಂದ ಕೊಲೆ ಆರೋಪ!

ವಸತಿ ಶಾಲೆಯೊಂದರಲ್ಲಿ 14 ವರ್ಷದ ಬಾಲಕಿಯ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ. ಪೋಷಕರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ.

TIMESOFINDIA.COM 14 Jul 2020, 8:33 am
ನೊಯ್ಡಾ: ಉತ್ತರ ಪ್ರದೇಶದ ನೊಯ್ಡಾದ ವಸತಿ ಶಾಲೆಯೊಂದರಲ್ಲಿ 14 ವರ್ಷದ ಬಾಲಕಿಯ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಾಲೆಯ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿರುವ ವಿದ್ಯಾರ್ಥಿನಿಯ ಕುಟುಂಬ ಇದು ಆತ್ಮಹತ್ಯೆಯಲ್ಲ. ತಮ್ಮ ಮಗಳ ಮೇಲೆ ಅತ್ಯಾಚಾರ ನಡೆಸಿ, ನಂತರ ಕೊಲೆ ಮಾಡಲಾಗಿದೆ.
Vijaya Karnataka Web jpg - 2020-07-14T082606.771


ಅಲ್ಲದೇ ಅಂತ್ಯಕ್ರಿಯೆ ಸಂಬಂಧ ನಮ್ಮಿಂದ ಬಲವಂತವಾಗಿ ಶಾಲಾ ದಾಖಲೆಗಳಿಗೆ ಸಹಿ ಹಾಕಿಸಿಕೊಳ್ಳಲಾಗಿದೆ ಎಂದು ಆರೋಪಿಸಿದೆ. ನೊಯ್ಡಾದ ಸೆಕ್ಟರ್‌ 115ರಲ್ಲಿಇರುವ ಬೋರ್ಡಿಂಗ್‌ ಸ್ಕೂಲ್‌ನಲ್ಲಿ ಜುಲೈ 3ರಂದು ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕರಣ ಬೆಳಕಿಗೆ ಬಂದಿದ್ದು, ಕುಟುಂಬ ಈಗ ನ್ಯಾಯಾಕ್ಕಾಗಿ ಮೊರೆ ಹೋಗಿದೆ.

ಸಿಎಂಗೆ ಪತ್ರ!
ಪ್ರಕರಣ ನಡೆದು 10 ದಿನಗಳಾದರೂ ಇದುವರೆಗೂ ಒಬ್ಬರ ವಿರುದ್ಧ ಕೇಸು ದಾಖಲಿಸಲಾಗಿಲ್ಲ. ಹರಿಯಾಣದ ಮಹೇಂದ್ರಗಢ ಜಿಲ್ಲೆಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿ ಕುಟುಂಬ ನ್ಯಾಯಕ್ಕಾಗಿ ಅಂಗಲಾಚಿ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಅವರಿಗೆ ಪತ್ರ ಬರೆದಿದೆ.

ಬೆಳಿಗ್ಗೆ 11.30ಕ್ಕೆ ದ್ವಿತೀಯ ಪಿಯು ಫಲಿತಾಂಶ, SMS ಮೂಲಕ ರಿಸಲ್ಟ್ ಲಭ್ಯ

ಶಾಲಾ ಆಡಳಿತ ಮಂಡಳಿಯಿಂದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ನೊಯ್ಡಾದ ಹೆಚ್ಚುವರಿ ಪೊಲೀಸ್‌ ಆಯುಕ್ತ ರಣವಿಜಯ್‌ ಸಿಂಗ್‌ ಹೆಳಿದ್ದಾರೆ. ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಡೆತ್‌ನೋಟ್‌ ಸಿಕ್ಕಿದೆ. ಇದರಲ್ಲಿಆಕೆ ತನ್ನ ಸಾವಿಗೆ ಕೌಟುಂಬಿಕ ಹಾಗೂ ಮಾನಸಿಕ ಸಮಸ್ಯೆಗಳು ಕಾರಣ ಎಂದು ಬರೆದಿಟ್ಟಿದ್ದಾಳೆ. ಆದರೆ ಎಲ್ಲಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೆಳಿದ್ದಾರೆ.

ಕುಟುಂಬದ ಆರೋಪವೇನು?
''ನನ್ನ ಇಬ್ಬರು ಹೆಣ್ಮಕ್ಕಳು ಇದೇ ಶಾಲೆಯಲ್ಲಿಓದುತ್ತಿದ್ದರೆ, ಮತ್ತೊಬ್ಬ ಮಗ ಇವರ ಆಡಳಿತ ಮಂಡಳಿಯ ಬೇರೆ ಶಾಲೆಯಲ್ಲಿಓದುತ್ತಿದ್ದಾನೆ. ಕೋವಿಡ್‌ ಕಾರಣ ಮನೆಗೆ ಬಂದಿದ್ದ ಮೂವರೂ ಜೂನ್‌ 18ರಂದು ಶಾಲೆಗೆ ಮರಳಿದ್ದರು. ಜುಲೈ 3ರಂದು ಶಾಲೆಯಿಂದ ಕರೆ ಬಂದಿತ್ತು.

ನಾವು ಅಲ್ಲಿಗೆ ದೌಡಾಯಿಸಿದಾಗ ಮೊದಲು ಸಿಬ್ಬಂದಿ ನಮ್ಮಿಂದ ಫೋನು ಕಸಿದುಕೊಂಡು ಬಳಿಕ ಮೃತ ದೇಹ ತೋರಿಸಿ, ಅಂತ್ಯಕ್ರಿಯೆ ಸಂಬಂಧ ತಮ್ಮಿಂದ ಏನೂ ತಪ್ಪಾಗಿಲ್ಲ ಎಂಬಂತೆ ದಾಖಲೆಗಳಿಗೆ ಶಾಲೆಯವರು ನಮ್ಮಿಂದ ಬಲವಂತದಿಂದ ಸಹಿ ಪಡೆದರು.

ಕೊರೊನಾ ಲೈವ್ ಅಪ್ಡೇಟ್ಸ್: ದೇಶದಲ್ಲಿ 9ಲಕ್ಷದ 07ಸಾವಿರಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ!

ನನ್ನ ಮಗಳ ಮೃತದೇಹ ನೀಲಿ ಬಣ್ಣಕ್ಕೆ ತಿರುಗಿತ್ತು. ಆಕೆಯ ಬಟ್ಟೆಗಳು ಹರಿದುಹೋಗಿದ್ದವು. ಸಣ್ಣಪುಟ್ಟ ಗಾಯಗಳಾಗಿದ್ದವು. ಇವೆಲ್ಲವನ್ನೂ ನೋಡಿದರೆ ನನ್ನ ಮಗಳ ಮೇಲೆ ಅತ್ಯಾಚಾರ ನಡೆದಿದೆ. ಇದನ್ನು ಮುಚ್ಚಿ ಹಾಕಲು ಬಲವಂತದಿಂದ ನೇಣು ಬಿಗಿದು ಆತ್ಮಹತ್ಯೆಯ ನಾಟಕವಾಡಿದ್ದಾರೆ. ನನ್ನ ಕರುಳಕುಡಿಯ ಸಾವಿಗೆ ನ್ಯಾಯಬೇಕು,'' ಎಂದು ತಾಯಿ ಕಣ್ಣೀರು ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ