ಹರ್ಯಾಣ: ಕೊರೊನಾ ವೈರಸ್ ಮಹಾಮಾರಿ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಕೆಎಸ್ಆರ್ಟಿಸಿ ತನ್ನ ಡಿಪೋದಲ್ಲಿ ಇದ್ದ ಹಳೆಯ ಬಸ್ಗಳನ್ನು ಮೊಬೈಲ್ ಸ್ಯಾನಿಟೈಸರ್ಗಳನ್ನಾಗಿ ಪರಿವರ್ತಿಸಿತ್ತು. ಇದೀಗ ಹರ್ಯಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ..! 'ಸಾರಿಗೆ ಸಂಜೀವಿನಿ' ಆಗಿ ಪರಿವರ್ತನೆಯಾಗಿವೆ ಕೆಎಸ್ಆರ್ಟಿಸಿ ಹಳೇ ಬಸ್ಗಳು..!
ಹರ್ಯಾಣ ರಾಜ್ಯ ರಸ್ತೆ ಸಾರಿಗೆ ಬಸ್ಗಳು ಈಗ ಮೊಬೈಲ್ ಕ್ಲಿನಿಕ್ಗಳಾಗಿ ಕಾರ್ಯನಿರ್ವಹಿಸುತ್ತಿವೆ. ಬಸ್ಗಳ ಸಂಚಾರ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ, ಬಸ್ಗಳನ್ನು ಕ್ಲಿನಿಕ್ ರೀತಿ ಬಳಸಿಕೊಳ್ಳಲಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿ 15 ಬಸ್ಗಳನ್ನು ಮೊಬೈಲ್ ಕ್ಲಿನಿಕ್ಗಳಾಗಿ ಪರಿವರ್ತಿಸಲಾಗಿದ್ದು, ಈ ಬಸ್ಗಳಲ್ಲಿ ಕೊರೊನಾ ವೈರಸ್ ಹೊರತುಪಡಿಸಿದ ಸಾಮಾನ್ಯ ಆರೋಗ್ಯ ಸೇವೆ ನೀಡಲಾಗುತ್ತಿದೆ. ಆಸ್ಪತ್ರೆಗಳು ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ಕೊಡೋದ್ರಲ್ಲಿ ವ್ಯಸ್ತವಾಗಿವೆ. ಈ ಬಸ್ಗಳಲ್ಲಿ ಕೊರೊನಾ ವೈರಸ್ ತಪಾಸಣೆ ಕೂಡಾ ನಡೆಯುತ್ತೆ.
ಬಡವರಿಗೆ ಉಚಿತವಾಗಿ ಮದ್ಯ ಹಂಚುತ್ತಿದ್ದ 'ಸಮಾಜ ಸೇವಕ'ರಿಗೆ ಈಗ ಖಾಕಿ 'ಕಿಕ್'..!
ಈ ಬಸ್ಗಳಲ್ಲಿ ಒಂದು ಕ್ಲಿನಿಕ್ನಲ್ಲಿ ಇರಬೇಕಾದ ಎಲ್ಲ ಮೂಲಭೂತ ಸೌಕರ್ಯಗಳೂ ಇವೆ. ರಾಜ್ಯ ಸರ್ಕಾರ ಈ ಬಸ್ಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇಟ್ಟಿದೆ. ಇದೀಗ ಹರ್ಯಾಣದಾದ್ಯಂತ ಮೊಬೈಲ್ ಕ್ಲಿನಿಕ್ಗಳಾಗಿ ಕಾರ್ಯನಿರ್ವಹಿಸುತ್ತಿರುವ 15 ಬಸ್ಗಳನ್ನು ನಗರ ಹಾಗೂ ಗ್ರಾಮಾಂತರ ಭಾಗಕ್ಕೆ ಸಮನಾಗಿ ಹಂಚಲಾಗಿದೆ.
'ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಬೇಡ': ಡಿಸಿಎಂ ಅಶ್ವತ್ಥನಾರಾಯಣ
ನಗರ ಪ್ರದೇಶಗಳಲ್ಲಿ ನಾಲ್ಕು ಬಸ್ಗಳು ಸಂಚರಿಸಿದರೆ, ಗ್ರಾಮಾಂತರ ಭಾಗದಲ್ಲಿ 11 ಬಸ್ಗಳು ಸಂಚಾರ ಮಾಡುತ್ತವೆ. ಒಂದೆಡೆ ನಿಲ್ಲದೆ ನಗರದ ವಿವಿಧ ಭಾಗಗಳಲ್ಲಿ ಸಂಚಾರ ಮಾಡೋದ್ರಿಂದ ಆರೋಗ್ಯ ಸೇವೆಯ ತುರ್ತು ಅಗತ್ಯ ಇರುವ ಜನರನ್ನು ಸುಲಭವಾಗಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ತಲುಪಬಹುದಾಗಿದೆ.
ಕೊರೊನಾ ವೈರಸ್ ಲಾಕ್ಡೌನ್ ಜಾಗೃತಿಗೆ ಪೊಲೀಸರಿಂದ ಆರ್ಕೆಸ್ಟ್ರಾ ಅಭಿಯಾನ..!
ಹರ್ಯಾಣ ರಾಜ್ಯದಲ್ಲಿ 185 ಕೊರೊನಾ ವೈರಸ್ ಸೋಂಕಿತರು ಈವರೆಗೆ ಪತ್ತೆಯಾಗಿದ್ದಾರೆ. ಈ ಪೈಕಿ 29 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮೂವರು ಸಾವಿಗೀಡಾಗಿದ್ದಾರೆ ಎಂದು ಹರ್ಯಾಣದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕೊರೊನಾ ಲಾಕ್ಡೌನ್: ಇಷ್ಟು ದಿನ ಮಾಡಿದ್ದೇನು..? ಮುಂದೆ ಮಾಡಬೇಕಾದ್ದೇನು..?
ಹರ್ಯಾಣ ರಾಜ್ಯ ರಸ್ತೆ ಸಾರಿಗೆ ಬಸ್ಗಳು ಈಗ ಮೊಬೈಲ್ ಕ್ಲಿನಿಕ್ಗಳಾಗಿ ಕಾರ್ಯನಿರ್ವಹಿಸುತ್ತಿವೆ. ಬಸ್ಗಳ ಸಂಚಾರ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ, ಬಸ್ಗಳನ್ನು ಕ್ಲಿನಿಕ್ ರೀತಿ ಬಳಸಿಕೊಳ್ಳಲಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿ 15 ಬಸ್ಗಳನ್ನು ಮೊಬೈಲ್ ಕ್ಲಿನಿಕ್ಗಳಾಗಿ ಪರಿವರ್ತಿಸಲಾಗಿದ್ದು, ಈ ಬಸ್ಗಳಲ್ಲಿ ಕೊರೊನಾ ವೈರಸ್ ಹೊರತುಪಡಿಸಿದ ಸಾಮಾನ್ಯ ಆರೋಗ್ಯ ಸೇವೆ ನೀಡಲಾಗುತ್ತಿದೆ. ಆಸ್ಪತ್ರೆಗಳು ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ಕೊಡೋದ್ರಲ್ಲಿ ವ್ಯಸ್ತವಾಗಿವೆ. ಈ ಬಸ್ಗಳಲ್ಲಿ ಕೊರೊನಾ ವೈರಸ್ ತಪಾಸಣೆ ಕೂಡಾ ನಡೆಯುತ್ತೆ.
ಬಡವರಿಗೆ ಉಚಿತವಾಗಿ ಮದ್ಯ ಹಂಚುತ್ತಿದ್ದ 'ಸಮಾಜ ಸೇವಕ'ರಿಗೆ ಈಗ ಖಾಕಿ 'ಕಿಕ್'..!
ಈ ಬಸ್ಗಳಲ್ಲಿ ಒಂದು ಕ್ಲಿನಿಕ್ನಲ್ಲಿ ಇರಬೇಕಾದ ಎಲ್ಲ ಮೂಲಭೂತ ಸೌಕರ್ಯಗಳೂ ಇವೆ. ರಾಜ್ಯ ಸರ್ಕಾರ ಈ ಬಸ್ಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇಟ್ಟಿದೆ. ಇದೀಗ ಹರ್ಯಾಣದಾದ್ಯಂತ ಮೊಬೈಲ್ ಕ್ಲಿನಿಕ್ಗಳಾಗಿ ಕಾರ್ಯನಿರ್ವಹಿಸುತ್ತಿರುವ 15 ಬಸ್ಗಳನ್ನು ನಗರ ಹಾಗೂ ಗ್ರಾಮಾಂತರ ಭಾಗಕ್ಕೆ ಸಮನಾಗಿ ಹಂಚಲಾಗಿದೆ.
'ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಬೇಡ': ಡಿಸಿಎಂ ಅಶ್ವತ್ಥನಾರಾಯಣ
ನಗರ ಪ್ರದೇಶಗಳಲ್ಲಿ ನಾಲ್ಕು ಬಸ್ಗಳು ಸಂಚರಿಸಿದರೆ, ಗ್ರಾಮಾಂತರ ಭಾಗದಲ್ಲಿ 11 ಬಸ್ಗಳು ಸಂಚಾರ ಮಾಡುತ್ತವೆ. ಒಂದೆಡೆ ನಿಲ್ಲದೆ ನಗರದ ವಿವಿಧ ಭಾಗಗಳಲ್ಲಿ ಸಂಚಾರ ಮಾಡೋದ್ರಿಂದ ಆರೋಗ್ಯ ಸೇವೆಯ ತುರ್ತು ಅಗತ್ಯ ಇರುವ ಜನರನ್ನು ಸುಲಭವಾಗಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ತಲುಪಬಹುದಾಗಿದೆ.
ಕೊರೊನಾ ವೈರಸ್ ಲಾಕ್ಡೌನ್ ಜಾಗೃತಿಗೆ ಪೊಲೀಸರಿಂದ ಆರ್ಕೆಸ್ಟ್ರಾ ಅಭಿಯಾನ..!
ಹರ್ಯಾಣ ರಾಜ್ಯದಲ್ಲಿ 185 ಕೊರೊನಾ ವೈರಸ್ ಸೋಂಕಿತರು ಈವರೆಗೆ ಪತ್ತೆಯಾಗಿದ್ದಾರೆ. ಈ ಪೈಕಿ 29 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮೂವರು ಸಾವಿಗೀಡಾಗಿದ್ದಾರೆ ಎಂದು ಹರ್ಯಾಣದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕೊರೊನಾ ಲಾಕ್ಡೌನ್: ಇಷ್ಟು ದಿನ ಮಾಡಿದ್ದೇನು..? ಮುಂದೆ ಮಾಡಬೇಕಾದ್ದೇನು..?