ಆ್ಯಪ್ನಗರ

15 ಸಿಬಿಐ ಅಧಿಕಾರಿಗಳಿಗೆ ಗೃಹ ಇಲಾಖೆಯಿಂದ ಮೆಡಲ್‌, ಬೆಂಗಳೂರಿನ ಅಧಿಕಾರಿಯೊಬ್ಬರಿಗೆ ಗೌರವ!

15 ನುರಿತ ಸಿಬಿಐ ಅಧಿಕಾರಿಗಳಿಗೆ 2020ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಗೃಹ ಸಚಿವರ ಮೆಡಲ್‌ ಸಂದಿದೆ. ಅತ್ಯಂತ ವೃತ್ತಿ ಪರತೆಯೊಂದಿಗೆ ತನಿಖೆ ನಡೆಸಿ ಯಶಸ್ವಿಯಾದ ಒಟ್ಟು 121 ಪೊಲೀಸರು ಈ ಪದಕಕ್ಕೆ ಭಾಜನರಾಗಿದ್ದಾರೆಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

Vijaya Karnataka Web 13 Aug 2020, 7:05 am
ಹೊಸದಿಲ್ಲಿ: ಧಾರವಾಡದಲ್ಲಿ ನಡೆದ ಬಿಜೆಪಿ ಕಾರ‍್ಯಕರ್ತ ಯೋಗೇಶ್‌ ಗೌಡ ಹತ್ಯೆ ಪ್ರಕರಣ ಸೇರಿ ಹಲವು ಕೊಲೆ ಕೇಸ್‌ಗಳ ತನಿಖೆ ನಡೆಸಿದ 15 ನುರಿತ ಸಿಬಿಐ ಅಧಿಕಾರಿಗಳಿಗೆ 2020ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಗೃಹ ಸಚಿವರ ಮೆಡಲ್‌ ಸಂದಿದೆ. ಅತ್ಯಂತ ವೃತ್ತಿ ಪರತೆಯೊಂದಿಗೆ ತನಿಖೆ ನಡೆಸಿ ಯಶಸ್ವಿಯಾದ ಒಟ್ಟು 121 ಪೊಲೀಸರು ಈ ಪದಕಕ್ಕೆ ಭಾಜನರಾಗಿದ್ದಾರೆಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
Vijaya Karnataka Web government-axes-tenure-of-two-senior-cbi-officers-anish-prasad-abhay-singh


ಈ ಪುರಸ್ಕಾರ ಪಡೆದ 15 ಸಿಬಿಐ ಅಧಿಕಾರಿಗಳಲ್ಲಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ಸ್‌ಪೆಕ್ಟರ್‌ ರಾಕೇಶ್‌ ರಂಜನ್‌ ಅವರಿದ್ದಾರೆ. ಇವರು ಧಾರವಾಡದಲ್ಲಿ ನಡೆದ ಬಿಜೆಪಿ ಕಾರ‍್ಯಕರ್ತ ಯೋಗೇಶ್‌ ಗೌಡ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದರು. ವಿಚಾರವಾದಿ ನರೇಂದ್ರ ಧಾಬೋಲ್ಕರ್‌ ಹತ್ಯೆ ಕೇಸ್‌ ತನಿಖೆ ನಡೆಸಿದ ಮುಂಬಯಿ ಸ್ಪೆಷಲ್‌ ಕ್ರೈಂ ಬ್ರ್ಯಾಂಚ್‌ ಎಎಸ್‌ಪಿ ಸುಭಾಶ್‌ ಸಿಂಗ್‌ ಅವರಿಗೂ ಮೆಡಲ್‌ ಸಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ